Saturday, February 8, 2025

ನೀಳ್ಗವಿತೆ


ಹೊಸ ವರ್ಷಕ್ಕೆ ಹೊಸ ಯೋಜನೆ

ಬಿಟ್ಟು ಬಿಡಲು ಹಲವಾರು
ರೂಢಿಸಿಕೊಳ್ಳಲು ಕೆಲವು
ತಿದ್ದಿಕೊಳ್ಳಲು ಒಂದಿಷ್ಟು
ಬದಲಾಗಲು ಬೆಟ್ಟದಷ್ಟು
ಹೊಸ ವರ್ಷವೇ ಬರಬೇಕೆಂದು
ತುಂಬಾ ದಿನಗಳಿಂದ ಕಾಯುತ್ತಿದ್ದ

ಅಗೋ ಬಂದೇ ಬಿಟ್ಟಿತು ಹೊಸ ವರ್ಷ
ಹಿಂದಿನ ದಿನವೇ ಸಿದ್ದಪಡಿಸಿ ಇಡಲು
ಅಣಿಯಾಗಿದ್ದ ಬಹು ಉದ್ದವಾದ ಪಟ್ಟಿಯೊಂದನ್ನು
ಆದರೆ ಸಮಯದ ಕೊರತೆ
ಹಳೆ ವರ್ಷ ಬೀಳ್ಕೊಡುಗೆಯ ಕಾರಣ
ಆಚರಿಸಲು ಹೊಸ ವರ್ಷದ ಸಂಭ್ರಮ

ಬರೆದು ಇಟ್ಟರೆ ಆಯಿತು ಆಮೇಲೆ
ಎಂದು ಗೊಣಗಿಕೊಂಡು ನಡೆದ
ಆ ಕ್ಷಣವೇ ಅಲ್ಲಾಡಿತು ಬುನಾದಿ
ಭದ್ರವಾಗಿ ಹಾಕುವ ಮುನ್ನವೇ

ಎಗ್ಗಿಲ್ಲದೆ ಕುಡಿದು ತೂರಾಡಿ
ಮಜಾ ಮಾಡಿ ಬಂದ ಬಳಿಕವೂ
ಹಾಗೆ ಇರಬೇಕು ಹೀಗೆ ಮಾಡಬೇಕು ಎಂದು
ಮತ್ತೆ ಅದನ್ನೆಲ್ಲಾ ಮನನ ಮಾಡಿಕೊಂಡ
ಮರುದಿನ ಎದ್ದ ಕೂಡಲೇ
ಅದರಂತೆ ಶಿಸ್ತಿನಿಂದ ನಡೆಯಬೇಕು
ಎಂದೇ ದಿನ ಆರಂಭಿಸಿದ

ಹೌದು ಹೋದ ವರ್ಷವೂ
ಅವನು ಹೀಗೆ ಮುಂದಿನ ವರ್ಷಕ್ಕೆಂದೇ
ಅಚ್ಚುಕಟ್ಟಾಗಿ ಯೋಜನೆಗಳನ್ನು ಹಾಕಿಕೊಂಡಿದ್ದ
ಆದರೆ ಒಂದೆರಡು ದಿನಗಳ ನಂತರ
ಮಾಡಿದರೆ ಆಯ್ತು ಬಿಟ್ಟರೆ ಆಯ್ತು
ಎನ್ನುತ್ತಲೇ ನಿರ್ಲಕ್ಷಿಸಿ ತಳವೂರುವ ಮೊದಲೇ
ತನ್ನ ನಿರ್ಧಾರ ಪ್ರತಿಜ್ಞೆಗಳನ್ನು
ತಾನೇ ಅಲ್ಲಾಡಿಸಿ ಬೀಳಿಸಿ ಬಿಡುತ್ತಿದ್ದ
ಮತ್ತೆ ಜೀವನ ಎಂದಿನಂತೆ ಬೇಕಾಬಿಟ್ಟಿ

ಅಯ್ಯೋ ಹಾಗೆ ಅಂದ್ಕೊಂಡಿದ್ದೆ
ಅಯ್ಯಯ್ಯೋ ಹೀಗೆ ಅಂದ್ಕೊಂಡಿದ್ದೆ
ಪಶ್ಚಾತಾಪ ಪಟ್ಟು ಶಪಿಸಿಕೊಳ್ಳುತ್ತಲೇ
ಇನ್ನಾದರೂ ಬದಲಾಗಬೇಕು ಎಂದುಕೊಂಡು
ಮತ್ತೆ ಮತ್ತೆ ಹಾಗೆ ಇರುತ್ತಿದ್ದ

ಹೀಗೆ ಎಷ್ಟು ವರ್ಷಗಳು ಕಳೆದು ಹೋದವೋ
ಅವನಿಗೂ ಸಹ ಇಂದಿಗೂ ಗೊತ್ತಿಲ್ಲ
ಕೇಳಿದರೆ ಈ ವರ್ಷ ಪಕ್ಕಾ ಗುರು
ಎಂದು ನಗುತ್ತಲೇ ಸುಮ್ಮನಾಗುವ
ಆತ ಮಹಾ ಪ್ರಚಂಡ ಬುದ್ಧಿವಂತ
ಹೋದ ವರ್ಷವೂ ನನಗೆ
ಹೀಗೆ ಹೇಳಿ ಆತ ಹಾಗೆ ಉಳಿದರೂ
ಮತ್ತೆ ನೆನಪಿಸುವ ನಾ ದೊಡ್ಡ ದಡ್ಡ ಶಿಖಾಮಣಿ

ಅಷ್ಟಕ್ಕೂ ಅಂದ್ಕೋಡಿದ್ದು ಏನೆಂದು ಯೋಚಿಸಿದರೆ
ಅವು ಅವೇ ನಾವೆಲ್ಲರೂ
ಪ್ರತಿ ಸಲ ಅಂದುಕೊಳ್ಳುವಂತಹ
ಹಳೆ ಚಿಕ್ಕ ಚೊಕ್ಕ ಜೀವನ ವಿಧಾನಗಳೇ
ಹಾಗಾದರೆ ಕಾರ್ಯರೂಪಕ್ಕೆ
ತರುವ ನಿಟ್ಟಿನಲ್ಲಿ ಎಡವುತ್ತಿರುವುದೆಲ್ಲಿ

ಮತ್ತೆ ಹೊಳೆಯುವವು ಅವೇ ಕಾರಣಗಳು
ಅಂದ್ಕೊಂಡು ಸುಮ್ಮನಾಗುವ ಹಳಸಲು ನೀತಿ
ಅದಕ್ಕೆ ಬೇಕಾದ ಕಠಿಣ ಬದ್ದತೆ
ರೂಡಿಸಿಕೊಳ್ಳಲು ಮಾಡುವ ವಿಫಲ ಪ್ರಯತ್ನ

ಮನಸ್ಸನ್ನು ತಹಬದಿಗೆ ತಂದು ಸಿದ್ದಗೊಳಿಸದೆ
ಹರಿಯ ಬಿಡುವುದು ಎಂದಿನಂತೆ ಎಲ್ಲೆಂದರಲ್ಲಿ
ಸ್ವಂತ ನಿರ್ಬಂಧಗಳನ್ನು ನಿರ್ಬಂಧಿಸುತ್ತಲೇ
ನಡೆಯುವುದು ಮನ ಬಂದಂತೆ

ಹೌದು ಅವನು ಮಾತ್ರವಲ್ಲ
ನಾನು ಸಹ ಹಾಗೆ
ಅವನು ಎನ್ನುವವನು ಕೇವಲ ನನ್ನ ರೂಪಕ

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...