Tuesday, July 1, 2025

ಅಪ್ಪುಗೆಯ ಒಡನಾಟ

ಮುದ ನೀಡುವ ಮುದ್ದು ಮನದನ್ನೆ
ದಿನದಿಂದ ದಿನಕ್ಕೆ ನೀ ಸುಂದರ
ನಿನ್ನ ಆತ್ಮೀಯ ಅಪ್ಪುಗೆಯ ಒಡನಾಟ
ಜೀವನವೀಗ ಸುಖ ಶಾಂತಿಯ ಸಾಗರ

ನಿನ್ನಿಂದ ಪರಿಪೂರ್ಣನಾಗುವೆ ನಾ
ಬರಸೆಳೆದು ಬಳ್ಳಿಯಂತೆ ನೀ ಅಪ್ಪಿದೊಡನೆ
ಎತ್ತಕೊಂಡು ಮುದ್ದಾಡುವೆ ನಿನ್ನ
ಒಂದಿಷ್ಟು ತಡ ಮಾಡದೆ ಬಂದೊಡನೆ

ಬಾಹುಗಳಲ್ಲಿ ಬಂಧನವಾಗುವಂತೆ ಕೆಣಕಿ
ಎದೆಯ ರೋಮದಲ್ಲಿ ಚೆಲ್ಲಾಟವಾಡು
ಭುಜಕ್ಕೆ ಒರಗಿ ಇದ್ದಕ್ಕಿದ್ದಂತೆ
ಹಿತವಾಗಿ ಎಲ್ಲೆಂದರಲ್ಲಿ ಕಚಗುಳಿ ಇಡು

ಮೆಲ್ಲನೆ ಗಿಲ್ಲು ಹಾಗೆ ಸ್ವಲ್ಪ
ಚುರುಕು ಮುಟ್ಟುವಂತೆ ಆಗಿ ಚಿಲಿಪಿಲಿ
ತುದಿ ಮೂಗು ಕೆಂಪು ದಾಸವಾಳ
ಸುವಾಸಿಸುವಂತೆ ಸ್ಪರ್ಶಿಸಿಗೊಳಿಸು ಗಲಿಬಿಲಿ

ರಸಮಯ ಕ್ಷಣಗಳ ರೋಮಾಂಚನ
ಹೆಚ್ಚಾಗುವಂತೆ ಸಾಗಲಿ ಸರಸ
ನಿನ್ನ ಕೋಮಲ ಕೆನ್ನೆಯು ತಾಗಿ
ತೋರ್ಪಡಿಸುವೆ ನಕ್ಕು ಚೆಂದದ ಆವೇಶ

ಅನುಸರಿಸುವೆ ನಿನ್ನದೇ ಶೈಲಿ
ಮುಂದುವರಿಸುತ್ತಲೇ ಸಹಕರಿಸುತ್ತಿರು ಹೀಗೆ
ಬೆರಳುಗಳ ಸಹಿತ ಬೆಸೆದು
ಬೆವರ ಬಸಿದರೂ ಸುರಿಸು ಮುತ್ತುಗಳ ಹಾಗೆ


ಬಸವರಾಜ ಕಾಸೆ 

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...