Tuesday, July 1, 2025

ಗಜಲ್ 62

ಗೌತಮನಲ್ಲಿ ಅದೆಷ್ಟು ಭುಗಿಲೆದ್ದ ತಳಮಳ ಪಾಪ ಯುವರಾಜ ಬುದ್ದನಾಗಿ ಬಿಟ್ಟ/
ಭೀಮರಾವನಲ್ಲಿ ಎಂತಹ ಗಾಢ ಅಸಹನೆ ಪಾಪ ಅಂಬೇಡ್ಕರ್ ಬೌದ್ಧನಾಗಿ ಬಿಟ್ಟ//

ಒಕ್ಕಲೆದ್ದೂ ಹರಾಜಾಗಿದ್ದು ಧರ್ಮವೋ ದೇಶವೋ ಜನರೋ ನಿಗೂಢ ಗೊಂದಲ/
ಆಳದಲ್ಲಿ ಅಸಹಿಷ್ಣುತೆ ಮೇಲೆ ಸವರುವ ತುಪ್ಪ ಸಿದ್ದಾಂತಕ್ಕೊಬ್ಬ ಬದ್ದನಾಗಿ ಬಿಟ್ಟ//

ಬಯಸುವ ಕೇಡು ಅಧಿಕಾರದ ಮದ ದುಡ್ಡಿನ ದರ್ಪಗಳಿಗೆ ದೊಡ್ಡತನದ ರುಚಿ/
ಅರಮನೆಯಲ್ಲಿ ಕಾಣದ ಒಳ ಭೇಗುದಿ ನೆಮ್ಮದಿ ಪಡೆದು ಪರಕೀಯನಾಗಿ ಬಿಟ್ಟ//

ಆತನಿಗೆ ಅಂದು ಗೊತ್ತಿತ್ತು ಇಲ್ಲಿನ ಜನರ ಬುದ್ಧಿ ನಡವಳಿಕೆಯ ಪರಮಾವಧಿ/
ಚೀನಾ ಜಪಾನ್ ಶ್ರೀಲಂಕಾ ಆಕ್ರಮಿಸಿ ದ್ವಂದ್ವ ಭಾರತ ರಂಗಸ್ಥಳವನ್ನಾಗಿ ಬಿಟ್ಟ//

ಕೋಟಿ ದೇವರುಗಳ ಲೆಕ್ಕ ಸಿಕ್ಕಿದ ದಿನವು ಸಿಗದ ಡಂಭಾಚಾರ ಜಾತಿಗಳ ಮೊತ್ತ/
ಸೊಕ್ಕು ಅಡಗಿಸುವ ವಿಫಲ ಯತ್ನ ಮಾನವೀಯತೆಯ ಗೋಜಲಾಗಿ ಬಿಟ್ಟ//

ಜ್ಞಾನ ಉಪದೇಶಗಳಿಗೆ ಬೇರೆಯದೇ ಅರ್ಥ ಕಲ್ಪಿಸಿ ಕಳೆಯುವ ಮೂಲಾರ್ಥ/
ತಣ್ಣನೆ ಕ್ರೌರ್ಯ ಸ್ವಾರ್ಥ ತಲ್ಲಿನ ಕ್ರಾಂತಿಯ ಶಿಶು ಆಗಿರದೆ ಶಾಂತಿದೂತನಾಗಿ ಬಿಟ್ಟ//

ಬಸವರಾಜ ಕಾಸೆ

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...