ಬಂಟ್ವಾಳ: ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರ ಸಿಬಂದಿಯ ಮಧ್ಯೆ ಜಗಳ ನಡೆದು ಒಬ್ಬಾತ ಸಿಬಂದಿ ಚೂರಿಯಿಂದ ಇರಿದು ಮತ್ತೊಬ್ಬನನ್ನು ಗಾಯಗೊಳಿಸಿದ ಘಟನೆ ಸೋಮವಾರ ಬಿ.ಸಿ.ರೋಡಿನ ಕೈಕಂಬದ ಬಳಿ ನಡೆದಿದೆ.
ಮೊಡಂಕಾಪು ನಿವಾಸಿ ನವೀನ್ ಪೂಜಾರಿ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಚೇತನ್ ಕುಲಾಲ್ ತನಗೆ ಚೂರಿಯಿಂದ ಇರಿದು ತೊಡೆ ಹಾಗೂ ಕೈಗೆ ಗಾಯಗೊಳಿಸಿದ್ದಾನೆ ಎಂದು ದೂರಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
