Thursday, February 13, 2025

ಗಜಲ್ 50

ಹುಟ್ಟಿನಿಂದ ಒಂದೊಂದಾಗಿ ಶುರುವಾದ ಚಟಗಳು ಇವೆ ಎಲ್ಲರಲ್ಲಿಯೂ ಸಾಕಿ/
ಅತ್ತು ಕರೆದು ಹಠ ಹಿಡಿದು ಪಡೆಯುವ ಮಗು ಚಾಳಿ ಇತ್ತು ನನ್ನಲ್ಲಿಯೂ ಸಾಕಿ//

ಹಾಲು ಕುಡಿಯುವುದಾ ಬಿಡಿಸಲು ಅಮ್ಮ ಬೆರಳ ಚೀಪಿ ಉಗುರು ಕಚ್ಚಲು ಆರಂಭ/
ಬಿಟ್ಟರೆ ಒಂದು ಮನ ಸೆಳೆಯುವುದು ಇನ್ನೊಂದು ಪ್ರತಿಯೊಬ್ಬರಲ್ಲಿಯೂ ಸಾಕಿ//

ತಿಳಿದು ತಿಳಿಯದೆ ಹಚ್ಚಿಕೊಂಡು ಬಿಡುವೆವು ತನ್ನಿಂತಾನೇ ಒಂದಲ್ಲ ಒಂದು/
ಆತ್ಮೀಯರ ಸಮಾಧಾನಕ್ಕೆ ಬಿಡುವ ಆಶ್ವಾಸನೆಯ ಖುಷಿ ಸುಳ್ಳಲ್ಲಿಯೂ ಸಾಕಿ//

ತಿಂದು ಸೇದಿ ಕುಡಿದು ಆಡುವ ನೂರು ದುಶ್ಚಟ ಬಲ್ಲವನೆ ಬಲ್ಲ ಅದರ ಮಜಾ/
ಓದು ಬರೆ ಒಳ್ಳೆಯದಕ್ಕೆ ಹವ್ಯಾಸ ಹೆಸರು ಇರಲಿ ನಲಿವಿದೆ ನೋವಲ್ಲಿಯೂ ಸಾಕಿ//

ಕೊರಗುಗಳ ಚಿಂತೆ ಮರೆಯಲು ನಿಮಿಷದ ನಶೆ ತೊಡೆದು ಹಾಕದು ಏನನ್ನೂ/
ಸಮಸ್ಯೆಯ ಮೂಲವನ್ನು ಬಗೆಯಲು ಸಿದ್ಧನಾದ ಬಸು ನಕ್ಕ ನಿನ್ನಲ್ಲಿಯೂ ಸಾಕಿ//

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...