Thursday, February 13, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-30

ನಿಮಗೆಲ್ಲಾ ಋಣಾತ್ಮಕ ಮತ್ತು ಧನಾತ್ಮಕ ಆಲೋಚನೆಗಳ ಬಗ್ಗೆ ಸ್ವಲ್ಪ ಹೇಳೋಣಾಂತ ಈ ವಾರ. ಬದುಕು ಕಟ್ಟುವ ಕಾರ್ಯ ಧನಾತ್ಮಕ ಆಲೋಚನೆಗಳಿಂದಾದರೆ ಬದುಕು ಮುರಿಯುವ ಕಾರ್ಯ ಋಣಾತ್ಮಕ ಆಲೋಚನೆಗಳಿಂದ ಆಗುತ್ತದೆ. ಯಾರಾದರೂ ಉತ್ತಮ ಕಾರ್ಯ ಮಾಡಲು ಹೊರಟರೆ, “ಅವನಿಗೆ ಹುಚ್ಚು ಹಟ, ಅದನ್ನವ ಮಾಡ್ಲಿಕ್ಕುಂಟಾ…” ಹೀಗೆ ಹೇಳುವವರೇ ಹೊರತು ಪ್ರಯತ್ನಿಸು ಎಂದು ಹುರಿದುಂಬಿಸುವವರು ಕಡಿಮೆಯೇ..
ಧನಾತ್ಮಕವಾಗಿ ಆಲೋಚಿಸುವವನು ಬೆಳೆಯುತ್ತಾ ಹೋಗುವನು. ಋಣ ಎಂದರೇನೇ ಕಳೆ ಎಂದರ್ಥ. ಋಣ ಆಲೋಚನೆಗಳು ಬಂದರೆ ಜೀವನವೂ ಋಣವಾಗುತ್ತಾ, ಏರುವ ಬದಲು ನಾವು ಇಳಿಯಲು ಪ್ರಾರಂಭಿಸುತ್ತೇವೆ. ಮನಗಳನ್ನು, ಕಾರ್ಯಗಳನ್ನು, ಸಾಧನೆಗಳನ್ನು ಗೌರವಿಸಲು, ಉತ್ತೇಜಿಸಲು ಕಲಿಯಬೇಕಿದೆ ನಾವಿನ್ನೂ. ನಾವಿಂದು ದೂರುವುದು, ತಪ್ಪುಗಳನ್ನು ಹುಡುಕುವುದರಲ್ಲೆ ಮೈಮರೆತಿದ್ದೇವೆ. ಬೇರೆಯವರನ್ನು ಹೊಗಳುವುದೆಂದರೆ ನಮಗೆ ಅಲರ್ಜಿ. ಬದಲಾಗಿ ಇತರರ ಬಗ್ಗೆ ಬೇಡದ ಕೀಳು ಮಾತನಾಡುವುದರಲ್ಲೆ ಸಂತಸ ಪಡುವವರು ಅನೇಕರಿಹರು.
ಅದು ತಪ್ಪು. ಬದಲಾಗಿ ಯಾರೇನೇ ಹೊಸದನ್ನು ಮಾಡಲು ಹೊರಡಲಿ, ನಾವದನ್ನು ಪ್ರೋತ್ಸಾಹಿಸಲು ಕಲಿಯೋಣ. ನಮ್ಮ ಜೀವನದಲ್ಲಿ ಪ್ರತಿಯೊಬ್ಬರಲ್ಲಿ ದೊರೆಯುವ ಒಳ್ಳೆಯತನವನ್ನು ಕಲಿಯೋಣ.
ನಮ್ಮ ಕೆಟ್ಟ ಗುಣಗಳು ಅನ್ನಿಸಿದ್ದನ್ನು ತೊರೆಯೋಣ. ಇತರರನ್ನು ಗೌರವಿಸಲು ಕಲಿಯೋಣ. ಪ್ರತ್ಯಕ್ಷ ನೋಡಿದರೂ ಪರಾಂಬರಿಸಿ ನೋಡು ಎಂಬ ಗಾದೆಯಂತೆ ಇತರರನ್ನು ಕೆಣಕದೆ, ಅವರನ್ನು ಬದುಕಲು ಬಿಟ್ಟು ನಾವೂ ಬದುಕೋಣ.
ಉದಾತ್ತ ಆಲೋಚನೆಗಳನ್ನು ಬೆಳೆಸಿಕೊಂಡು, ಉದಾತ್ತ ಮಾತುಗಳನ್ನಾಡುತ್ತಾ, ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಂಡು ನಾವೇ ನಮ್ಮ ಜೀವನವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯೋಣ. ನೀವೇನಂತೀರಿ?

 

@ಪ್ರೇಮ್@

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...