Tuesday, July 1, 2025

ಗಜಲ್ 60

ಈ ಸಂಜೆ ನಸು ನಕ್ಕು ಕಿವಿಯಲ್ಲಿ ಪಿಸು ನುಡಿ ಮೆಲ್ಲಗೆ/
ಆ ನೆಪದಲ್ಲಿ ಮೃದುವಾಗಿ ತುಟಿ ಒತ್ತೊಮ್ಮೆ ಕಾದಿರುವ ಕೆನ್ನೆಗೆ//

ಹಿಡಿದ ಕೈಯ ಸ್ಪರ್ಶಿಸು ಘರ್ಷಿಸುವಂತೆ ಲಘುವಾಗಿ ತೋಳುಗಳು/
ಬಿಸಿಯುಸಿರ ಬೆಸುಗೆ ಕಾವೇರುವ ಹೊತ್ತು ತಂಗಾಳಿ ಮೈ ಬೆಚ್ಚಗೆ//

ತಲೆಹರಟೆ ಮಾಡು ಬೇಕಾದಷ್ಟು ಚೂರು ಸಲುಗೆ ಕೊಟ್ಟು/
ಬೈದರೂ ಅಡ್ಡಿಯಿಲ್ಲ ಸಡಲಿಸಿ ನಿರ್ಬಂಧ ಸುಮ್ಮನೆ ಬಿಡು ಮಲ್ಲಿಗೆ//

ಸಿಹಿ ಅಧರಗಳ ತುಸು ಒಪ್ಪಿಸಲು ಕಲಿತೆನು ಬಗೆ ಬಗೆಯ ನಾಟಕ/
ಯೋಜನೆ ತಲೆಕೆಳಗಾದರೂ ಮದ ಕೊಸರಿ ಕೊಡುವ ಮುದ ಏಟಿಗೆ//

ಹಾತೊರೆದಿರುವೆ ತಡವರಿಸಿದಿರು ಬಾಚಿ ಬಿಗಿದಪ್ಪಿಕೊ ರೇಗಿ/
ವಿಳಾಸ ಇಲ್ಲದಂತೆ ಇಳಿದು ಹೋಗಲು ಕೊಡು ಸುಪಾರಿ ಸುಸ್ತುಗೆ//

ಕಣ್ಣಲ್ಲಿ ಕಣ್ಣಿಡುವ ಬಯಕೆ ಮಿಂಚುವ ಹುರುಪು ರೆಪ್ಪೆ ಅಂಚಲ್ಲೆ/
ನೀನು ಏನು ಮಾಡಿದರು ಚೆಂದವೆ ಇಷ್ಟವಾಗುವುದು ನನಗೆ//

ಸಾಕು ಎನ್ನುವಂತೆ ಸತಾಯಿಸಿ ಮುತ್ತು ಕೊಡುವೆ ಗೊತ್ತು ಕೊನೆಗೆ/
ಈ ಕ್ಷಣಗಳ ನೆನೆಯುತ್ತಾ ಪುಳಕ ಮತ್ತೆ ನೀ ನಾಳೆ ಸಿಗುವವರೆಗೆ//

ಬಸವರಾಜ ಕಾಸೆ

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...