ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಟಾಟಾ ಬಿಲ್ಡಿಂಗ್ ವತಿಯಿಂದ 6 ಮತ್ತು 7ನೇ ತರಗತಿಯವರಿಗೆ ಜ್ಯೂನಿಯರ್ ಹಂತದ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ ನಡೆಯಿತು.
ರಸಪ್ರಶ್ನೆ ಸ್ಪರ್ಧೆಯಲ್ಲಿ ೬ನೇ ತರಗತಿಯ ವಾಸವಿ ಕೆ.ಸಿ. ಪ್ರಥಮ ಹಾಗೂ ಭೂಷಣ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ 7ನೇ ತರಗತಿಯ ಶ್ರಮಿಕಾ ಪ್ರಥಮ, ದೀಕ್ಷಿತ್ ದ್ವಿತೀಯ ಹಾಗೂ 6ನೇ ತರಗತಿಯ ಭೂಷಣ್ ತೃತೀಯ ಸ್ಥಾನ ಗಳಿಸಿದ್ದಾರೆ.
ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.


7ನೇ ತರಗತಿಯ ತುಷಾರ್ ಹಾಗೂ ಚಿನ್ಮಯಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ ಹಾಗೂ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನು ಶಾಲೆಗೆ ನೀಡಿದರು.
ವೇದಿಕೆಯಲ್ಲಿ ಟಾಟಾ ಕಂಪನಿ ಉದ್ಯೋಗಿ ಅಕ್ರಂ ಹಾಗೂ ಮುಖ್ಯ ಶಿಕ್ಷಕ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಸುಮಂತ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.