Thursday, February 13, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-26

ನವವರುಷದ ನವೀನ ಹಾರೈಕೆ ನುಡಿಗಳು

ನಲಿಯುತಿರಲಿ ನಿತ್ಯ ಮನ
ನವೀನವಾಗಲಿ ಜೀವನ//

ನವವರುಷದ ನವದಿನಗಳಲಿ
ನಗೆಗಡಲಲಿ ತೇಲಿಸಲಿ,
ನೆನೆದ ಕನಸು ನನಸಾಗಲಿ
ನಂಬಿಕೆ ನಾಶವಾಗದಿರಲಿ//

ನೋವು ಕಡಿಮೆಯಾಗಲಿ
ನೋಟ ಅಂದವಾಗಿರಲಿ
ನುಡಿಯು ಶುಭ್ರವಾಗಿರಲಿ
ನವ್ಯ ನಡತೆ ನಮ್ಮದಾಗಲಿ//

ನಮನ ಹರಿದು ಬರುತಲಿರಲಿ
ನೋವು ದೂರವಾಗಲಿ
ನೊಂದ ಮನವ ಸಂತೈಸಲಿ
ನಾಡು ಬೆಳಗಿ ಸಾಗಲಿ//

ನೀರು ಶುದ್ಧ ದೊರಕಲಿ
ನಾಯಿಯ ನಿಷ್ಠೆ ಬರಲಿ
ನೋಟು ಬದಲಾಗದಿರಲಿ
ನೊಂದ ಮನಕೆ ಶಾಂತಿ ಸಿಗಲಿ//

ನಲಿವು ತುಂಬಿ ಬರಲಿ
ನಗೆಯ ಚಿಲುಮೆ ಚಿಮ್ಮಿ ಬರಲಿ
ನುಡಿಯು ಸತ್ಯ ನುಡಿಯಲಿ
ನಡೆಯು ಮುಕ್ತವಾಗಿರಲಿ//

ನಾಮ ಸ್ಮರಣೆಯಾಗಲಿ
ನವ್ಯ ಬಾಳು ಬೆಳಗಲಿ
ನವ್ಯ ಕಾರ್ಯ ಸಾಗಲಿ
ನಮ್ಮಿಂದ ತಪ್ಪು ಆಗದಿರಲಿ//

ನವಿಲ ಹಾಗೆ ಕುಣಿಯಲಿ
ನೇರ ನುಡಿಯು ಬೆಳಗಲಿ
ನಿಸರ್ಗ ಪ್ರೀತಿ ಹೆಚ್ಚಲಿ
ನೂರಾರು ಆಸೆ ಪೂರೈಸಲಿ//

ನಬದಿ ಹೊಸತನ ಮೂಡಲಿ
ನಯನದಿ ಮಿಂಚು ಸುಳಿಯಲಿ
ನಕ್ಕು ಮನವು ಹಗುರವಾಗಲಿ
ನವ ವರುಷ ನವ ಚೇತನ ತರಲಿ..

ನವ ವರುಷವು ಎಲ್ಲರಿಗೂ ಸವಿನೆನಪು, ಸವಿಬಾಳು ತರಲಿ, ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಅದರತ್ತ ಮುನ್ನಡೆಯೋಣ ಎನ್ನುತ್ತಾ, ಭವ್ಯ ಬಾಳಿಗೆ ಬಂದ ವರುಷದ ದಿನಗಳು ಸಂತಸ ತರಲಿ ಎಂಬ ಹಾರೈಕೆಯೊಂದಿಗೆ,

@ಪ್ರೇಮ್@
[email protected]

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...