Tuesday, July 1, 2025

ಎದುರು ನೋಡುತ್ತಿದೆ ಅಳಲು ಕಣ್ಣು

ಚೂರು ಬರಗೆಟ್ಟಿದ್ದರೆ ಚೆಂದ ಇತ್ತೇನೋ
ಸುರಿಸಬಹುದಿತ್ತು ಅನಿಸುತ್ತೆ ಧಾರಾಕಾರ
ಕೊರಗಿ ಕೊನಲಿ ಬರಡಾಗಿದೆ ಅಳು
ತಿಣುಕಿದರೂ ಜಾರದ ಹನಿ ತುಂಬಾ ಭಾರ

ನನ್ನಲ್ಲಿಯೂ ತುಂಬಿ ತುಂಬಿ ಬರುತ್ತಿದ್ದ
ಆ ಕಣ್ಣೀರ ಆಣೆಕಟ್ಟೆಯ ಕಾಲವೊಂದಿತ್ತು
ಹಿಡಿದಿಡಲು ಎಲ್ಲಿ ಸೋತಿತು ಏನೋ
ನೆರೆಯಾಗಿ ಉಕ್ಕಿ ಬಾರದಂತೆ ಜಾರಿತು

ದುರ್ಬಲವಾಗಿತ್ತೆ ಮನ ಎಂದು ಯೋಚಿಸಿ
ಇಂಗಿ ಹೋದ ನೀರಿಗೆ ಚಿಂತೆ ಇಂದಿಗೂ
ಎದುರು ನೋಡುತ್ತಿದೆ ಅಳಲು ಕಣ್ಣು
ಹಗುರಾಗಿಸಲು ಇಂದು ಬರುವುದೆಂದು

ಬೇಸರಗಳ ಮೋಡ ಬಿತ್ತನೆ ದಿನ ನಿತ್ಯ
ಏನು ಮಾಡಲಿ ನೀಗಿಕೊಳ್ಳಲು ನಾನಿದಕ್ಕೆ
ಈ ಕೊರತೆ ಮರು ಕಳಿಸಿದೆ ನೋವು
ಒಳಗಿಂದ ಒಳಗೆ ಅದೆಷ್ಟು ಕಿಡಿಯ ಜ್ವಾಲೆ

ಅದು ಬರುವವರೆಗೆ ಬಾಗದ ಬಳಲಿಕೆ
ವ್ಯರ್ಥ ಮಾಡಬಾರದಿತ್ತು ಬೇಡದಕ್ಕೆ ಹೆಚ್ಚು
ಅಳುವವರ ನೋಡಿ ಪರಿತಪಿಸುವ ಖುಷಿ
ಆ ಭಾಗ್ಯವೂ ಇಲ್ಲದ ಬಾಳು ಹುಚ್ಚು

ಬಸವರಾಜ ಕಾಸೆ

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...