Friday, June 27, 2025

ಮಕ್ಕಳ ಲೋಕ ಬಳಗ ಕಾರ್ಯಾಗಾರ – ಅ. 17ರಿಂದ 21ರವರೆಗೆ ಚಿತ್ರಕವನ ಸ್ಪರ್ಧೆ

ಬಂಟ್ವಾಳ: ಅ. 17ರಿಂದ 21ರವರೆಗೆ ಬಂಟ್ವಾಳ ತಾಲೂಕಿನ ಮಕ್ಕಳ ಲೋಕದ ಚಿಣ್ಣರಿಗೆ ಚಿತ್ರ ಕವನ ಬರೆಯುವ ಬಗ್ಗೆ ಮಾಹಿತಿ ನೀಡಲಾಯಿತು.
ಸಾಂಪ್ರತ ಸ್ವಾಗತಾದಿಗಳ ನಂತರ ವೇದಿಕೆ ಹಂಚಿಕೊಂಡ ಡಾ ಸುರೇಶ ನೆಗಳಗುಳಿ ಇವರು ಮೊದಲಿಗೆ ಕವನದ ಲಕ್ಷಣಗಳನ್ನೂ ಕವನ ಮತ್ತು ಕವಿತೆಗಳ ವ್ಯತ್ಯಾಸವನ್ನೂ ಉದಾಹರಣೆಯ ಸಹಿತವಾಗಿ ವಿವರಿಸಿದರು. ಅವರು ಮುಂದುವರಿದು ಕವಿತೆಯು ಯಾವುದಾದರೂ ಅರ್ಥಬದ್ಧ ವಿಚಾರ ಪ್ರಧಾನವಾಗಿರುತ್ತದೆ ಹಾಗೂ ಕವನವು ಭಾವ ರಾಗ ಲಯ ಪ್ರಾಸ ಪ್ರಧಾನವಾಗಿರುತ್ತದೆ.ಪ್ರಾಸವೆಂಬುದು ತೀರಾ ಅಗತ್ಯ ಅಂಶವಲ್ಲವಾದರೂ ಕವನದ ಮೆರುಗು ಹೆಚ್ಚಿಸಲು ಅರ್ಥ ಕೆಡದಂತೆ ಆದಿ ಮಧ್ಯ ಅಂತ್ಯ ಪ್ರಾಸಗಳನ್ನು ಅಗತ್ಯಾನುಸಾರ ಹಾಕ ಬಹುದು.ಪ್ರಾಸಕ್ಕಾಗಿ ಒದ್ದಾಡಿ ಅರ್ಥ ಕೆಡಿಸ ಬಾರದು ಎಂದರು. ಕವಿತೆಯು ವಿಶೇಷವಾಗಿ ನವ್ಯ ನವ್ಯೋತ್ತರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದು ಗೋಪಾಲಕೃಷ್ಣ ಅಡಿಗರು ಈ ರೀತಿಯ ಸಾಹಿತ್ಯ ಪ್ರವರ್ತಕರಲ್ಲಿ ಶ್ರೇಷ್ಠ ರಾಗಿದ್ದರು ಎನ್ನುತ್ತಾ ಕಟ್ಟುವೆವು ಹೊಸ ನಾಡೊಂದನು ಎಂಬ ಕವಿತೆ ವಾಚಿಸಿ ತೋರಿಸಿದರು.
ಕವನವನ್ನು ಉದಾಹರಿಸುತ್ತಾ ಯಾವ ಮೋಹನ ಮುರಳಿ ಕರೆಯುತು ಕವನವನ್ನೂ ವಾಚಿಸಿದರು. ಹಾಗೆಯೇ ಇತರ ಚಿಕ್ಕ ಕವನಗಳನ್ನೂ ಉದಾಹರಿಸುತ್ತಾ ನಾಗರ ಹಾವೇ ಹಾವೊಳು ಹೂವೇ, ಬಣ್ಣದ ತಗಡಿನ ತುತ್ತೂರಿ ಎಂಬಿತ್ಯಾದಿ ಕವನ ವಾಚಿಸಿ ತೋರಿಸಿದರು.
ಕಾರ್ಯಾಗಾರದ ವಿಷಯಕ್ಕೆ ಬರುತ್ತಾ ಒಂದೊಂದೇ ಚಿತ್ರಗಳನ್ನು ತೋರಿಸಿ ಆ ಚಿತ್ರಕ್ಕೆ ಹೇಗೆ ಕವನ ಬರೆಯ ಬಹುದು ಎಂಬುದನ್ನು ಸ್ವರಚಿತ ಕವನದ ಮುಖಾಂತರ ವಿವರಿಸಿದರು. ಪಾರಿವಾಳ ಪತ್ರವನ್ನು ಹಿಡಿದು ಹಾರುವ ಚಿತ್ರಕ್ಕೆ ಕಪೋತ ಕಾಮನೆ,ಗಿಳಿ ಯ ಶುಕ ಸಂದೇಶ, ಬಳೆಯ ಬಗ್ಗೆ ಬಳೆಗೆ ಕೈಚಾಚು,ದೇಗುಲದ ಚಿತ್ರಕ್ಕೆ ಪರಮ+ ಆತ್ಮ ,ಶಿಲೆಯ ದೊಡ್ಡ ಆಕಾರಕ್ಕೆ ಪಳೆಯುಳಿಕೆ ಹೀಗೆ ಕೆಲವು ಚಿತ್ರ ಸಹಿತ ಕವನ ಹಾಗೂ ಶಿರೋನಾಮೆಯ ಮಹತ್ವವನ್ನೂ ತಿಳಿಸಿದರು.
ಅನಂತರ ಕೆಲವು ಚಿತ್ರಗಳನ್ನು ಕೊಟ್ಟು ತಾವೇ ಮನೆಯಲ್ಲಿ ಕವನ ಬರೆಯಲು ಸೂಚಿಸಿದರು.
ಹೀಗೆ ಕವನ ಬರೆಯುವ ಕಲೆಯ ಜಾಲತಾಣದ ಪಾಠವು ಸಾಂಗವಾಗಿ ನೆರವೇರಿತು.
*ಡಾ ಸುರೇಶ ನೆಗಳಗುಳಿ*
*ಶಸ್ತ್ರ ಚಿಕಿತ್ಸಕ ಪ್ರಾಧ್ಯಾಪಕ ಬರಹಗಾರ*
*ಮಂಗಳೂರು*

More from the blog

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...