Thursday, February 13, 2025

*ಏಕಮುಖಿ ಪಂಚಮುಖಿ ಸಹಸ್ರಮುಖಿ*

ಚೇತನವಾಗಿ ಹೊಂದಿ ರೂಪಾಂತರ
ನೆಲ ಮುಗಿಲು ಒಂದಾಗುವಂತೆ ಬೆಳೆದು ಬಿಟ್ಟ|
ಛಂಗನೆ ಹಾರಿ ಮಹಾಸಾಗರ ದಾಟಿ
ವೀರಾವೇಶದಿಂದ ಎದ್ದು ನಿಂತು ಬಿಟ್ಟ||
ಆರಾಧ್ಯ ದೈವವನ್ನೇ ಸೋಲಿಸಿ ಗೆದ್ದ
ರಾಮ ಬಂಟನಿವನು ಶಕ್ತಿಗೆ ಹೆಸರು|
ಹಿಡಿದರೆ ಗದೆ ಭೂಮಿ ಆಟದ ಅಂಗಳ
ರಾಮ ನಾಮವೂ ಆತನ ಉಸಿರು||
ರಾಮನಿರದ ಊರುಂಟು|
ಹನುಮನಿರದೆ ಏನುಂಟು||
ಜೈ ಆಂಜನೇಯ| ಜಯ ಜಯ ಆಂಜನೇಯ||

ಹಣ್ಣೆಂದು ಭಾವಿಸಿ ಬಾಲ್ಯದಲ್ಲಿಯೇ
ಸೂರ್ಯನನ್ನೇ ಹಿಡಿಯ ಹೊರಟ ಅಂಜನಿಪುತ್ರ|
ಹೆದರಿ ದೇವತೆಗಳು ಬೀಸಿದರೂ ಆಯುಧ
ಧೃತಿಗೆಡದ ಹುಟ್ಟಾ ಯೋಧ ವಾಯುಪುತ್ರ||
ರಾಮನ ಬದುಕಲ್ಲಿ ಹನುಮನ ಪ್ರವೇಶ
ಅಸಾಧ್ಯ ಸಾಹಸಗಳ ಯುಕ್ತಿಯ ಗಾಥೆ|
ಪರಿಸ್ಥಿತಿ ತಿಳಿಯಾಗಿಸಿದ ಸುಂದರ ಕಾಂಡ
ಲಂಕೆಯ ದಂಗಾಗಿಸಿದನು ತೆಗೆದು ಕ್ಯಾತೆ||
ರಕ್ಷೆ ಇಂವ ಸಮೃದ್ಧಿ ಇಂವ ಶೌರ್ಯ ಇಂವ||
ಜೈ ಆಂಜನೇಯ| ಜಯ ಜಯ ಆಂಜನೇಯ||

ಎಲ್ಲೆಡೆ ಹುಡುಕಿ ಕಂಡನು ಸೀತೆಯ
ಹೆಣ್ಣೆಂದರೆ ಮಾತೇ ಸಾರಿದನು ಜಗಕ್ಕೆ|
ಜವಾಬ್ದಾರಿ ನಿಭಾಯಿಸುವ ಚಾಣಕ್ಯ
ನಿಷ್ಠನಿವನು ಈಡೇರಿಸಲು ಹಾರೈಕೆ||
ಸಂಜೀವಿನಿ ಪರ್ವತವನ್ನೇ ಒಂದೇ ಏಟಿಗೆ
ಎತ್ತಿ ತಂದ ಆಪತ್ಬಾಂಧವ ವಜ್ರಕಾಯ|
ಹಾಕಿಕೊಂಡರೆ ದುಷ್ಟರು ಇವನ ಎದುರು
ಗ್ರಹಗತಿ ಗ್ರಹಾಚಾರಗಳೇ ಅಯೋಮಯ||
ಏಕಮುಖಿ ಪಂಚಮುಖಿ ಸಹಸ್ರಮುಖಿ||
ಜೈ ಆಂಜನೇಯ| ಜಯ ಜಯ ಆಂಜನೇಯ||

 

*ಬಸವರಾಜ ಕಾಸೆ*

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...