Thursday, February 13, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-44

ಬರಸಿಡಿಲಿನಂತೆ ಬಿಸಿಲ ಬೇಗೆ, ನೀರಿಗಾಗಿ, ಮಳೆಗಾಗಿ ಕಾತರಿಸುವ ಪರಿ ನಮ್ಮದಾಗಿದೆ. ಇದರ ನಡುವೆ ರಸ್ತೆ ಅಗಲೀಕರಣ ನಡೆದಿದೆ. ನೂರಾರು ವರುಷಗಳಿಂದ ಬಾಳಿ, ಬದುರಿ ಉಸಿರಿಗೆ ಗಾಳಿ ನೀಡಿ, ನೆರಳು, ಆಶ್ರಯ, ಹಣ್ಣು ನೀಡುತ್ತಿದ್ದ ಬೃಹತ್ ಗಾತ್ರದ ಸಾವಿರಾರು ಮರಗಳು ತಮ್ಮ ಜೀವಕಳೆದುಕೊಂಡು ಅನಾಥ ಶವಗಳಂತೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ನೋಡಿದರೆ ಕರುಳು ಹಿಂಡುತ್ತದೆ. ಮರಗಳಿಗೂ ಜೀವವಿದೆ, ಅದು ನಮಗೆ ಉಪಕಾರಿ ತಾನೇ? ಹೊರದೇಶಗಳಲ್ಲಿ ಬೆಳೆದ ಮರಗಳನ್ನು ತೆಗೆಯಬೇಕೆಂದರೆ ಬೇರು ಸಹಿತ ಕಿತ್ತು ಬೇರೆಡೆ ನೆಡುತ್ತಾರೆ. ನಮ್ಮಲ್ಲಿ ಮರ ಕಡಿದು ಮಾರಿ ಅದರಲ್ಲಿ ಎಷ್ಟು ದುಡ್ಡು ಬರಬಹುದೆಂದು ಅಂದಾಜಿಸಿ ಹರಾಜು ಹಾಕಿ ಒಬ್ಬನಿಗೆ ವಹಿಸಿ ಬಿಡುತ್ತಾರೇನೋ. ಅವರು ಬೇರನ್ನೊಂದು ಬಿಟ್ಟು ಉಳಿದ ಭಾಗ ಮಾರಾಟ ಮಾಡಿ ಬಿಡುತ್ತಾರೆ! ತಾನು ಬಳಸಿದ ಪಬ್ಲಿಕ್ ಟಾಯ್ಲೆಟ್ ನಲ್ಲಿ ನೀರು ಹಾಕದೆಯೂ, ಹಾಳು ಮಾಡಿಯೂ, ಅಲ್ಲಿ ಬಂದು ಶರಾಬು ಕುಡಿದು ಹೋಗುವವರು ಇರುವ ವರೆಗೆ ಭಾರತ ಉದ್ಧಾರವಾಗದು! ಸಿವಿಕ್ ಸೆನ್ಸ್ ಎನ್ನುವ ಕಾಮನ್ ಸೆನ್ಸ್ ನಮಗಿರಬೇಕು! ನಾವು ಹೊರಗೆ ತಿಂದು ಅದರ ಪ್ಲಾಸ್ಟಿಕನ್ನು ಬಸ್ಸು, ಕಾರುಗಳ ಕಿಟಕಿ ಗಾಜಿನಿಂದ ಸಿಕ್ಕ ಸಿಕ್ಕಲ್ಲಿ ಹೊರಗೆ ಬಿಸಾಕುವುದನ್ನೆ ನಮ್ಮ ಮಕ್ಕಳು ಕಲಿಯುತ್ತಾರೆ. ಬದಲಾಗಿ ಅದನ್ನು ಬ್ಯಾಗಿನಲ್ಲೋ ಕವರ್ ನಲ್ಲೋ ಮನೆಗೇ ತಂದು ಡಿಸ್ ಪೋಸ್ ಮಾಡಿದರಾಗದೇ!? ತುಂಡು ತುಂಡು ಬಟ್ಟೆ ತೊಟ್ಟು ಪಿಜ್ಝಾ ಬರ್ಗರ್ ತಿನ್ನುವುದು ಮಾತ್ರವಲ್ಲ, ಇದನ್ನು ಕೂಡಾ ಹೊರದೇಶದವರಿಂದ ನಾವು ಕಲಿಯಬೇಕಿದೆ!
ಯಾಕೆ ಹೊಸದನ್ನು ಕಂಡು ಹಿಡಿಯುವ ಭಾರತೀಯರು ಕಡಿಮೆ ಎಂದರೆ ಮೊದಲನೆಯ ಉತ್ತರ ಯಾರಾದರೂ ಏನಾದರೂ ತಂದು ಕೊಟ್ಟರೆ ನಾವು ಆರಾಮದಲ್ಲಿ ಉಪಯೋಗಿಸಿಕೊಂಡು ಇರುತ್ತೇವೆ. ಹೊಸದನ್ನು ಹುಡುಕಲು ಕಷ್ಟಪಡುವ ಕಾರ್ಯ ನಮಗೆ ಬೇಡ!
ನಾವು ಆರಾಮ ಪ್ರಿಯರು. ಯಾರಾದರೂ ಕಷ್ಟಪಟ್ಟು ಸಾಧನೆ ಮಾಡಲು ಹೊರಟರೆ “ಅವನಿಗೆ ಬೇರೇನು ಕೆಲಸವಿಲ್ಲ, ಅದೇನೋ ಮಾಡ್ತಾನಂತೆ, ಮಾಡ್ಲಿ ನೋಡುವ” ಎಂದು ಚೀಪ್ ಆಗಿ ಮಾತನಾಡುವವರು. ಬೇರೆಯವರ ಕೆಲಸಕ್ಕೆ ಗೌರವ ಕೊಡದವರು! ಅದಕ್ಕೆ ಹಲವಾರು ಜನ ವಿದೇಶಕ್ಕೆ ಹೋಗಿ, ಯಾರೂ ಪರಿಚಯ ಇಲ್ಲದ ಬೇರೆ ಊರಿಗೆ ಹೋಗಿ ತಮ್ಮ ಸಾಧನೆ ಮಾಡುತ್ತಾರೆ!
ಅದೇನೇ ಇರಲಿ, ನಮ್ಮ ಸಾಧನೆ ಗಿಡಮರಗಳನ್ನು ಬೆಳೆಸುವುದಿರಲಿ. ಸಾಲುಮರದ ತಿಮ್ಮಕ್ಕನಂಥ ಸಾವಿರಾರು ಮಂದಿಯನ್ನು ನೋಡುವಂತಾಗಲಿ. ಕಾಲಕಾಲಕ್ಕೆ ಸರಿಯಾಗಿ ಮಳೆಬರಲಿ, ಪ್ರಕೃತಿಗೆ ಪ್ಲಾಸ್ಟಿಕ್ ಸೇರದಂತಾಗಲಿ, ಮಣ್ಣಿಗೆ ರಾಸಾಯನಿಕ ಸುರಿಯದ ಸಾವಯವ ರೈತರು ಹುಟ್ಟಲಿ. ಮರಗಳನ್ನು ಸಾಯಿಸದೆ, ಕಡಿಯದೆ ಬೇರೆ ವಿಧಾನಗಳಲ್ಲಿ ರಸ್ತೆಯ ಅಗಲೀಕರಣವಾಗಲಿ. ನೀವೇನಂತೀರಿ?

 

@ಪ್ರೇಮ್@

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...