Thursday, February 13, 2025

ಕಲ್ಲಡ್ಕದ “ಕುಟುಂಬ” ಹಾಗೂ ಬಂಟ್ವಾಳದ ಎಸ್.ಐ.ಅವರಿಂದ ಧರ್ಣಮ್ಮ ಅಜ್ಜಿಗೆ ಮನೆ ನಿರ್ಮಾಣ, ಹಸ್ತಾಂತರ

ಬಂಟ್ವಾಳ: ಕಲ್ಲಡ್ಕ ಸಮೀಪದ ನೆಟ್ಲ ಬಳಿಯ ಪಿಲಿಂಜ ನಿವಾಸಿ 65 ವರ್ಷದ ವೃದ್ದೆ ಧರ್ಣಮ್ಮ ಅವರಿಗೆ ಕಲ್ಲಡ್ಕ ದ ನೆಟ್ಲ ಪರಿಸರದ ” ಕುಟುಂಬ ” ಸದಸ್ಯರ ಸಹಕಾರ ಹಾಗೂ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರ ಮುತುವರ್ಜಿಯಿಂದ ನಿರ್ಮಿಸಿ ಕೊಟ್ಟ ನೂತನ ಮನೆಯ ಹಸ್ತಾಂತರ ಇಂದು ನಡೆಯಿತು.

ಮನೆಯವರೆಲ್ಲರನ್ನು ಕಳೆದುಕೊಂಡು ದಿಕ್ಕುತೋಚದ ಸ್ಥಿತಿಯಲ್ಲಿ ದ್ದ ಧರ್ಣಮ್ಮ ಅಜ್ಜಿಯ ಮನೆ ಬೀಳುವ ಹಂತದಲ್ಲಿ ತ್ತು.
ಇಂತಹ ಶೋಚನೀಯ ಜೀವನವನ್ನು ಅರಿತ ಇಲ್ಲಿನ ” ಕುಟುಂಬ ” ಸದಸ್ಯರು ಇವರಿಗೆ ಮನೆ ನಿರ್ಮಾಣ ಮಾಡಿಕೊಡುವ ಪಣತೊಟ್ಟರು.
ಇದಕ್ಕೆ ಸಾಥ್ ನೀಡಿದವರು ಬಂಟ್ವಾಳ ಎಸ್.ಐ.ಚಂದ್ರಶೇಖರ್.

ಅಂತೂ ಇಂತು ಮನೆ ನಿರ್ಮಾಣ ಗೊಂಡಿತ್ತು. ಇಂದು ಮನೆಯ ಹಸ್ತಾಂತರವೂ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳು ನಡೆದ ಬಳಿಕ ಸಾಂಕೇತಿಕ ವಾಗಿ ಎಲ್ಲಾ ಕಾರ್ಯಕ್ರಮ ಗಳು ನಡೆಯಿತು. ಕಲ್ಲಡ್ಕದ ” ಕುಟುಂಬ ” ಸದಸ್ಯರು ಕೈಗೆತ್ತಿಕೊಂಡ ಉತ್ತಮ ಕಾರ್ಯಕ್ಕೆ ಎಲ್ಲರ ಬಾಯಿಯಿಂದಲೂ ಮೆಚ್ಚಗೆಯ ಮಾತುಗಳು ಕೇಳಿಬಂದಿವೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...