Thursday, February 13, 2025

ಗಜಲ್ 64

ಉಟ್ಟರೇನು ಯಾವ ಉಡುಗೆ ತೊಡುಗೆ ಹೆಣ್ಣಿನ ಅಂದ ಮಿಂಚುವ ಬೆಳಕು ಸೀರೆ/
ನವಿರು ಭಾವಗಳ ಹೊಮ್ಮಿಸಿ ಮೂಡುವ ಚೆಂದದ ಗುಂಗು ಲಜ್ಜೆಯ ಇಣುಕು ಸೀರೆ//

ಇಳಕಲ್ ಮೈಸೂರು ಮೊಳಕಾಲ್ಮೂರು ಹೆಸರಾದವು ಇಷ್ಟಪಟ್ಟು ತೊಟ್ಟಷ್ಟು ಬಾರಿ/
ಯಾವುದು ರುಚಿಸುವುದು ನಿನಗಾಗಿ ನಿತ್ಯ ನೂರು ವಿನ್ಯಾಸ ಚಂಚಲ ಮಿಣುಕು ಸೀರೆ//

ಕಾಟನ್ ರೇಷ್ಮೆ ಜರತಾರಿ ಸಾವಿರ ವಿಧದ ಬಟ್ಟೆ ನೇಯ್ಗೆಗೆ ನಿನ್ನ ಸಿಂಗಾರದ ಅಮಲು/
ಭಾರದ ಬಯಕೆಗಳ ಹೊತ್ತ ಅತಿ ಹಗುರ ದೊಡ್ಡ ದಡಿಯ ನಿಲ್ಲದ ಬಳುಕು ಸೀರೆ//

ಬಣ್ಣ ಬಣ್ಣಗಳಲ್ಲಿ ಕುಸುರಿ ಕಲೆ ಕಸೂತಿ ಬಂಗಾರದ ಅಂಚು ನಯವಾದ ಸೆಳೆತ/
ಹತ್ತು ಗಜ ಸೀರೆ ಮೇಲ್ಮೈಯ ಹೊಳಪು ಹೊಳೆಯುವ ಬೆಳದಿಂಗಳ ಥಳುಕು ಸೀರೆ//

ವಾರಣಾಸಿ ಬನಾರಸ್ ಕಾಂಜೀವರ್ಂ ಎಲ್ಲ ಬಸಿರು ಜಾರಿ ಹೊದ್ದು ತುಂಬು ತ್ವಚೆ/
ಮತ್ತೆ ಮತ್ತೆ ಆಯ್ಕೆ ಚಂಚಲ ನೆಗೆಯುವ ನಗೆಯ ಅತ್ಯುತ್ಸಾಹದ ಮೆಲುಕು ಸೀರೆ//

ಬಸವರಾಜ ಕಾಸೆ

More from the blog

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...