ನಮಗೆಲ್ಲಾ ತಿಳಿದಂತೆ ಹೃದಯ ನಡುಗುವ ಸುದ್ದಿ ತಿಳಿಯಿತು ಮೊನ್ನೆ. ಹಲವಾರು ವಾಹನಗಳಲ್ಲಿ ಭಾರತೀಯ ಯೋಧರು ಕಾಶ್ಮೀರಕ್ಕೆ ತೆರಳುವಾಗ ಭಯೋತ್ಪಾದಕರು ಒಂದು ಬಸ್ಸಿಗೆ ಗುಂಡಿಟ್ಟು ನಲವತ್ತ ನಾಲ್ಕು ಜನ ಭಾರತೀಯ ಯೋಧರು ಹುತಾತ್ಮರಾದರು. ಅಲ್ಲೊಂದು ಸಣ್ಣ ಡೌಟು. ರಾಜಕೀಯ ನಾಯಕರ ವಾಹನಗಳು ಬರುವಾಗ ಉಳಿದೆಲ್ಲಾ ವಾಹನಗಳನ್ನು ತಡೆಹಿಡಿಯುವ ಭದ್ರತಾ ಪಡೆ ಸೈನಿಕರ ವಾಹನ ಬರುವಾಗ ಭಯೋತ್ಪಾದಕರ ವಾಹನವನ್ನು ನುಸುಳಲು ಅವಕಾಶ ಮಾಡಿಕೊಟ್ಟದ್ದು ಏಕೆ, ಹೇಗೆ ಎಂಬುದು. ಅದೇನೇ ಇರಲಿ, ಅಧ್ರ ನೀರಲ್ಲಿ, ಚಳಿಯಲ್ಲಿ, ಕಲ್ಲು ಮುಳ್ಳುಗಳಲ್ಲಿ, ಕಾಡಲ್ಲಿ, ಆಹಾರ ನೀರಿಲ್ಲದೆ, ಸರಿಯಾದ ಬಟ್ಟೆ, ಶೂಗಳಿಲ್ಲದೆ, ಯುದ್ಧ ಸಾಮಾಗ್ರಿಗಳೂ ಇಲ್ಲದೆಯೂ ದೇಶಕ್ಕಾಗಿ ಹೋರಾಡುತ್ತಿರುವ, ತಮ್ಮ ಪ್ರಾಣವನ್ನೆ ಮುಡುಪಿಟ್ಟ, ತನ್ನ ವೈಯಕ್ತಿಕ ಸುಖವ ಬಲಿಕೊಟ್ಟ, ಯೋಧರಿಗಾಗಿ ಸರಕಾರ ಏನೋ ಮಾಡಿರಬಹುದು. ಪ್ರಜೆಗಳಾದ ನಾವು ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬಹುದು.
ಸರಕಾರ ಅದಕ್ಕಾಗಿ ಈಗ ಯೋಧರಿಗೆಂದೇ ದೆಹಲಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಖಾತೆಯೊಂದನ್ನು ತೆರೆದಿದೆ. ನಾವದಕ್ಕೆ ರೂ. ಒಂದನ್ನು ಕೂಡಾ ಹಾಕಬಹುದು. ಅದು ನೇರವಾಗಿ ಯೋಧರಿಗೆ ಸೇರುವುದು. ಅದರ ವಿಳಾಸ ಹೀಗಿದೆ.

A/C Name- Army Welfare Fund Battle Casualties
A/C No- 90552010165915
IFSC code- SYNB0009055
Address -South Extension Branch, New Delhi
ನಾವು ಭಾರತೀಯರು ಒಂದು ರೂಪಾಯಿಗಳಿಂದ ಪ್ರಾರಂಭಿಸಿ ಎಷ್ಟಾದರೂ ನಮ್ಮ ಕೈಲಾದಷ್ಟು ಸಹಾಯವನ್ನು ಯೋಧರಿಗೆ ಈ ಮೂಲಕ ಮಾಡುವ ಅವಕಾಶವಿದೆ. ಇದನ್ನು ಭಾರತೀಯರಾದ ನಾವು ಉಪಯೋಗಿಸಿಕೊಳ್ಳ ಬಹುದಾಗಿದೆ.
ಸರ್ವ ಜನರ ಹಿತ ಬಯಸುವ ನಾವು ಕಂಬನಿ ಮಿಡಿಯುತ್ತಿದ್ದೇವೆ, ಶಾಂತಿಗಾಗಿ ಪ್ರಾರ್ಥಿಸುತ್ತಿದ್ದೇವೆ. ಭಯೋತ್ಪಾದಕರ ಗುಂಪನ್ನು ಹೊರತಾಗಿ ಸಾಮಾನ್ಯ ಪ್ರಜೆಗಳು ಅವರು ಹಿಂದು,ಮುಸ್ಲಿಮ್, ಕ್ರಿಶ್ಚಿಯನ್,ಜೈನ, ಪಾರ್ಸಿ, ಬೌದ್ಧ ಯಾರೇ ಆಗಿರಲಿ, ಎಲ್ಲರೂ ತಮ್ಮ ಜೀವನದಲ್ಲಿ ಪ್ರೀತಿ, ಶಾಂತಿಯನ್ನೇ ಬಯಸುವರೇ ಹೊರತು ಕೊಲ್ಲುವುದನ್ನಲ್ಲ. ಪ್ರತಿಯೊಬ್ಬರೂ ಶಾಂತಿಯ ಬಯಸಿ, ಶಾಂತಿಯ ಜೀವನ ನಡೆಸಿದಲ್ಲಿ ರಕ್ತಪಾತಕ್ಕೆ ಅವಕಾಶವಿಲ್ಲ, ದೇಹಗಳು ಬಲಿಯಾಗಬೇಕಿಲ್ಲ ಅಲ್ಲವೇ? ನೀವೇನಂತೀರಿ?
@ಪ್ರೇಮ್@