Monday, January 26, 2026

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-30

ನಿಮಗೆಲ್ಲಾ ಋಣಾತ್ಮಕ ಮತ್ತು ಧನಾತ್ಮಕ ಆಲೋಚನೆಗಳ ಬಗ್ಗೆ ಸ್ವಲ್ಪ ಹೇಳೋಣಾಂತ ಈ ವಾರ. ಬದುಕು ಕಟ್ಟುವ ಕಾರ್ಯ ಧನಾತ್ಮಕ ಆಲೋಚನೆಗಳಿಂದಾದರೆ ಬದುಕು ಮುರಿಯುವ ಕಾರ್ಯ ಋಣಾತ್ಮಕ ಆಲೋಚನೆಗಳಿಂದ ಆಗುತ್ತದೆ. ಯಾರಾದರೂ ಉತ್ತಮ ಕಾರ್ಯ ಮಾಡಲು ಹೊರಟರೆ, “ಅವನಿಗೆ ಹುಚ್ಚು ಹಟ, ಅದನ್ನವ ಮಾಡ್ಲಿಕ್ಕುಂಟಾ…” ಹೀಗೆ ಹೇಳುವವರೇ ಹೊರತು ಪ್ರಯತ್ನಿಸು ಎಂದು ಹುರಿದುಂಬಿಸುವವರು ಕಡಿಮೆಯೇ..
ಧನಾತ್ಮಕವಾಗಿ ಆಲೋಚಿಸುವವನು ಬೆಳೆಯುತ್ತಾ ಹೋಗುವನು. ಋಣ ಎಂದರೇನೇ ಕಳೆ ಎಂದರ್ಥ. ಋಣ ಆಲೋಚನೆಗಳು ಬಂದರೆ ಜೀವನವೂ ಋಣವಾಗುತ್ತಾ, ಏರುವ ಬದಲು ನಾವು ಇಳಿಯಲು ಪ್ರಾರಂಭಿಸುತ್ತೇವೆ. ಮನಗಳನ್ನು, ಕಾರ್ಯಗಳನ್ನು, ಸಾಧನೆಗಳನ್ನು ಗೌರವಿಸಲು, ಉತ್ತೇಜಿಸಲು ಕಲಿಯಬೇಕಿದೆ ನಾವಿನ್ನೂ. ನಾವಿಂದು ದೂರುವುದು, ತಪ್ಪುಗಳನ್ನು ಹುಡುಕುವುದರಲ್ಲೆ ಮೈಮರೆತಿದ್ದೇವೆ. ಬೇರೆಯವರನ್ನು ಹೊಗಳುವುದೆಂದರೆ ನಮಗೆ ಅಲರ್ಜಿ. ಬದಲಾಗಿ ಇತರರ ಬಗ್ಗೆ ಬೇಡದ ಕೀಳು ಮಾತನಾಡುವುದರಲ್ಲೆ ಸಂತಸ ಪಡುವವರು ಅನೇಕರಿಹರು.
ಅದು ತಪ್ಪು. ಬದಲಾಗಿ ಯಾರೇನೇ ಹೊಸದನ್ನು ಮಾಡಲು ಹೊರಡಲಿ, ನಾವದನ್ನು ಪ್ರೋತ್ಸಾಹಿಸಲು ಕಲಿಯೋಣ. ನಮ್ಮ ಜೀವನದಲ್ಲಿ ಪ್ರತಿಯೊಬ್ಬರಲ್ಲಿ ದೊರೆಯುವ ಒಳ್ಳೆಯತನವನ್ನು ಕಲಿಯೋಣ.
ನಮ್ಮ ಕೆಟ್ಟ ಗುಣಗಳು ಅನ್ನಿಸಿದ್ದನ್ನು ತೊರೆಯೋಣ. ಇತರರನ್ನು ಗೌರವಿಸಲು ಕಲಿಯೋಣ. ಪ್ರತ್ಯಕ್ಷ ನೋಡಿದರೂ ಪರಾಂಬರಿಸಿ ನೋಡು ಎಂಬ ಗಾದೆಯಂತೆ ಇತರರನ್ನು ಕೆಣಕದೆ, ಅವರನ್ನು ಬದುಕಲು ಬಿಟ್ಟು ನಾವೂ ಬದುಕೋಣ.
ಉದಾತ್ತ ಆಲೋಚನೆಗಳನ್ನು ಬೆಳೆಸಿಕೊಂಡು, ಉದಾತ್ತ ಮಾತುಗಳನ್ನಾಡುತ್ತಾ, ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಂಡು ನಾವೇ ನಮ್ಮ ಜೀವನವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯೋಣ. ನೀವೇನಂತೀರಿ?

 

@ಪ್ರೇಮ್@

More from the blog

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...

ವಿಟ್ಲ ಜಾತ್ರೋತ್ಸವದಲ್ಲಿ ಮನರಂಜಿಸಿದ ವಿಟ್ಲೋತ್ಸವ..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಲಾವಧಿ ಜಾತ್ರೋತ್ಸವದಲ್ಲಿ ಮಂಗಳವಾರ ರಾತ್ರಿ ದೇವರ ಹೂ ತೇರು ಉತ್ಸವ ನಡೆಯಿತು. ವಿಆರ್ ಸಿ ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ ವಿಟ್ಲ ಸಾರಥ್ಯದಲ್ಲಿ 33...

ಮಾಣಿ : ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮ..

ಬಂಟ್ವಾಳ : ಮಾಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ ಹಾಗೂ ಸಂಘ ಸಂಸ್ಥೆಗಳ ಜಂಟಿ...