ಬಂಟ್ವಾಳ: ಸ್ನೇಹಿತರ ಜೊತೆ ದೇವರ ಕೆರೆಗೆ ಇಳಿದ ಯುವಕನೋರ್ವ ಅಕಸ್ಮಾತ್ತಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಾರಿಂಜದಲ್ಲಿ ನಡೆದಿದೆ.


ಸಿದ್ದಕಟ್ಟೆ ಸಮೀಪದ ವಕ್ಕಾಡಿಗೋಳಿ ನಿವಾಸಿ ಸೇಸಪ್ಪ ಮಡಿವಾಳ ಸುಕೇಶ್ (26) ನೀರಿಗೆ ಬಿದ್ದು ಮೃತನಾದ ಯುವಕ.
ಸುಕೇಶ್ ಮಂಗಳೂರು ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಆದಿತ್ಯವಾರ ರಜಾ ದಿನವಾದ್ದರಿಂದ ತನ್ನ ಇಬ್ಬರು ಸ್ನೇಹಿತರ ಜೊತೆ ಕಾರಿಂಜಕ್ಕೆ ಬಂದಿದ್ದರು.
ಸಂಜೆಯ ವೇಳೆ ಕಾರಿಂಜದ ದೇವರ ಕೆರೆಗೆ ಕೈಕಾಲು ತೊಳೆಯಲು ಎಂದು ಮೂವರು ಇಳಿದಿದ್ದಾರೆ.
ಅದರೆ ಅಕಸ್ಮಾತ್ತಾಗಿ ಸುಕೇಶ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಸುಕೇಶ್ ಆತನ ಸ್ನೇಹಿತ ರಾದ ಪ್ರಶಾಂತ್ ಮತ್ತು ರಿತೇಶ್ ಜೊತೆ ಕಾರಿಂಜ ದೇವಸ್ಥಾನ ಕ್ಕೆಂದು ಮಂಗಳೂರಿನಿಂದ ಕಾರಿನಲ್ಲಿ ಬಂದಿದ್ದರು.
ಅಗ್ನಿಶಾಮಕ ದಳದವರು ಅಗಮಿಸಿ ಕೆಲವು ಗಂಟೆಗಳ ಕಾಲ ಹುಡುಕಾಡಿದ ಬಳಿಕ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್. ಐ. ಸೌಮ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ತರಲಾಗಿದೆ.