Thursday, February 5, 2026

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-44

ಬರಸಿಡಿಲಿನಂತೆ ಬಿಸಿಲ ಬೇಗೆ, ನೀರಿಗಾಗಿ, ಮಳೆಗಾಗಿ ಕಾತರಿಸುವ ಪರಿ ನಮ್ಮದಾಗಿದೆ. ಇದರ ನಡುವೆ ರಸ್ತೆ ಅಗಲೀಕರಣ ನಡೆದಿದೆ. ನೂರಾರು ವರುಷಗಳಿಂದ ಬಾಳಿ, ಬದುರಿ ಉಸಿರಿಗೆ ಗಾಳಿ ನೀಡಿ, ನೆರಳು, ಆಶ್ರಯ, ಹಣ್ಣು ನೀಡುತ್ತಿದ್ದ ಬೃಹತ್ ಗಾತ್ರದ ಸಾವಿರಾರು ಮರಗಳು ತಮ್ಮ ಜೀವಕಳೆದುಕೊಂಡು ಅನಾಥ ಶವಗಳಂತೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ನೋಡಿದರೆ ಕರುಳು ಹಿಂಡುತ್ತದೆ. ಮರಗಳಿಗೂ ಜೀವವಿದೆ, ಅದು ನಮಗೆ ಉಪಕಾರಿ ತಾನೇ? ಹೊರದೇಶಗಳಲ್ಲಿ ಬೆಳೆದ ಮರಗಳನ್ನು ತೆಗೆಯಬೇಕೆಂದರೆ ಬೇರು ಸಹಿತ ಕಿತ್ತು ಬೇರೆಡೆ ನೆಡುತ್ತಾರೆ. ನಮ್ಮಲ್ಲಿ ಮರ ಕಡಿದು ಮಾರಿ ಅದರಲ್ಲಿ ಎಷ್ಟು ದುಡ್ಡು ಬರಬಹುದೆಂದು ಅಂದಾಜಿಸಿ ಹರಾಜು ಹಾಕಿ ಒಬ್ಬನಿಗೆ ವಹಿಸಿ ಬಿಡುತ್ತಾರೇನೋ. ಅವರು ಬೇರನ್ನೊಂದು ಬಿಟ್ಟು ಉಳಿದ ಭಾಗ ಮಾರಾಟ ಮಾಡಿ ಬಿಡುತ್ತಾರೆ! ತಾನು ಬಳಸಿದ ಪಬ್ಲಿಕ್ ಟಾಯ್ಲೆಟ್ ನಲ್ಲಿ ನೀರು ಹಾಕದೆಯೂ, ಹಾಳು ಮಾಡಿಯೂ, ಅಲ್ಲಿ ಬಂದು ಶರಾಬು ಕುಡಿದು ಹೋಗುವವರು ಇರುವ ವರೆಗೆ ಭಾರತ ಉದ್ಧಾರವಾಗದು! ಸಿವಿಕ್ ಸೆನ್ಸ್ ಎನ್ನುವ ಕಾಮನ್ ಸೆನ್ಸ್ ನಮಗಿರಬೇಕು! ನಾವು ಹೊರಗೆ ತಿಂದು ಅದರ ಪ್ಲಾಸ್ಟಿಕನ್ನು ಬಸ್ಸು, ಕಾರುಗಳ ಕಿಟಕಿ ಗಾಜಿನಿಂದ ಸಿಕ್ಕ ಸಿಕ್ಕಲ್ಲಿ ಹೊರಗೆ ಬಿಸಾಕುವುದನ್ನೆ ನಮ್ಮ ಮಕ್ಕಳು ಕಲಿಯುತ್ತಾರೆ. ಬದಲಾಗಿ ಅದನ್ನು ಬ್ಯಾಗಿನಲ್ಲೋ ಕವರ್ ನಲ್ಲೋ ಮನೆಗೇ ತಂದು ಡಿಸ್ ಪೋಸ್ ಮಾಡಿದರಾಗದೇ!? ತುಂಡು ತುಂಡು ಬಟ್ಟೆ ತೊಟ್ಟು ಪಿಜ್ಝಾ ಬರ್ಗರ್ ತಿನ್ನುವುದು ಮಾತ್ರವಲ್ಲ, ಇದನ್ನು ಕೂಡಾ ಹೊರದೇಶದವರಿಂದ ನಾವು ಕಲಿಯಬೇಕಿದೆ!
ಯಾಕೆ ಹೊಸದನ್ನು ಕಂಡು ಹಿಡಿಯುವ ಭಾರತೀಯರು ಕಡಿಮೆ ಎಂದರೆ ಮೊದಲನೆಯ ಉತ್ತರ ಯಾರಾದರೂ ಏನಾದರೂ ತಂದು ಕೊಟ್ಟರೆ ನಾವು ಆರಾಮದಲ್ಲಿ ಉಪಯೋಗಿಸಿಕೊಂಡು ಇರುತ್ತೇವೆ. ಹೊಸದನ್ನು ಹುಡುಕಲು ಕಷ್ಟಪಡುವ ಕಾರ್ಯ ನಮಗೆ ಬೇಡ!
ನಾವು ಆರಾಮ ಪ್ರಿಯರು. ಯಾರಾದರೂ ಕಷ್ಟಪಟ್ಟು ಸಾಧನೆ ಮಾಡಲು ಹೊರಟರೆ “ಅವನಿಗೆ ಬೇರೇನು ಕೆಲಸವಿಲ್ಲ, ಅದೇನೋ ಮಾಡ್ತಾನಂತೆ, ಮಾಡ್ಲಿ ನೋಡುವ” ಎಂದು ಚೀಪ್ ಆಗಿ ಮಾತನಾಡುವವರು. ಬೇರೆಯವರ ಕೆಲಸಕ್ಕೆ ಗೌರವ ಕೊಡದವರು! ಅದಕ್ಕೆ ಹಲವಾರು ಜನ ವಿದೇಶಕ್ಕೆ ಹೋಗಿ, ಯಾರೂ ಪರಿಚಯ ಇಲ್ಲದ ಬೇರೆ ಊರಿಗೆ ಹೋಗಿ ತಮ್ಮ ಸಾಧನೆ ಮಾಡುತ್ತಾರೆ!
ಅದೇನೇ ಇರಲಿ, ನಮ್ಮ ಸಾಧನೆ ಗಿಡಮರಗಳನ್ನು ಬೆಳೆಸುವುದಿರಲಿ. ಸಾಲುಮರದ ತಿಮ್ಮಕ್ಕನಂಥ ಸಾವಿರಾರು ಮಂದಿಯನ್ನು ನೋಡುವಂತಾಗಲಿ. ಕಾಲಕಾಲಕ್ಕೆ ಸರಿಯಾಗಿ ಮಳೆಬರಲಿ, ಪ್ರಕೃತಿಗೆ ಪ್ಲಾಸ್ಟಿಕ್ ಸೇರದಂತಾಗಲಿ, ಮಣ್ಣಿಗೆ ರಾಸಾಯನಿಕ ಸುರಿಯದ ಸಾವಯವ ರೈತರು ಹುಟ್ಟಲಿ. ಮರಗಳನ್ನು ಸಾಯಿಸದೆ, ಕಡಿಯದೆ ಬೇರೆ ವಿಧಾನಗಳಲ್ಲಿ ರಸ್ತೆಯ ಅಗಲೀಕರಣವಾಗಲಿ. ನೀವೇನಂತೀರಿ?

 

@ಪ್ರೇಮ್@

More from the blog

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...