Thursday, June 26, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-49

ಮಳೆಗಾಲ. ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಹೋಳುಗಳು, ಸೆಂಡಿಗೆ ಮಾಡಿಡಲು ಯಾರಿಗಿದೆ ಸಮಯ? ರೆಡಿ ಮಾಡಲು, ಬೇಯಿಸಲು,ಒಣಗಿಸಲು, ಕಾಯಿಸಲು ಸಮಯ ಹೇಗಿಲ್ಲವೋ ಹಾಗೆ ಕುಳಿತು ತಿನ್ನಲಿಕ್ಕೂ ಸಮಯವಿಲ್ಲ ಈಗ! ಎಲ್ಲರೂ ದುಡಿಯುವವರೇ, ಎಲ್ಲರೂ ಶ್ರೀಮಂತರೇ, ಆದರೆ ಹೃದಯದಲ್ಲಲ್ಲ! ಸಹಾಯಕ್ಕೆ ಯಾರೂ ಬರಲಾರರು! ಜನರಿಗೆ ಫೋನ್ ಮಾಡಿದರೆ ಮಾತನಾಡಲೂ ಸಮಯವಿಲ್ಲ, ಸಾಮಾಜಿಕ ಜಾಲ ತಾಣಗಳ ಹೊರತಾಗಿ!
ಇಂಥ ಯುಗದಲ್ಲಿ ಫಾಸ್ಟ್ ಲೈಫ್, ಫಾಸ್ಟ್ ಫುಡ್, ರೆಡಿಮೇಡ್ ಊಟ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ! ಹಾಗಿರುವಾಗ ಜೊತೆಜೊತೆಗೇ ರೋಗಗಳೂ ಕೂಡಾ. ದುಬಾರಿ ಚಿಕಿತ್ಸೆ! ರೋಗಗಳು ಬಂದ ಮೇಲೆ ಮಾಡುವ ಪರಿಹಾರಕ್ಕಿಂತ ರೋಗಗಳು ಬರದಂತೆ ತಡೆಯುವುದು ಮೇಲಲ್ಲವೇ?
ಅದಕ್ಕಾಗಿ ಉತ್ತಮ ಆರೋಗ್ಯ ನಿಯಮಗಳ ಪಾಲನೆಯನ್ನು ನಾವೇ ಮಾಡಿಕೊಳ್ಳಬೇಕು. ಕಂಡ ಕಂಡಲ್ಲಿ ಸಿಕ್ಕಿದ್ದನ್ನು ತಿಂದು ಹೊಟ್ಟೆಯನ್ನು ಕಸದ ಡಬ್ಬಿಯನ್ನಾಗಿ ಮಾಡದೆ, ಸರಿಯಾದ ಸಮಯಕ್ಕೆ ಬೇಕಾದಷ್ಟೆ ತಿಂದು ಆರೋಗ್ಯ ಬಿಗಡಾಯಿಸದೆ ಇರಿಸಬೇಕಾಗಿದೆ.
ನಿಮ್ಮ ಆರೋಗ್ಯ ಕೆಟ್ಟರೆ ನಿಮಗೆ ನೋವು ಮಾತ್ರ, ಕಷ್ಟ ನಿಮ್ಮನ್ನು ಅವಲಂಬಿಸಿ ಬದುಕುತ್ತಿರುವವರಿಗೆ ಎಂಬುದು ನೆನಪಿರಲಿ. ನಾವು ಇತರರಿಗೆ ಭಾರವಾಗಿ ಬದುಕುವಂತಾಗಬಾರದು. ಅದಕ್ಕಾಗಿ ಕುಡಿತ, ಹೊಗೆಸೊಪ್ಪು, ಸಿಗರೇಟು, ಬೀಡಿ ಮೊದಲಾದ ತಂಬಾಕು ಉತ್ಪನ್ನ ಹಾಗೂ ಅಮಲು ಪದಾರ್ಥಗಳ ಬಳಕೆ ನಿಲ್ಲಿಸುವುದಲ್ಲದೆ, ಮನೆ ಮನಗಳನ್ನೂ ಸ್ವಚ್ಛವಾಗಿರಿಸಿಕೊಳ್ಳಬೇಕು.
ಮಳೆ ನೀರಿಗೆ ಕಾಲುಗಳ ಸ್ವಚ್ಛತೆ ಅತ್ಯವಶ್ಯಕ. ನಿಂತ ನೀರನ್ನು ತುಳಿದಾಗ ಅದರಲ್ಲಿನ ಫಂಗಸ್ ಕಾಲಿಗೆ ಅಂಟಿ, ತುರಿಕೆ, ನವೆ ಉಂಟಾಗುತ್ತದೆ. ಕಾಡು, ಗುಡ್ಡ, ತೋಟಗಳಲ್ಲಿ ನಡೆಯುವಾಗ ಜಿಗಣೆಗಳು ಅಂಟಿಕೊಂಡು ತುಂಬಾ ರಕ್ತ ಹೀರಿ ಬಳಿಕ ಬಿದ್ದು ಹೋಗುತ್ತವೆ. ಬಳಿಕ ನಮ್ಮ ಕಾಲು ಕಡಿತ ಪ್ರಾರಂಭವಾಗಿ ಕಡಿಮೆಯಾಗುವುದೇ ಇಲ್ಲ. ಇದನ್ನೆಲ್ಲ ತಡೆಯುವಂತಾಗಬೇಕು.
ಶೂ ಧರಿಸಬೇಕು.
ಜಾಗರೂಕರಾಗಿರಿ. ನಿಮ್ಮ ಕೈಕಾಲುಗಳ ಬಗ್ಗೆ. ಮುಖಕ್ಕೆ ಮಾತ್ರ ಮೇಕಪ್ ಮಾಡುವುದಲ್ಲ. ನೀವೇನಂತೀರಿ?

@ಪ್ರೇಮ್@

More from the blog

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಪ್ರಭಾಕರ ಪ್ರಭು ಆಗ್ರಹ..

ಬಂಟ್ವಾಳ : ರಾಜ್ಯದ ವಸತಿ ಇಲಾಖೆಯ ಅಧಿನದಲ್ಲಿರುವ ರಾಜೀವ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರಾದ ಬಿ. ಆರ್. ಪಾಟೀಲ್ ಯವರು ವಸತಿ ಸಚಿವರಾದ ಜಮೀರ್...

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...