Tuesday, July 1, 2025

ಗಜಲ್ 49

ಇಬ್ಬನಿಯ ಹನಿ ಮೆಲ್ಲಗೆ ಜಾರಿ ನೆನೆದ ಚಿಗುರುಲೆ ಪುಳಕಿತಗೊಂಡಂತೆ/
ಮಮತೆಯ ಮಡಿಲಲ್ಲಿ ಮಿಂದೆದ್ದ ನಗುವಿನ ರೂಪ ಮಗು ಮುದ್ದಾದಂತೆ//

ದೇಹ ರಕ್ತ ಬಸಿದು ಜೀವ ತುಂಬುವ ಜನ್ಮದಾತೆಗೆ ದೇವರೆ ತೊಟ್ಟಿಲ ಮಗು/
ತಂದೆ ತಾಯಿ ಪ್ರೀತಿ ವಾತ್ಸಲ್ಯದ ಪ್ರತೀಕ ಕುಟುಂಬ ಮಮಕಾರದ ಪ್ರತಿಫಲವಂತೆ//

ಕೃಷ್ಣ ಆಗಿರುವನೇನೊ ಭಗವಂತ ಮೊದಲ ಅರಿವಿಗೆ ಸೂಪರ್ ಹೀರೊ ಅಪ್ಪ ಮಾತ್ರ/
ಯಾವ ಧರ್ಮದ ಉಪದೇಶವು ಅವರ ಹಿತಪೋಚಾರಕ್ಕೆ ಸರಿಸಾಟಿಯಾಗದಂತೆ//

ಚೇಳಿಗೆ ಜನಿಸಿದವು ಮರಿಗಳು, ಆಹಾರ ಇರದೆ ತಿನಿಸಿ ತನ್ನ, ಕೊಡುವುದು ಪ್ರಾಣ/
ಗುಟುಕು ನೀಡಿ ತೋರುವ ಆರೈಕೆ ಅಕ್ಕರೆ ಎಂದು ಬತ್ತದ ಅಮೃತದ ಒರತೆಯಂತೆ//

ಇಷ್ಟ ಕಷ್ಟಗಳ ಬದಿಗಿಟ್ಟು ಸಾಕಿ ಬೆಳೆಸಿ ಸಲಹುವರು ಎಲ್ಲವನ್ನೂ ಧಾರೆಯೆರೆದು/
ಹಾರಿ ಹಿಡಿಯುವ ಸನ್ನಾಹದಲ್ಲಿ ಎಗರೆಗರಿ ನಕ್ಕ ಅಪ್ಪುಗೆ ಅಲೆಗಳಿಗೆ ಹುಣ್ಣಿಮೆಯಂತೆ//

ಬಸವರಾಜ ಕಾಸೆ

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...