Thursday, February 5, 2026

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-35

ಪಾಕ್ -ಭಾರತ ಯುದ್ಧ ಸಮರ ಒಂದೆಡೆಯಾದರೆ, ಮತ್ತೊಂದೆಡೆ ಶಿವರಾತ್ರಿ ಹಬ್ಬದ ಸಡಗರ. ದಂಡು ದಂಡಾಗಿ ಧರ್ಮಸ್ಥಳಕ್ಕೆ ಬರುತ್ತಿರುವ ಪಾದಯಾತ್ರಿಗಳ ಸಾಲು.ಮತ್ತೊಂದೆಡೆ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ, ಬಂದ ಜೀವನ ಪರೀಕ್ಷೆಗಳು. ಜಾತ್ರೆ, ಕೋಲ, ಪೂಜೆ, ಮದುವೆಗಳ ಸಾಲು. ಹಾಗೆಯೇ ಚುನಾವಣೆಯ ಕಾವು.
ತುಂಬಾ ಬ್ಯುಸಿಯಾದ ಈ ತಿಂಗಳಿನಲ್ಲಿ ಇದೀಗ ಪರೀಕ್ಷೆ ಬರೆಯುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್. ಮುಂದೆ ಪರೀಕ್ಷೆ ಬರೆಯಲಿರುವ ಹತ್ತನೇ ತರಗತಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್ ನೊಂದಿಗೆ ಸ್ಟಡಿ ವೆಲ್. ಪೂರ್ವ ತಯಾರಿ ಚೆನ್ನಾಗಿರಲಿ.
ಜೀವನದ ಏರು ತಗ್ಗುಗಳನ್ನು ಸರಿದೂಗಿಸಿಕೊಂಡು, ಸಂಯಮದಲ್ಲಿ ತನ್ನ ಸ್ಥಿರ ಗುರಿಯತ್ತ ಮುನ್ನಡೆವ ತಾಳ್ಮೆ ಇರಲಿ. ಕಠಿಣ ಪರಿಶ್ರಮವೇ ಸಾಧನೆಯ ರಹಸ್ಯವೆಂಬುದು ತಿಳಿದಿರಲಿ.
ಪರೀಕ್ಷೆಯಲ್ಲಿ ತಾವಂದುಕೊಂಡ ಅಂಕಗಳು ದೊರಕದಿದ್ದರೂ ಹಲವಾರು ದಾರಿಗಳು, ಕವಲುಗಳು ನಿಮಗಾಗಿ ತೆರೆದುಕೊಂಡಿವೆ. ನುಗ್ಗಲು ದಾರಿಗಳು ಅನೇಕ ಇವೆ. ಹಾಗಾಗಿ ಹೆದರ ಬೇಕೆಂದಿಲ್ಲ.
ಈಗಾಗಲೇ ಪರೀಕ್ಷೆ ಮುಗಿಸಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ತಮ್ಮ ಸಮಯ ಹಾಳು ಮಾಡಿಕೊಳ್ಳದೆ ಮುಂದಿನ ತರಗತಿಯ ಓದಿನ ಸಿದ್ಧತೆ ಅಥವಾ ಕುಟುಂಬಕ್ಕೆ ದುಡಿದು ಸಹಕರಿಸಬಹುದು. ಕಂಪ್ಯೂಟರ್, ರಿಪೇರಿಗಳು, ಟ್ರೈನಿಂಗ್ ಗಳನ್ನು ಪಡೆದು ಕಲಿಯಬಹುದು. ಟ್ಯೂಷನ್ ನಡೆಸಬಹುದು. ನೃತ್ಯ ಕಲಿಯಬಹುದು. ಒಟ್ಟಾರೆ ನಿಮ್ಮ ಅಮೂಲ್ಯ ಸಮಯ ಹಾಳಾಗದಿರಲಿ.
ಜೀವನ ನಿಮ್ಮದೇ. ಹಲವಾರು ವಿಷಯಗಳನ್ನು ಕಲಿಯಿರಿ. ಕಲಿಕೆ ನಿರಂತರ. ಡ್ರೈವಿಂಗ್, ಟೂ ವೀಲರ್ ಕಲಿಕೆಯೂ ಆಗಬಹುದು. ಒಟ್ಟಿನಲ್ಲಿ ಸಮಯದ ಸದುಪಯೋಗವಾಗಲಿ.
ಜೀವನದಲ್ಲಿ ಯಾವುದಾದರೊಂದು ಸಮಯದಲ್ಲಿ ನಾವು ಓದಿದ ವಿಚಾರಗಳು, ಕಲಿತ ಕಲಿಕೆ ಉಪಯೋಗಕ್ಕೆ ಬರುವುದು ಖಂಡಿತ. ಆದ್ದರಿಂದ ಕಲಿಕೆ ಬಾಳಿನಲ್ಲಿ ಸದಾ ಇರಲಿ. ಅದು ನಿಮ್ಮ ಸಹಾಯಕ್ಕೆ ಬರಲಿ. ಆ ಶಿವನು ಸರ್ವರ ಹರಸಿ ಆಶೀರ್ವದಿಸಲಿ. ಭಾರತದ ಯೋಧರಿಗೆ ಜಯವಾಗಲಿ. ನೀವೇನಂತೀರಿ!?

 

@ಪ್ರೇಮ್@

More from the blog

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...