Wednesday, February 12, 2025

ಅಪ್ಪುಗೆಯ ಒಡನಾಟ

ಮುದ ನೀಡುವ ಮುದ್ದು ಮನದನ್ನೆ
ದಿನದಿಂದ ದಿನಕ್ಕೆ ನೀ ಸುಂದರ
ನಿನ್ನ ಆತ್ಮೀಯ ಅಪ್ಪುಗೆಯ ಒಡನಾಟ
ಜೀವನವೀಗ ಸುಖ ಶಾಂತಿಯ ಸಾಗರ

ನಿನ್ನಿಂದ ಪರಿಪೂರ್ಣನಾಗುವೆ ನಾ
ಬರಸೆಳೆದು ಬಳ್ಳಿಯಂತೆ ನೀ ಅಪ್ಪಿದೊಡನೆ
ಎತ್ತಕೊಂಡು ಮುದ್ದಾಡುವೆ ನಿನ್ನ
ಒಂದಿಷ್ಟು ತಡ ಮಾಡದೆ ಬಂದೊಡನೆ

ಬಾಹುಗಳಲ್ಲಿ ಬಂಧನವಾಗುವಂತೆ ಕೆಣಕಿ
ಎದೆಯ ರೋಮದಲ್ಲಿ ಚೆಲ್ಲಾಟವಾಡು
ಭುಜಕ್ಕೆ ಒರಗಿ ಇದ್ದಕ್ಕಿದ್ದಂತೆ
ಹಿತವಾಗಿ ಎಲ್ಲೆಂದರಲ್ಲಿ ಕಚಗುಳಿ ಇಡು

ಮೆಲ್ಲನೆ ಗಿಲ್ಲು ಹಾಗೆ ಸ್ವಲ್ಪ
ಚುರುಕು ಮುಟ್ಟುವಂತೆ ಆಗಿ ಚಿಲಿಪಿಲಿ
ತುದಿ ಮೂಗು ಕೆಂಪು ದಾಸವಾಳ
ಸುವಾಸಿಸುವಂತೆ ಸ್ಪರ್ಶಿಸಿಗೊಳಿಸು ಗಲಿಬಿಲಿ

ರಸಮಯ ಕ್ಷಣಗಳ ರೋಮಾಂಚನ
ಹೆಚ್ಚಾಗುವಂತೆ ಸಾಗಲಿ ಸರಸ
ನಿನ್ನ ಕೋಮಲ ಕೆನ್ನೆಯು ತಾಗಿ
ತೋರ್ಪಡಿಸುವೆ ನಕ್ಕು ಚೆಂದದ ಆವೇಶ

ಅನುಸರಿಸುವೆ ನಿನ್ನದೇ ಶೈಲಿ
ಮುಂದುವರಿಸುತ್ತಲೇ ಸಹಕರಿಸುತ್ತಿರು ಹೀಗೆ
ಬೆರಳುಗಳ ಸಹಿತ ಬೆಸೆದು
ಬೆವರ ಬಸಿದರೂ ಸುರಿಸು ಮುತ್ತುಗಳ ಹಾಗೆ


ಬಸವರಾಜ ಕಾಸೆ 

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...