Sunday, February 16, 2025

ಜೊಳ್ಳು ಜೀವನ ಜೋಗ

ಜೋಗು ಜೋಗು ಜೋಳಿಗೆ ಈ ಪ್ರಪಂಚ
ಜಗ್ಗದೆ ಹಾಕುವ ಸೋಗುಗಳು ನೂರಿಲ್ಲಿ
ಎಗ್ಗು ಸಿಗ್ಗುಗಳ ಜೊಳ್ಳು ಹೊರ ಮುಖ
ಜಿಗಿದಾಡಿ ಜೊಲ್ಲು ಸುರಿಸುವ ಜುಗ್ಗರಲ್ಲಿ

ಕೋಟಿ ಇದ್ದು ಇಲ್ಲದೆ ನರಳುವವರು
ಪಡೆಯಲು ನೆಮ್ಮದಿ ಸಿಗದ ಪ್ರೀತಿಗೆ
ಏನು ಇಲ್ಲದೆ ಸುಖವಾಗಿ ಇರುವವರು
ಉಂಟು ಇದ್ದುರಲ್ಲಿಯೆ ಆನಂದ ತಣ್ಣಗೆ

ಒಂದಲ್ಲ ಒಂದಕ್ಕೆ ಬೇಡಲೇಬೇಕಣ್ಣಾ
ಬಂದ ಮೇಲೆ ಇಲ್ಲಿ ಒಬ್ಬರಲ್ಲ ಒಬ್ಬರಿಗೆ
ಜನ್ಮವಿದು ಬಯಸಿ ತಂದ ಒಲವಿನ ಕಕ್ಷೆ
ಕಾಣುವ ದೇವರ ಜೋಲು ಕರುಳಿನ ಭಿಕ್ಷೆ

ನಾನು ನೀಡೆನು ಅಷ್ಟಿಷ್ಟು ಆದದ್ದನ್ನ
ಹಿಡಿದಿದೆ ಜಿಗುಟು ಜುಟ್ಟುಗಳ ಜೋರಿಗೆ
ನೀಡಿರಿ ಕೊಡುಗೆ ಮಾನವೀಯತೆ ಜಾರಿಗೆ
ಜಾಳಿಗೆಗೆ ಸೋಸುವ ಜಿರಲೆಗಳ ಜೀರಿಗೆ

  • ಬಸವರಾಜ ಕಾಸೆ

More from the blog

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...