Friday, June 27, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-26

ನವವರುಷದ ನವೀನ ಹಾರೈಕೆ ನುಡಿಗಳು

ನಲಿಯುತಿರಲಿ ನಿತ್ಯ ಮನ
ನವೀನವಾಗಲಿ ಜೀವನ//

ನವವರುಷದ ನವದಿನಗಳಲಿ
ನಗೆಗಡಲಲಿ ತೇಲಿಸಲಿ,
ನೆನೆದ ಕನಸು ನನಸಾಗಲಿ
ನಂಬಿಕೆ ನಾಶವಾಗದಿರಲಿ//

ನೋವು ಕಡಿಮೆಯಾಗಲಿ
ನೋಟ ಅಂದವಾಗಿರಲಿ
ನುಡಿಯು ಶುಭ್ರವಾಗಿರಲಿ
ನವ್ಯ ನಡತೆ ನಮ್ಮದಾಗಲಿ//

ನಮನ ಹರಿದು ಬರುತಲಿರಲಿ
ನೋವು ದೂರವಾಗಲಿ
ನೊಂದ ಮನವ ಸಂತೈಸಲಿ
ನಾಡು ಬೆಳಗಿ ಸಾಗಲಿ//

ನೀರು ಶುದ್ಧ ದೊರಕಲಿ
ನಾಯಿಯ ನಿಷ್ಠೆ ಬರಲಿ
ನೋಟು ಬದಲಾಗದಿರಲಿ
ನೊಂದ ಮನಕೆ ಶಾಂತಿ ಸಿಗಲಿ//

ನಲಿವು ತುಂಬಿ ಬರಲಿ
ನಗೆಯ ಚಿಲುಮೆ ಚಿಮ್ಮಿ ಬರಲಿ
ನುಡಿಯು ಸತ್ಯ ನುಡಿಯಲಿ
ನಡೆಯು ಮುಕ್ತವಾಗಿರಲಿ//

ನಾಮ ಸ್ಮರಣೆಯಾಗಲಿ
ನವ್ಯ ಬಾಳು ಬೆಳಗಲಿ
ನವ್ಯ ಕಾರ್ಯ ಸಾಗಲಿ
ನಮ್ಮಿಂದ ತಪ್ಪು ಆಗದಿರಲಿ//

ನವಿಲ ಹಾಗೆ ಕುಣಿಯಲಿ
ನೇರ ನುಡಿಯು ಬೆಳಗಲಿ
ನಿಸರ್ಗ ಪ್ರೀತಿ ಹೆಚ್ಚಲಿ
ನೂರಾರು ಆಸೆ ಪೂರೈಸಲಿ//

ನಬದಿ ಹೊಸತನ ಮೂಡಲಿ
ನಯನದಿ ಮಿಂಚು ಸುಳಿಯಲಿ
ನಕ್ಕು ಮನವು ಹಗುರವಾಗಲಿ
ನವ ವರುಷ ನವ ಚೇತನ ತರಲಿ..

ನವ ವರುಷವು ಎಲ್ಲರಿಗೂ ಸವಿನೆನಪು, ಸವಿಬಾಳು ತರಲಿ, ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಅದರತ್ತ ಮುನ್ನಡೆಯೋಣ ಎನ್ನುತ್ತಾ, ಭವ್ಯ ಬಾಳಿಗೆ ಬಂದ ವರುಷದ ದಿನಗಳು ಸಂತಸ ತರಲಿ ಎಂಬ ಹಾರೈಕೆಯೊಂದಿಗೆ,

@ಪ್ರೇಮ್@
[email protected]

More from the blog

Bantwal : ಬಂಟ್ವಾಳ ಪುರಸಭೆಯ ವಿಶೇಷ ಸಭೆ : ಪೌರಕಾರ್ಮಿಕರ ವೇತನ ಕುರಿತು ಚರ್ಚೆ..

ಬಂಟ್ವಾಳ : ಪೌರಕಾರ್ಮಿಕರ ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭಾ ವಿಶೇಷ ಸಭೆ ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು. ಪುರಸಭೆಯ ಪೌರಕಾರ್ಮಿಕರ ವಿಶೇಷ ನೇಮಕಾತಿ ಹಾಗೂ...

ಇಂದಿನಿಂದ ಮುಹರ್ರಮ್ ತಿಂಗಳು ಪ್ರಾರಂಭ : ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಣೆ..

ಮಾಣಿ: ಗುರುವಾರ ರಾತ್ರಿ ಚಂದ್ರದರ್ಶನವಾದ ಮಾಹಿತಿ ಪ್ರಬಲವಾಗಿರುವುದರಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹಾಗೂ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಬಳಿ ಖಚಿತವಾದ ಕಾರಣ ಇಂದಿನಿಂದ ಮುಹರ್ರಮ್ ಪ್ರಾರಂಭ ಎಂದು ಖಾಝಿ...

Kempegowda Jayanti : ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ..

ಬಂಟ್ವಾಳ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಶಿಲ್ದಾರ್ ಅರ್ಚನಾ ಭಟ್ ಮಾತನಾಡಿ, ದೂರದೃಷ್ಟಿಯ ಚಿಂತನೆಯ ವ್ಯಕ್ತಿಯಾಗಿದ್ದ...

ವಿಟ್ಲ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ವಿಟ್ಲ ವರ್ತಕರ ಸಂಘದಿಂದ ತಯಾರಿಸಲಾದ ಪ್ಲಾಸ್ಟಿಕ್ ನಿಷೇಧದ ಸ್ಟಿಕ್ಕರ್ ನ್ನು ವರ್ತಕರ ಸಂಘದ ಸಹಕಾರದೊಂದಿಗೆ ವಿಟ್ಲ ಪೇಟೆಯ...