Thursday, February 13, 2025

ಅಸ್ತಿತ್ವದ ಅಸ್ಮಿತೆ ನೀ ಹೆಣ್ಣೆ

ಸೃಷ್ಟಿಯ ಸೊಬಗು ಅಂತರಂಗ ಸೊಗಸು
ಪ್ರತಿ ಹೂಗಳು ಪ್ರತಿನಿಧಿಸುವುದಂತೆ ನಿನ್ನೆ                                                                                         ಬಂದಿಲ್ಲಿ ಚೂರು ಹೇಳೆ ನೀ ಅದು ಹೇಗೆ
ಸ್ವರ್ಗದ ಕಡೆ ಕನಸಿನ ನಡೆ ವಿಹಾರ ಹೆಣ್ಣೆ

ಮಲ್ಲಿಗೆಗೆ ಮುದ ತಂದಿತ್ತು ಮೊಗ್ಗಿನ ಜಡೆ
ಪುಳಕದಿ ನರಳಿತು ಶೃಂಗಾರ ಮೈ ಬೆಣ್ಣೆ
ಮೈಸೂರು ಮಂಗಳೂರು ನಿನ್ನ ತವರೂರು
ಜಾಜಿ ದುಂಡು ಮಲ್ಲಿಗೆ ಚೆಂಡು ನೀ ಹೆಣ್ಣೆ

ಕಣಗಿಲೆ ಕಣ್ಣಿಗೆ ತಂಪು ಸಿದ್ಧ ಕಣ್ಣುಕಪ್ಪು
ಮಿಟುಕಿಸಿದಂತೆ ರೆಪ್ಪೆ ಮಿಡಿಯುವ ಪಕಳೆ
ಉಲಿಯುವ ಎಸಳಿನ ಮಾತೇ ದಾಸವಾಳ
ವಾಸಿಯಾದವು ನೂರು ಹೃದಯ ಬೇನೆ

ಋತುಮಾನ ತಕ್ಕಂತೆ ಬದಲಾಗುವ ಅಂದ
ದಿನದಿಂದ ದಿನಕ್ಕೆ ಗಾಢ ನಿನ್ನ ಚೆಲುವು ನಲ್ಲೆ
ನಕ್ಕಂತೆ ಬೀರುವ ಸುವಾಸನೆ ಕೆಂಡಸಂಪಿಗೆ
ಬಿಳಿ ಬೂದು ಹಳದಿ ಎಲ್ಲಾ ನಿನ್ನ ಬಣ್ಣವೆ

ಸುಗಂಧರಾಜ ಹಬ್ಬಿದ ದ್ರವ್ಯ ಗೊಂಚಲು
ಬಿಸಿಲಿಗೆ ಅರಳಿ ಲಲ್ಲಿ ಹೊಡೆದೆಯಾ ಲಲ್ಲೆ
ನೀನಿಲ್ಲದೆ ಇರದು ಭೂವಿಯಲ್ಲಿ ಏನು
ಹಬ್ಬ ದಿಬ್ಬಗಳ ಇಂಬು ಮೀರಿದ ಎಲ್ಲೆ

ಕಷ್ಟ ನೋವಿಗೆ ಔಷಧಿ ಗುಣಗಳ ತುಂಬೆ
ಹಾವಭಾವ ಹಾರ ಕನಕಾಂಬರ ನಿನ್ನಲ್ಲಿಯೆ
ಕೊಡವಿ ಎದ್ದ ಅಪರೂಪದ ನೀಲಕುರಿಂಜಿ
ಅಸ್ತಿತ್ವದ ಅಸ್ಮಿತೆ ನಾಗಪುಷ್ಪವು ನೀ ಹೆಣ್ಣೆ

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...