Wednesday, June 25, 2025

ಗಜಲ್ 68

ಕೆದರಿದ ಕೂದಲು ಕುರುಚಲು ಗಡ್ಡ ಕಾಂತಿ ಹೀನ ಕಣ್ಣು ಸಿಗದ ಗುರುತು ಇವತ್ತು/
ನೀನೇ ಪ್ರಾಣ ಎಂದುಕೊಂಡ ಜೀವವಾ ಇಷ್ಟು ಬೇಗ ಮರೆತು ಹೋದ ಕುತ್ತು//

ಅಂದುಕೊಂಡಿದ್ದೆ ಮತ್ತೆ ಸಿಗದೆಂದು ನಿನ್ನ ದರ್ಶನ ಭಾಗ್ಯ ಸಿಕ್ಕಿಯೇ ಬಿಟ್ಟಿಯಾ/
ನೋಡಿಯೂ ನೋಡದಂತೆ ಹೋಗಲು ತಡವರಿಸಿದ ನಡೆ ಸ್ತಬ್ಧ ಕ್ಷಣ ಹೊತ್ತು//

ನನ್ನ ಪಾಡು ಬಿಡು ಬೇಡವೆಂದರೂ ಏನೋ ನೀ ದಯೆ ಪಾಲಿಸಿದ ವರ/
ಕೇಳಿಕೊಂಡು ಬಂದಿರಬೇಕು ಇದಕ್ಕೂ ಜಾಗೃತ ಒಳನೋವು ಅನಾಮತ್ತು//

ಮತ್ತೆ ನೋಡದೆ ನಿನ್ನಷ್ಟಕ್ಕೆ ನಡೆ ಮುಂದೆ ನಾ ಬರಲಾರೆ ಎಳ್ಳಷ್ಟೂ ಹತ್ತಿರ/
ಯಾಕೋ ಭಯ ಹೇಗೋ ಇರುವ ಖುಷಿಗೂ ಬಂದರೆ ಕಷ್ಟ ಆಪತ್ತು//

ಕೈ ಕಾಲು ಕೊಸರಾಡಿ ಅಂದು ಜುಮ್ ಎಂದ ಎದೆ ಹಿಡಿದಿದೆ ಇಂದು ಜೋಲು/
ಶಾಖವಿರದ ಉತ್ಪನ್ನ ಹೆಪ್ಪುಗಟ್ಟದು ಮಂಜುಗಡ್ಡೆಯೂ ಹೀಗೆ ಯಾವತ್ತೂ//

ನಿನ್ನಿಂದಲೇ ಬತ್ತಿದ ಕಣ್ಣೀರಿಗೆ ಮತ್ತೆ ಮರುಜನ್ಮ ಸುನಾಮಿಯ ಪ್ರವಾಹ/
ಎಷ್ಟೆಂದು ತಡೆಯಲಿ ಹೋಗು ಅತ್ತು ಬಿಡುವೆ ಕಾಣದಂತೆ ದುಃಖ ನೀರಾದಿತ್ತು//

ಬಸವರಾಜ ಕಾಸೆ

More from the blog

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...