Tuesday, February 11, 2025

ಕನ್ಯಾನ: ಇಫ್ತಾರ್ ಕೂಟ

ವಿಟ್ಲ: ಕನ್ಯಾನ ಚೆಡವು ದುಲ್‌ಪುಕಾರ್ ಸೇವಾ ಸಂಘ ಮತ್ತು ದುಲ್‌ಪುಕಾರ್ ನ್ ಮಸೀದಿಗಲ್ಫ್ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ಕನ್ಯಾನ ಮಖಾಂಝಿಯಾರತ್‌ನೊಂದಿಗೆ ಕನ್ಯಾನ ಟೌನ್ ಮಸೀದಿಯಲ್ಲಿ ರಮಳಾನ್ ತರಗತಿ ಹಾಗೂ ಕಿಟ್ ವಿತರಣೆ ನಡೆಯಿತು.
ಶೈಖುನಾ ಕನ್ಯಾನ ಉಸ್ತಾದ್ ದುವಾ ನೆರವೇರಿಸಿ ಅಧ್ಯಕ್ಷತೆ ವಹಿಸಿದ್ದರು. ಕುಕ್ಕಾಜೆ ಸಿರಾಜುದ್ದೀನ್ ಸಖಾಫಿ ರಮಾಳಾನ್ ಪ್ರಭಾಷಣಗೈದರು.
ಇದೇ ಅಬ್ದುಲ್‌ಖಾದರ್ ಸದಿ, ಹಮೀದ್ ಸಖಾಫಿ ಪಾಡಿ, ಅಶ್ರಫ್ ಮದನಿ ಚೆಂಬರ್ಪು, ಇಸ್ಮಾಯಿಲ್ ಹಾಜಿ ಪೊಯ್ಯಕಂಡ, ಕನ್ಯಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಪಿ ಅಬ್ದುರ್ರಹ್ಮಾನ್, ಅದ್ದುಚ್ಚ ಚೆಡವು, ಗಲ್ಫ್ ಕಮಿಟಿ ಉಪಾಧ್ಯಕ್ಷ ಜಲಾಲ್ ಮರಾಠಿಮೂಲೆ, ದುಲ್‌ಪುಕಾರ್ ಸೇವಾ ಸಂಘದ ಅಧ್ಯಕ್ಷ ಆಸೀಫ್ ಬನಾರಿ, ಕಮಿಟಿ ಪದಾಧಿಕಾರಿಗಳು, ಊರಿನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದುಲ್‌ಪುಕಾರ್ ಗಲ್ಫ್ ಸಮಿತಿಯಿಂದ ಬಡ ಮತ್ತು ಅನಾಥರಾದ 90 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.

More from the blog

ಬ್ಲಡ್ ಕ್ಯಾನ್ಸರ್ ಗೆ ಪೋಲಿಸ್ ಸಿಬ್ಬಂದಿ ಬಲಿ

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೋಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ. ಅವಿವಾಹಿತನಾಗಿದ್ದ ಅಭಿಷೇಕ್...

ಬಳ್ಳಮಂಜ ಕೈಲಾ ಧರ್ಮಚಾವಡಿ, ಬುನ್ನಾನ್ ಕುಟುಂಬಸ್ಥರ ತರವಾಡಿನ ನೂತನ ಮನೆಯ ಶಿಲಾನ್ಯಾಸ

ಬೆಳ್ತಂಗಡಿ : ಕಲ್ಲುರ್ಟಿ ಪಂಜುರ್ಲಿ ಮೈಸಂದಾಯ ಬನ್ನಾನ್ ಕುಟುಂಬಸ್ಥರ ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ.)ಕೈಲಾ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಕೈಲಾಧರ್ಮ ಚಾವಡಿ ಮತ್ತು ತರವಾಡುಮನೆಯ ಶೀಲಾನ್ಯಾಸ ಕಾರ್ಯಕ್ರಮ ಫೆ.9ರಂದು...

ಮನೆಗೆ ಬೆಂಕಿ

ಬಡಕಬೈಲ್: ಗೋಣಿ ಚೀಲ ವ್ಯಾಪಾರಿ ಮೋನಾಕ ಎಂಬವರ ಮನೆಗೆ ಆಕಸ್ಮಿಕಾ ಬೆಂಕಿ ಅನಾಹುತ. ಯಾವುದೇ ಸಾವು-ನೋವು ಸಂಭವಿಸಿಲ್ಲ. ತಡರಾತ್ರಿ ಘಟನೆ ಬೆಂಕಿ‌ ನಂದಿಸಲು ಅಗ್ನಿ ಶಾಮಕದಳ ಹರಸಾಹಸ ಶಾರ್ಟ್ ಸರ್ಕ್ಯೂಟ್ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು...

ಕಾರು ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ: ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. ೯ರಂದು ನಡೆದಿದೆ. ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು....