Thursday, February 13, 2025

ಬೇಸಿಗೆಯ ಧಗೆಗೆ ತಂಪೆರೆಯಲು ಕಲ್ಲಂಗಡಿ (ಬಚ್ಚ್ಚಂಗಾಯಿ)

ಬರಹ : ಎಂ. ಎನ್ ಕುಮಾರ್ ಮೆಲ್ಕಾರ್
ಚಿತ್ರ : ಸ್ವರಾಜ್ ಸ್ಟುಡಿಯೋ ಮೆಲ್ಕಾರ್
ಹಣ್ಣುಗಳ ರಾಜ ಮಾವು ಮಾರುಕಟ್ಟೆಯಲ್ಲಿ ಮಿಂಚುತ್ತಿದ್ದಂತೆಯೇ ಬೇಸಿಗೆಯ ಧಗೆಗೆ ತಂಪೆರೆಯಲು ಕಲ್ಲಂಗಡಿ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆಯುತ್ತಿದೆ.


ಮನೆಗಳಿಗೆ ಅತಿಥಿಗಳು ಬಂದಾಗ, ಮದುವೆಯಂತಹ ಸಮಾರಂಭಗಳು ದೇವಸ್ಥಾನದ ಬ್ರಹ್ಮಕಲೋಶೋತ್ಸವದಲ್ಲಿ ಅತಿಥಿಗಳ ಬಾಯಾರಿಕೆಯನ್ನು ತಣಿಸಲು ಹೋಟೆಲ್ ಜ್ಯೂಸ್ ಸೆಂಟರ್‌ಗಳಲ್ಲಿ ಕಲ್ಲಂಗಡಿ ಹಣ್ಣಿನ ರಸ ಜನಪ್ರಿಯವಾಗಿದೆ. ಈಗ ಫ್ರಿಜ್ ಬಳಕೆ ಸಾಮಾನ್ಯವಾಗಿರುವುದರಿಂದ ಜ್ಯೂಸ್ ತಯಾರಿಸಿಟ್ಟು ಬಳಸುವುದು ಸುಲಭ ಸಾಧ್ಯ. ಇತರ ಹಣ್ಣುಗಳಂತೆ ದುಬಾರಿಯಲ್ಲ ಕಲ್ಲಂಗಡಿ. ಈ ಎಲ್ಲಾ ಕಾರಣಗಳಿಂದ ಮಗುವಿನಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಕಲ್ಲಂಗಡಿ ಅತೀ ಪ್ರಿಯವಾಗಿದೆ.
ಮಾರಕ ರೋಗಕ್ಕೆ ರಾಮಬಾಣ
ಕಲ್ಲನ್ನು ಕರಗಿಸಬಲ್ಲ ಕಲ್ಲಂಗಡಿಹಣ್ಣು
ಕಲ್ಲಂಗಡಿಯಲ್ಲಿ ಮೇದಸ್ಸು, ತೇವಾಂಶ, ಖನಿಜಾಂಶ, ಸಾರಜನಕ, ಕ್ಯಾಲ್ಸಿಯಂ ಕಬ್ಬಿಣ, ಪಾಸ್ಪರಸ್ ಮುಂತಾದ ಪೋಷಕಾಂಶಗಳು ಇರುವುದರಿಂದ ಕಾಮಾಲೆ, ಉರಿಮೂತ್ರ, ಮಲಬದ್ಧತೆ, ಕಿಡ್ನಿ ತೊಂದರೆ, ವಾಂತಿಬೇಧಿಗೆ ಹಾಗೂ ದೇಹವು ಉರಿಯುತ್ತಿದ್ದರೆ ಒಂದು ಲೋಟ ಕಲ್ಲಂಗಡಿ ಹಣ್ಣಿನ ರಸ ಸ್ವಲ್ಪ ಉಪ್ಪು ಬೆರೆಸಿ ಸೇವಿಸುವುದರಿಂದ ದೇಹದ ಉರಿ ಗುಣವಾಗುವುದು. ಮಾರಕ ರೋಗಗಳಿಗೆ ಕಲ್ಲಂಗಡಿ ರಾಮಬಾಣವಾಗಿದೆ.
ಮೂಲತಃ ಅಫ್ರಿಕಾದ ದಕ್ಷಿಣ ಭಾಗದಲ್ಲಿ ಕಲ್ಲಂಗಡಿ ತೆವಳುವ ಬಳ್ಳಿಯ ಹಣ್ಣು ಕೆಂಪು ಬಣ್ಣದ ತಿರುಳು ರಸಭರಿತ ಜಪಾನಿನ ಕಲ್ಲಂಗಡಿ ತಳಿಯೊಂದರಲ್ಲಿ ಬೀಜಗಳೇ ಇಲ್ಲ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕಲ್ಲಂಗಡಿ ಬೆಳೆಸುವುದು ಚೀನಾದಲ್ಲಿ.
ಕಲ್ಲಂಗಡಿ ಹಣ್ಣು ಹಾಸನ, ಚಿತ್ರದುರ್ಗ, ಕುಂದಾಪುರ, ಬೈಂದೂರು, ಹಾವೇರಿ, ಶಿವಮೊಗ್ಗ ದಾವಣಗೆರೆ ಮತ್ತು ಹೊನ್ನಾವರ ಪರಿಸರದಿಂದ ಮಾರುಕಟ್ಟೆಗೆ ಬರುತ್ತದೆ. ಅಲ್ಲದೆ ದಕ್ಷಿಣ ಕನ್ನಡ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪಕ್ಕದ ಗದ್ದೆಯಲ್ಲಿ ಧಾರಾಳವಾಗಿ ಕಲ್ಲಂಗಡಿಯನ್ನು ಬೆಳೆಸಿ ಜಾತ್ರಾ ಮಹೋತ್ಸವದಂದು ವಿಕ್ರಯಿಸುವುದನ್ನು ಕಾಣಬಹುದು. ಇದೀಗ ಮಂಗಳೂರು ಮಾರುಕಟ್ಟೆಗೆ ದಿನ ಒಂದಕ್ಕೆ ೪-೫ ಲಾರಿಗಳು ಕಲ್ಲಂಗಡಿ ಹಣ್ಣುಗಳು ಬಂದು ಮಂಗಳೂರಿನಿಂದ ಗ್ರಾಮಾಂತರ ಪ್ರದೇಶಗಳಿಗೆ ರವಾನೆಯಾಗುತ್ತಿದೆ. ಈಗ ಕೆ.ಜಿ.ಗೆ ರೂ ೧೫-೧೮ರಲ್ಲಿ ವಿಕ್ರಯವಾಗುತ್ತಿರುವುದು.
೨೦ ವರ್ಷದಿಂದ ರಖಂ ವ್ಯಾಪಾರ ಮಾಡುತ್ತಿರುವ ಪಾಣೆಮಂಗಳೂರಿನ ಬಂಗ್ಲೆ ಗುಡ್ಡೆಯ ಪಿ. ಬಿ. ಅಬ್ದುಲ್ ಸಲಾಂ ಮೆಲ್ಕಾರ್ ಪರಿಸರದಲ್ಲಿ ಒಂದು ಲೋಡ್ ಲಾರಿಯಲ್ಲಿ ಬಂದ ಕಲ್ಲಂಗಡಿ ಮಾರುತ್ತಿದ್ದು, ಮಾರುಕಟ್ಟೆಯಲ್ಲಿ ಕಲ್ಲಂಗಡಿಯ ದರ ದಿನಾ ಬದಲಾಗುತ್ತಿದ್ದು ಲೋಡ್‌ಗಳಲ್ಲಿ  ಬಂದಾಗ ನಷ್ಟವನ್ನು ಅನುಭವಿಸ ಬೇಕಾಗುತ್ತದೆ ಎನ್ನುತ್ತಾರೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...