Wednesday, February 12, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-46

ಓಟು, ಫಲಿತಾಂಶ ಎಲ್ಲ ಮುಗಿದಾಯ್ತು! ಇಂದಿನಿಂದ ಶಾಲೆಗಳ ಪುನರಾರಂಭ. ನಮ್ಮ ಬಾಲ್ಯ ನೆನಪಾಗುತ್ತದೆ. ಆಗೆಲ್ಲಾ ಎಪ್ರಿಲ್ ಹತ್ತಕ್ಕೆ ಫಲಿತಾಂಶ ಬಂದು ರಜೆ ಕೊಟ್ಟರೆ ಜೂನ್ ಒಂದರಂದೇ ಶಾಲೆ ಪ್ರಾರಂಭ. ಆ ದಿನಕ್ಕೆ ಕಾಯುತ್ತಿದ್ದೆವು ನಾವು. ಈಗಿನಂತೆ ವರುಷಕ್ಕೊಂದು ಹೊಸ ಬ್ಯಾಗ್ ಇಲ್ಲದಿದ್ದರೂ, ಹೊಸ ಪುಸ್ತಕಗಳು, ಹೊಸ ನೀಲಿ-ಬಿಳಿ ಬಟ್ಟೆ, ಹೊಸ ಕೊಡೆ! ಹೌದು! ಆಗಿನ ಸಡಗರವೇ ಬೇರೆ. ಪುಸ್ತಕದ ಪಟ್ಟಿಯಲ್ಲಿದ್ದ ಪುಸ್ತಕಗಳನ್ನೆಲ್ಲ ತಂದು ವಾರಕ್ಕೆ ಮೊದಲೇ ಬೈಂಡ್ ಹಾಕಿ, ಲೇಬಲ್ ಹಾಕಿ ಬ್ಯಾಗ್ ನಲ್ಲಿ ತುಂಬಿಸಿ ಇಟ್ಟರೆ, ಬಟ್ಟೆ ಪೀಸ್ ತೆಗೆದುಕೊಂಡು ಟೈಲರಲ್ಲಿ ಕೊಟ್ಟಿದ್ದಿದ್ದರೆ ನಾವು ಶಾಲೆಗೆ ಹೋಗಲು ರೆಡಿ ಆದಂತೆ!
ಈಗಿನ ಮಕ್ಕಳಿಗೆ ಶಾಲೆಗೆ ಹೋಗುವುದೆಂದರೆ ಅಲರ್ಜಿ, ಬೇಸರ, ಬೋರು. ಕಾರಣ ಅಲ್ಲಿ ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್, ಟಿಕ್ ಟಾಕ್, ವಿ ಚಾಟ್, ಹೆಲೋ ಯಾವುದೂ ನೋಡಲಾಗದು..ಎಡಿಟ್ ಮಾಡಿ ಹಾಕಲಾಗದು, ಬಿದ್ದುಕೊಂಡು ಮೊಬೈಲ್ ಒತ್ತಲಾಗದು! ಟಿ.ವಿ ನೋಡಲಾಗದು, ಮನೆಯ ಹಾಗೆ ಕುಳಿತಲ್ಲಿಗೇ ಯಾರೂ ಊಟ ತಂದು ಕೊಡಲಾರರು! ತರಕಾರಿ ಸಾಂಬಾರಿನಲ್ಲಿ ಊಟ ಸೇರದು, ಹಾಲಂತೂ ಕುಡಿಯಲು ಬೇಡವೇ ಬೇಡ! ಶಿಕ್ಷಕರ ಶಿಸ್ತೆಂದರೆ ಆಗದು. ಸ್ನೇಹಿತರೊಡನೆ ಹರಟೆ ಹೊಡೆಯುವುದು ಬಿಟ್ಟರೆ ಮತ್ಯಾವ ಕೆಲಸವೂ ಇಷ್ಟವಾಗದ ಹಲವಾರು ವಿದ್ಯಾರ್ಥಿಗಳಿದ್ದಾರೆ.
ಗುರಿ, ಉದ್ದೇಶಗಳು ಜೀವನದಲ್ಲಿರಬೇಕು, ಅದಕ್ಕಾಗಿ ಪ್ರತಿ ಕ್ಷಣ ನಮ್ಮ ಹಿರಿಯರು ಬುದ್ಧಿವಾದ ಹೇಳುತ್ತಿರುತ್ತಾರೆ. ನಮಗದು ಕಹಿಯೆನಿಸಿದರೂ ಬದುಕಲು ಬೇಕಾದ ಔಷಧವದು. ತೆಗೆದುಕೊಳ್ಳಲೇ ಬೇಕು. ತಂದೆ, ತಾಯಿ, ಹಿರಿಯರ ಮಾರ್ಗದರ್ಶನವಿರದ ಅನಾಥ ಮಕ್ಕಳು ಕೆಟ್ಟ ಬುದ್ಧಿ ಕಲಿತು ತಮ್ಮ ಜೀವನವನ್ನು ನರಕ ಮಾಡಿಕೊಳ್ಳುವುದನ್ನು ನಿಜ ಜೀವನದಲ್ಲೂ, ಸಿನೆಮಾದಲ್ಲೂ ನೋಡಿದ್ದೇವೆ.
ಅದೇನೇ ಇರಲಿ, ಬಾಳಿಗೊಂದು ಗುರಿಯಿರಲಿ, ಯಾವ ಶಾಲೆಯಾದರೂ ಸರಿ, ಕಲಿಯುವ ಛಲ ನಿಮ್ಮಲ್ಲಿರಲಿ. ಎಲ್ಲರಿಗೂ ಒಳ್ಳೆಯದಾಗಲಿ. ನೀವೇನಂತೀರಿ?

 

@ಪ್ರೇಮ್@

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...