Thursday, June 26, 2025

*ಗಜಲ್*- *ಅಪರೂಪದ ಸಮಾಗಮ*

ಸಂಗಾತಿಯ ವಿಷಯದಲ್ಲಿ ಉಂಟು ನೂರಾಸೆ ಕನಸುಗಳು ಅಂದು ಇಂದು ಎಂದೂ/
ಇರಬೇಕು ಇಚ್ಛೆಗಳಿಗೆ ತಕ್ಕ ಹಾಗೆ ಪೂರೈಸುವಂತೆ ಆಕಾಂಕ್ಷೆಗಳ ಅದು ಇದು ಎಂದೂ//

ಕಾಲವೊಂದಿತ್ತು ಅಪ್ಪ ಹಾಕಿದ ಆಲದ ಮರಕ್ಕೆ ತಪ್ಪಿಸಲಾಗದೆ ನೇಣು ಹಾಕಿಕೊಳ್ಳಲೆಂದು/
ಯಾರು ಬೀಳುವರು ಇನ್ನೂ ಹಗಲು ಕಂಡ ಬಾವಿಗೆ ನೋಡದೆ ಹಿಂದೂ ಮುಂದು ಎಂದೂ//

ಹಾಗೆ ಬಂದ ಪರಿಚಿತರಲ್ಲಿ ಇಷ್ಟ ಆಗಿ ಯಾರೋ ಒಬ್ಬರು ಮೊಳಕೆಯೊಡೆಯುವುದು ಪ್ರೀತಿ/
ಇರದೇ ಯಾರ ಒತ್ತಾಯ ಸ್ವೀಕಾರ ಯೋಗ್ಯ ಪರಸ್ಪರ ಆಯ್ಕೆ ನಡೆದು ನುಡಿದು ಎಂದೂ//

ನೇರ ಮದುವೆ ಎಷ್ಟು ವ್ಯವಸ್ಥಿತ ಅಲ್ಪವಾದರೂ ಅರಿತವರಾರು ಮುಂಚೆ ಒಬ್ಬರನ್ನೊಬ್ಬರು/
ಭಿನ್ನ ಅಭಿಪ್ರಾಯ ಹೊಂದಾಣಿಕೆ ಕೊರತೆ ಎಂದೋ ಮಾಯ ಮೊಗೆದು ತಿಳಿದು ಎಂದೂ//

ಗೊಡ್ಡು ಸಂಪ್ರದಾಯಗಳ ಹಿರಿಯರ ಗೊಡವೆ ಮುಗ್ಧ ಮನಸ್ಸುಗಳ ಮೊದಲ ತಲ್ಲಣ/
ಇದ್ದರೇನು ತೊಟ್ಟರೆ ಪಣ ಎದುರಿಸಿ ನಿಲ್ಲುವ ಛಾತಿ ಆಗ ಕರಗತ ನೊಂದು ಬೆಂದು ಎಂದೂ//

ನನಗೆ ನೀನು ನಿನಗೆ ನಾನು ಆಗಿ ಹೊಣೆ ಕಂಡುಕೊಳ್ಳುವ ತುಮುಲ ಜೀವನ ಪಥ/
ಇಷ್ಟ ಕಷ್ಟಗಳ ಸ್ಪಷ್ಟ ಅರಿವು ಸಾಗಲು ಜೊತೆಗೆ ತೊಡಕಿಲ್ಲದಂತೆ ಎದ್ದು ಬಿದ್ದು ಎಂದೂ//

ಕಠಿಣ ನಿರ್ಬಂಧಗಳಿಲ್ಲದ ಆತ್ಮೀಯ ಸಲಹೆಗಳ ಪರಿಪಾಠ ಗೌರವಿಸುತ್ತಾ ಒಬ್ಬರನ್ನೊಬ್ಬರು/
ನಿವಾರಿಸಿಕೊಂಡು ಎಲ್ಲ ಸಮಸ್ಯೆ ಬಾರದಂತೆ ಬಿರುಕು ನಡೆಯುವ ಗೆದ್ದು ಜಿದ್ದು ಎಂದೂ//

ಸುಳಿಯದಂತೆ ಕೊಂಕು ಬಿಂಕು ಅಕ್ಕರೆ ಕಾಳಜಿಯ ಸಮಾಗಮವಿದೂ ಒಲವ ಸೇತುವೆ/
ಪೂರ್ಣ ಅರ್ಥದ ಪ್ರೇಮ ವಿವಾಹ ಅಪೂರ್ವ ಬಾಂಧವ್ಯವಿದೂ ನಂದು ನಿಂದು ಎಂದೂ//

 

*ಬಸವರಾಜ ಕಾಸೆ*

More from the blog

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...