Wednesday, February 12, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-49

ಮಳೆಗಾಲ. ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಹೋಳುಗಳು, ಸೆಂಡಿಗೆ ಮಾಡಿಡಲು ಯಾರಿಗಿದೆ ಸಮಯ? ರೆಡಿ ಮಾಡಲು, ಬೇಯಿಸಲು,ಒಣಗಿಸಲು, ಕಾಯಿಸಲು ಸಮಯ ಹೇಗಿಲ್ಲವೋ ಹಾಗೆ ಕುಳಿತು ತಿನ್ನಲಿಕ್ಕೂ ಸಮಯವಿಲ್ಲ ಈಗ! ಎಲ್ಲರೂ ದುಡಿಯುವವರೇ, ಎಲ್ಲರೂ ಶ್ರೀಮಂತರೇ, ಆದರೆ ಹೃದಯದಲ್ಲಲ್ಲ! ಸಹಾಯಕ್ಕೆ ಯಾರೂ ಬರಲಾರರು! ಜನರಿಗೆ ಫೋನ್ ಮಾಡಿದರೆ ಮಾತನಾಡಲೂ ಸಮಯವಿಲ್ಲ, ಸಾಮಾಜಿಕ ಜಾಲ ತಾಣಗಳ ಹೊರತಾಗಿ!
ಇಂಥ ಯುಗದಲ್ಲಿ ಫಾಸ್ಟ್ ಲೈಫ್, ಫಾಸ್ಟ್ ಫುಡ್, ರೆಡಿಮೇಡ್ ಊಟ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ! ಹಾಗಿರುವಾಗ ಜೊತೆಜೊತೆಗೇ ರೋಗಗಳೂ ಕೂಡಾ. ದುಬಾರಿ ಚಿಕಿತ್ಸೆ! ರೋಗಗಳು ಬಂದ ಮೇಲೆ ಮಾಡುವ ಪರಿಹಾರಕ್ಕಿಂತ ರೋಗಗಳು ಬರದಂತೆ ತಡೆಯುವುದು ಮೇಲಲ್ಲವೇ?
ಅದಕ್ಕಾಗಿ ಉತ್ತಮ ಆರೋಗ್ಯ ನಿಯಮಗಳ ಪಾಲನೆಯನ್ನು ನಾವೇ ಮಾಡಿಕೊಳ್ಳಬೇಕು. ಕಂಡ ಕಂಡಲ್ಲಿ ಸಿಕ್ಕಿದ್ದನ್ನು ತಿಂದು ಹೊಟ್ಟೆಯನ್ನು ಕಸದ ಡಬ್ಬಿಯನ್ನಾಗಿ ಮಾಡದೆ, ಸರಿಯಾದ ಸಮಯಕ್ಕೆ ಬೇಕಾದಷ್ಟೆ ತಿಂದು ಆರೋಗ್ಯ ಬಿಗಡಾಯಿಸದೆ ಇರಿಸಬೇಕಾಗಿದೆ.
ನಿಮ್ಮ ಆರೋಗ್ಯ ಕೆಟ್ಟರೆ ನಿಮಗೆ ನೋವು ಮಾತ್ರ, ಕಷ್ಟ ನಿಮ್ಮನ್ನು ಅವಲಂಬಿಸಿ ಬದುಕುತ್ತಿರುವವರಿಗೆ ಎಂಬುದು ನೆನಪಿರಲಿ. ನಾವು ಇತರರಿಗೆ ಭಾರವಾಗಿ ಬದುಕುವಂತಾಗಬಾರದು. ಅದಕ್ಕಾಗಿ ಕುಡಿತ, ಹೊಗೆಸೊಪ್ಪು, ಸಿಗರೇಟು, ಬೀಡಿ ಮೊದಲಾದ ತಂಬಾಕು ಉತ್ಪನ್ನ ಹಾಗೂ ಅಮಲು ಪದಾರ್ಥಗಳ ಬಳಕೆ ನಿಲ್ಲಿಸುವುದಲ್ಲದೆ, ಮನೆ ಮನಗಳನ್ನೂ ಸ್ವಚ್ಛವಾಗಿರಿಸಿಕೊಳ್ಳಬೇಕು.
ಮಳೆ ನೀರಿಗೆ ಕಾಲುಗಳ ಸ್ವಚ್ಛತೆ ಅತ್ಯವಶ್ಯಕ. ನಿಂತ ನೀರನ್ನು ತುಳಿದಾಗ ಅದರಲ್ಲಿನ ಫಂಗಸ್ ಕಾಲಿಗೆ ಅಂಟಿ, ತುರಿಕೆ, ನವೆ ಉಂಟಾಗುತ್ತದೆ. ಕಾಡು, ಗುಡ್ಡ, ತೋಟಗಳಲ್ಲಿ ನಡೆಯುವಾಗ ಜಿಗಣೆಗಳು ಅಂಟಿಕೊಂಡು ತುಂಬಾ ರಕ್ತ ಹೀರಿ ಬಳಿಕ ಬಿದ್ದು ಹೋಗುತ್ತವೆ. ಬಳಿಕ ನಮ್ಮ ಕಾಲು ಕಡಿತ ಪ್ರಾರಂಭವಾಗಿ ಕಡಿಮೆಯಾಗುವುದೇ ಇಲ್ಲ. ಇದನ್ನೆಲ್ಲ ತಡೆಯುವಂತಾಗಬೇಕು.
ಶೂ ಧರಿಸಬೇಕು.
ಜಾಗರೂಕರಾಗಿರಿ. ನಿಮ್ಮ ಕೈಕಾಲುಗಳ ಬಗ್ಗೆ. ಮುಖಕ್ಕೆ ಮಾತ್ರ ಮೇಕಪ್ ಮಾಡುವುದಲ್ಲ. ನೀವೇನಂತೀರಿ?

@ಪ್ರೇಮ್@

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...