Thursday, February 13, 2025

*ಗಜಲ್ 85*

ಹುಡುಗಿರನ್ನೆಲ್ಲಾ ನಿಲ್ಲಿಸಿ ಸಾಲಿನಲ್ಲಿ ಕಣ್ಣು ಹೊಡೆಯುವ ಆಸೆ ಕನಸಿನಲ್ಲಿ/
ಅಂದ ನೋಡಿ ತೆಗೆದುಕೊಳ್ಳುವ ಮಜಾ ಒಂಥರ ಎನಿಸುವುದು ಮನಸ್ಸಿನಲ್ಲಿ//

ಚೆಂದವಿದ್ದರೂ ತಲೆ ತಗ್ಗಿಸಿ ನಡೆಯುವ ಗೌರಮ್ಮದಿಂರು ಬಹಳ ಬೋರು/
ವರ್ಷವಾದರೂ ಮುಖ ನೋಡುವ ಕಸರತ್ತು ತಾಳಲಾಗದು ನಮಗಿಲ್ಲಿ//

ಬೋಲ್ಡ್ ಬೆಡಗಿಯರ ಅರೆಬರೆ ಬಟ್ಟೆ ನಮ್ಮ ಖುಷಿಗೆ ಎಡೆಬಿಡದೆ ಲಗ್ಗೆ/
ಗುಂಡಿಗೆ ಎಂದರೆ ಅವರದೇ ಶಿಷ್ಯ ಮಂಡಿಗೆ ತಿನ್ನುವೆವು ನಾವಿಲ್ಲಿ//

ವ್ಯಾರಾಯಿಟಿ ವ್ಯಾರಾಯಿಟಿ ಸ್ಟೈಲನಲ್ಲಿ ಥಳುಕು ಬಳುಕು ಬೆಕ್ಕಿನ ನಡಿಗೆ/
ಸಿಕ್ಕಾಪಟ್ಟೆ ಸೆಲ್ಫಿ ಹುಚ್ಚು ಮಸ್ತ್ ಪೋಜು ಕೊಟ್ಟಾಗ ನಮ್ಮ ಕ್ರೇಜ್ ಕಿಚ್ಚಿನಲ್ಲಿ//

ಮೂರ್ಖ ಸುಂದರಿಯರ ಪೆದ್ದು ನಗೆಗೆ ನೂರು ಬಾರಿ ಬಿದ್ದೇಳುವ ಸಡಗರ/
ಮೇಕಪ್ ಇಲ್ಲದೆ ಎದುರಾದಾಗ ನಾವಾಗಿ ಕಮಂಗಿಗಳು ತುರ್ತು ಸ್ಥಿತಿಯಲ್ಲಿ//

ವಾರೆಗಣ್ಣಲ್ಲಿ ನೋಡಿದಾಗ ಶುರುವಾದ ನಡುಕ ನಿಂತಿಲ್ಲ ನೋಡಿ ಇಲ್ಲಿವರೆಗೂ/
ಬೈಯುವ ಲುಕ್ಕು ಹಾರಿಸುವ ಹುಬ್ಬು ಕಂಡರೆ ಇಷ್ಟ ಮೋಹದ ಅಲೆಯಲ್ಲಿ //

ಚುರುಕು ಗೂಬೆಗಳ ತರಲೆ ಮಾತುಗಳು ಆಗುವುದು ಎಂದು ನಮಗೂ ಹಿತ/
ಕಟ್ಟಿ ಹಾಕುವರು ನಿರ್ಬಂಧಗಳಲ್ಲಿ ಅದಕ್ಕೆ ಚಿಂತೆ ಬೀಳಲು ಕಷ್ಟ ಪ್ರೀತಿಯಲ್ಲಿ//

 ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...