Sunday, February 9, 2025

*ಗಜಲ್*- *ಅಪರೂಪದ ಸಮಾಗಮ*

ಸಂಗಾತಿಯ ವಿಷಯದಲ್ಲಿ ಉಂಟು ನೂರಾಸೆ ಕನಸುಗಳು ಅಂದು ಇಂದು ಎಂದೂ/
ಇರಬೇಕು ಇಚ್ಛೆಗಳಿಗೆ ತಕ್ಕ ಹಾಗೆ ಪೂರೈಸುವಂತೆ ಆಕಾಂಕ್ಷೆಗಳ ಅದು ಇದು ಎಂದೂ//

ಕಾಲವೊಂದಿತ್ತು ಅಪ್ಪ ಹಾಕಿದ ಆಲದ ಮರಕ್ಕೆ ತಪ್ಪಿಸಲಾಗದೆ ನೇಣು ಹಾಕಿಕೊಳ್ಳಲೆಂದು/
ಯಾರು ಬೀಳುವರು ಇನ್ನೂ ಹಗಲು ಕಂಡ ಬಾವಿಗೆ ನೋಡದೆ ಹಿಂದೂ ಮುಂದು ಎಂದೂ//

ಹಾಗೆ ಬಂದ ಪರಿಚಿತರಲ್ಲಿ ಇಷ್ಟ ಆಗಿ ಯಾರೋ ಒಬ್ಬರು ಮೊಳಕೆಯೊಡೆಯುವುದು ಪ್ರೀತಿ/
ಇರದೇ ಯಾರ ಒತ್ತಾಯ ಸ್ವೀಕಾರ ಯೋಗ್ಯ ಪರಸ್ಪರ ಆಯ್ಕೆ ನಡೆದು ನುಡಿದು ಎಂದೂ//

ನೇರ ಮದುವೆ ಎಷ್ಟು ವ್ಯವಸ್ಥಿತ ಅಲ್ಪವಾದರೂ ಅರಿತವರಾರು ಮುಂಚೆ ಒಬ್ಬರನ್ನೊಬ್ಬರು/
ಭಿನ್ನ ಅಭಿಪ್ರಾಯ ಹೊಂದಾಣಿಕೆ ಕೊರತೆ ಎಂದೋ ಮಾಯ ಮೊಗೆದು ತಿಳಿದು ಎಂದೂ//

ಗೊಡ್ಡು ಸಂಪ್ರದಾಯಗಳ ಹಿರಿಯರ ಗೊಡವೆ ಮುಗ್ಧ ಮನಸ್ಸುಗಳ ಮೊದಲ ತಲ್ಲಣ/
ಇದ್ದರೇನು ತೊಟ್ಟರೆ ಪಣ ಎದುರಿಸಿ ನಿಲ್ಲುವ ಛಾತಿ ಆಗ ಕರಗತ ನೊಂದು ಬೆಂದು ಎಂದೂ//

ನನಗೆ ನೀನು ನಿನಗೆ ನಾನು ಆಗಿ ಹೊಣೆ ಕಂಡುಕೊಳ್ಳುವ ತುಮುಲ ಜೀವನ ಪಥ/
ಇಷ್ಟ ಕಷ್ಟಗಳ ಸ್ಪಷ್ಟ ಅರಿವು ಸಾಗಲು ಜೊತೆಗೆ ತೊಡಕಿಲ್ಲದಂತೆ ಎದ್ದು ಬಿದ್ದು ಎಂದೂ//

ಕಠಿಣ ನಿರ್ಬಂಧಗಳಿಲ್ಲದ ಆತ್ಮೀಯ ಸಲಹೆಗಳ ಪರಿಪಾಠ ಗೌರವಿಸುತ್ತಾ ಒಬ್ಬರನ್ನೊಬ್ಬರು/
ನಿವಾರಿಸಿಕೊಂಡು ಎಲ್ಲ ಸಮಸ್ಯೆ ಬಾರದಂತೆ ಬಿರುಕು ನಡೆಯುವ ಗೆದ್ದು ಜಿದ್ದು ಎಂದೂ//

ಸುಳಿಯದಂತೆ ಕೊಂಕು ಬಿಂಕು ಅಕ್ಕರೆ ಕಾಳಜಿಯ ಸಮಾಗಮವಿದೂ ಒಲವ ಸೇತುವೆ/
ಪೂರ್ಣ ಅರ್ಥದ ಪ್ರೇಮ ವಿವಾಹ ಅಪೂರ್ವ ಬಾಂಧವ್ಯವಿದೂ ನಂದು ನಿಂದು ಎಂದೂ//

 

*ಬಸವರಾಜ ಕಾಸೆ*

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...