ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬದರ್ಕಳ ಗರಡಿ ಕ್ಷೇತ್ರವು ಶಿಲಾಮಯವಾಗಿ ಪುನರ್ನಿರ್ಮಾಣಗೊಳ್ಳುತ್ತಿದ್ದು, ಕ್ಷೇತ್ರಕ್ಕೆ ನೂತನ ಧ್ವಜಸ್ಥಂಭದ ಸಾಗಾಟ ಕಾರ್ಯಕ್ರಮ ಫೆ.1ರಂದು ಜರಗಲಿದೆ.
ಕ್ಷೇತ್ರದ ಗರ್ಭಗುಡಿಂiಷ್ಟೇ ಪ್ರಾಮುಖ್ಯತೆ ಹೊಂದಿರುವ ನಿಟ್ಟಿನಲ್ಲಿ ವೈದಿಕರ ಮಾರ್ಗದರ್ಶನದಂತೆ ನೂತನ ಧ್ವಜಸ್ಥಂಭ ಸ್ಥಾಪನೆಗೊಳ್ಳಲಿದ್ದು, ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಪಟ್ಟದಬಲುವಿನಿಂದ ಕೊಡಿಮರ ಆಗಮಿಸಲಿದೆ. ಬೆಳಗ್ಗೆ ಕೊಡಿಮರಕ್ಕೆ ವೃಕ್ಷ ಮುಹೂರ್ತ ನಡೆಯಲಿದ್ದು ಬಳಿಕ ಲಿಂಗಸ್ಥಳ, ಕರ್ಲಬೀಡು, ತಾಳಿಪಡ್ಪು ರಸ್ತೆಯಾಗಿ ಶ್ರೀ ಪಂಚದುರ್ಗಾ ಪರಮೇಶ್ವರಿಪ್ರೌಢಶಾಲಾ ಬಳಿಯಿಂದ ವಿವಿಧ ವಾಹನ, ಚೆಂಡೆ,ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಶ್ರೀ ಕ್ಷೇತ್ರಕ್ಕೆ ಸಾಗಾಟ ನಡೆಯಲಿದೆ ಎಂದು ಕ್ಷೇತ್ರದ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
