Thursday, February 13, 2025

ಗಜಲ್ 75

ಆಗ ತಾನೇ ಆರಂಭ ತಾಜಾ ಎನಿಸುವ ಹಿಗ್ಗು ಗುಲ್ ಮೊಹರ್ ಮೊಗ್ಗು/
ಸೀಮಿತ ಅವಧಿ ಎಂತಹ ಲವಲವಿಕೆಯ ಗುಂಗು ಗುಲ್ ಮೊಹರ್ ಸೋಗು//

ಮುಂಜಾವು ಅರಳಿ ಮನ ನಳನಳಿಸಿ ಮಧ್ಯಾಹ್ನ ಸೂರೆಗೈಯುವ ಸಿಗ್ಗು/
ಸಂಜೆ ಅಷ್ಟೊತ್ತಿಗೆ ಉತ್ಸಾಹ ಬಾಡುವ ಎಗ್ಗು ಗುಲ್ ಮೊಹರ್ ಪಿಡುಗು//

ಸುಂದರ ಕೆಂಬಣ್ಣ ದಾರಿಯುದ್ದಕ್ಕೂ ಮೋಹಕ ಸಾಗಿದಷ್ಟು ನಸುನಗು/
ಕ್ಷಣ ಕ್ಷಣವೂ ವಿಚಲಿತ ಚಂಚಲಗಳ ಮೆರಗು ಗುಲ್ ಮೊಹರ್ ಬೆರಗು//

ಬಣ್ಣದ ಹೂಗಳ ಮೆರೆಯುವ ಸೌಂದರ್ಯ ಆಕರ್ಷಕ ಖುಷಿಯ ಪ್ರಜ್ಞೆ ಕೊಡಗು/
ಗಾಳಿಗೆ ಬಾಗಿ ಚಳಿಗೆ ಕುಗ್ಗಿ ಸ್ವಂತಿಕೆಯ ಗುಡುಗು ಗುಲ್ ಮೊಹರ್ ಸೊಬಗು//

ದಳಗಳ ಬಿಡಿಸುವ ಕೋಳಿ ಜಗಳ ಆಗಾಗ ಮರದಡಿ ಉದುರಿದ ಹಾಸಿನ ರಂಗು/
ವಾಲುವ ಚಿತ್ತ ಸೆಳೆಯುವ ಕಣ್ಮನ ಬಿಡದ ಕೆಲಸಗಳ ಒಗ್ಗು ಗುಲ್ ಮೊಹರ್ ಕೂಗು//

ಮುಡಿ ಏರದೆ ಬಳಕೆಯಾಗದೆ ಉಳಿದರೂ ಇರುವಷ್ಟು ನೆಮ್ಮದಿ ಗೊಂಚಲಿನ ತೇಗು/
ಎದ್ದು ಬಿದ್ದು ಸೋತು ಗೆದ್ದು ಬದುಕುವ ಪ್ರೀತಿಗೂ ಗುಲ್ ಮೊಹರ್ ಈವರೆಗೂ//

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...