Saturday, February 8, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-25

ಸರ್ವರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಈ ಅಂಕಣವು ಇಪ್ಪತ್ತೈದನೇ ವಾರಕ್ಕೆ ತಲುಪಿದ ಸಂತಸವನ್ನೂ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಅದರೊಂದಿಗೆ ಮುಂದಿನ ವಾರದ ಲೇಖನ ಮುಂದಿನ ವರುಷ ಬರುವ ಕಾರಣ ಪ್ರತಿಯೊಬ್ಬ ಓದುಗರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳನ್ನೂ ಉಣಬಡಿಸುತ್ತಿರುವೆ.ಒಟ್ಟಾರೆ ಈ ವಾರ ಶುಭಾಶಯಗಳ ಸುರಿಮಳೆ!
ಜೀವನದಲ್ಲಿ ಹೊಸ ವರುಷಗಳು ಬರುತ್ತವೆ, ಹೋಗುತ್ತವೆ, ಆದರೆ ಮಲಗಲು ಬಿಡದಂಥ ಹೊಸ ಕನಸುಗಳನ್ನು ನಾವು ಕಟ್ಟಿಕೊಂಡು ಅವುಗಳ ಹಿಂದೆ ಓಡಬೇಕಾಗಿದೆ. ಹೊಸ ಕನಸುಗಳು, ಹೊಸ ಐಡಿಯಾಗಳು, ನವನವೀನ ಕಾರ್ಯಗಳಿಗೆ ಆಲೋಚನೆಗಳು ಇವು ಪ್ರತಿ ವರುಷವೂ ಹೊಸದಾದಾಗ ನಾವು ಹೊಸ ವರುಷ ಬರಲು ಸಂಭ್ರಮದಿಂದ ಕಾಯುತ್ತೇವೆ, ಹಾಗೇನೇ ಆ ವರುಷ ಕಳೆಯುವಾಗಲೂ ನಮಗೆ ನಮ್ಮ ಸಾಧನೆಯ ಬಗ್ಗೆ ಹೆಮ್ಮೆಯೆನಿಸುತ್ತದೆ! ಅದರ ಬದಲು ನನ್ನ ಈ ವರ್ಷದ ಸಾಧನೆ ಶೂನ್ಯವೆನಿಸಿದಾಗ ಬೇಸರವಾಗುವುದಿಲ್ಲವೇ?
ಸಾಧನೆ ಚಿಕ್ಕದಾದರೂ ಹೊಸದಾಗಿರಬೇಕು. ನಮ್ಮನ್ನು ನಾಲ್ಕು ಜನ ಗುರುತಿಸಬೇಕೆಂಬ ಬಯಕೆ ಮಾನವ ಸಹಜ ಗುಣ. ಹಾಗಾಗಲು ನಾವೇನು ಮಾಡಿದ್ದೇವೆ ಎಂಬುದೂ ಬೇಕಲ್ಲವೇ?
ಈ ಹೊಸ ವರುಷ 2019ಕ್ಕೆ ಹೊಸ ಯೋಜನೆಗಳನ್ನು ತಯಾರಿಸೋಣ. ನಮ್ಮ ಜೀವನವನ್ನು ನಾವೇ ಮೇಲೆತ್ತುವ ಕಾರ್ಯ ಮಾಡೋಣ. ಇತರರಿಗೆ ಸಾಧ್ಯವಾದರೆ ಸ್ವಲ್ಪ ಸಹಾಯ ಮಾಡೋಣ. ಇಲ್ಲದಿದ್ದರೆ ಸುಮ್ಮನಿರೋಣ. ಬೇರೆಯವರ ಮನ ನೋಯಿಸುವುದಿಲ್ಲ ಎಂಬ ಪಣ ತೊಡೋಣ. ಅಷ್ಟು ಸಾಕಲ್ಲವೇ ಹೊಸ ವರುಷದ ಪ್ಲಾನಿಂಗ್? ಸಂತಾಕ್ರೂಸರೂ ಖುಷಿ ಪಟ್ಟು ನಿಮಗೊಂದು ವರ ನೀಡಿ ಬಿಡಬಹುದು! ನೀವೇನಂತೀರಿ?

@ಪ್ರೇಮ್@
Feed back @ [email protected]

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...