ಬಂಟ್ವಾಳ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ನರಹರಿ ದೇವಾಲಯದ ಪರಿಸರದಲ್ಲಿ ಅಶ್ಲೀಲ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದು ಇದನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಲ್ಲಡ್ಕ ವಲಯ ಖಂಡಿಸಿ ಎಚ್ಚರಿಕೆಯನ್ನು ನೀಡಿದೆ.
ದೇವಾಲಯದ ಪರಿಸರದಲ್ಲಿ ಅಶ್ಲೀಲ ವಾದ ವರ್ತನೆಗಳು ನಡೆಯವುದು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ದೇವಾಲಯದ ಪ್ರವೇಶದ ಬಳಿಯಲ್ಲಿ ಬ್ಯಾನರ್ ಹಾಕಲಾಗಿದೆ.

ಈ ಬ್ಯಾನರ್ ನಲ್ಲಿ ಏನು ಇದೆ?
ಕರಾವಳಿಯ ಪ್ರಸಿದ್ಧ ಕ್ಷೇತ್ರದಲ್ಲೊಂದಾದ ನರಹರಿ ಪರ್ವತದ ಪರಿಸರದಲ್ಲಿ ಇತ್ತೀಚಿಗೆ ಮದ್ಯಪಾನ , ದೂಮಪಾನ, ಪ್ರೇಮಿಗಳ ಅಶ್ಲೀಲ ವರ್ತನೆ, ಅನ್ಯದರ್ಮಿಯರ ಹಾವಳಿಯು ಜಾಸ್ತಿಯಾಗುತ್ತಿದ್ದು, ಇದನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ತೀವ್ರ ವಾಗಿ ಖಂಡಿಸುತ್ತದೆ.ಇನ್ನು ಮುಂದೆಯೂ ಇಂತಹ ವರ್ತನೆಗಳು ಜಾಸ್ತಿಯಾಗುತ್ತಾ ಹೋದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಲು ಭಜರಂಗದಳವು ಸಜ್ಜಾಗಿದೆ.
ಭಕ್ತಾಧಿಗಳು ಬರುವ ಇಂತಹ ಪುಣ್ಯ ಕ್ಷೇತ್ರ ವನ್ನು ಅಪವಿತ್ರಗೊಳಿಸಲು ನಾವೆಂದಿಗೂ ಬಿಡಲಾರೆವು, ಇದು ನಿಮಗೆ ಕೊನೆಯ ಎಚ್ಚರಿಕೆ.
ಬದಲಾವಣೆ ನಿಮ್ಮಿಂದ ಆಗದಿದ್ದರೆ ಬದಲಾವಣೆಗೆ ಬಜರಂಗದಳ ಇಳಿಯುತ್ತದೆ.
ಎಂಬ ಬರಹದ ಬ್ಯಾನರ್ ಒಂದನ್ನು ನರಹರಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಹಾಕಲಾಗಿದೆ.

