Thursday, February 13, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-41

ರಜೆಯ ಮಜಾ ಅನುಭವಿಸಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಿ ಪೋಷಕರೇ..ಬೇಸಿಗೆ ಶಿಬಿರ ಒಂದೆರಡು ದಿನದ ಮಟ್ಟಿಗೆ ತೊಂದರೆಯಿಲ್ಲ, ಮಕ್ಕಳು ಎಷ್ಟು ಕಲಿತರೂ ನಮಗೆ ಸಾಲದು. ಕ್ರಾಫ್ಟ್, ಸಂಗೀತ, ನೃತ್ಯ, ವಾದ್ಯ, ತಬಲ, ಅಬಾಕಸ್, ಸ್ಪೆಲಿಂಗ್, ಬ್ರೈನ್ ಪವರ್..ಹೀಗೆ ಕ್ಲಾಸ್ ಗಳಿಗೆ ಲೆಕ್ಕವೇ ಇಲ್ಲ..ಮಕ್ಕಳಿಗೆ ಸ್ವಾತಂತ್ರ್ಯ, ಸ್ವತಂತ್ರವಾಗಿ ತನ್ನದೇ ದೃಷ್ಟಿಯಲ್ಲಿ ಪರಿಸರ ವೀಕ್ಷಸಲು, ಪರಿಸರದಲ್ಲಿನ ವಿಸ್ಮಯಗಳನ್ನು ತಿಳಿದುಕೊಳ್ಳಲು, ಹೋಗಲಿ ಹಗಲು ರಾತ್ರಿ ಹೇಗೆಂದು ತಿಳಿಯಲೂ ಕೂಡಾ ಯೂಟ್ಯೂಬ್ ಸರ್ಚ್ ಮಾಡಿಯೇ ತಿಳಿಯುವ ಕಾಲ ಬಂದಿದೆ.
ಮಕ್ಕಳನ್ನು ಕ್ಯೂರಿಯಾಸಿಟಿ ಇರುವ ಮಕ್ಕಳಾಗಲು, ಮಕ್ಕಳಾಗಿ ಯೋಚನೆ ಮಾಡಲು ಬಿಡಬೇಕೇ ಹೊರತು ನಮ್ಮ ತಲೆಯಲ್ಲಿರುವುದನ್ನೆಲ್ಲ ಅವರಿಗೆ ತುರುಕಿ ಅವರನ್ನು ಫ್ರಿಜ್ಗಳ ಹಾಗೆಯೋ ಶಾಪಿಂಗ್ ಮಾಲ್ ಗಳ ಹಾಗೆಯೋ ಇರಿಸಬಾರದು. ಅಲ್ಲಿ ಎಲ್ಲವೂ ಇದೆ. ಆದರೆ ನಮ್ಮ ಕೈಗೆಟಕುವ ದರದಲ್ಲಲ್ಲ, ಬದಲಾಗಿ ಆರೋಗ್ಯಕ್ಕೂ ಒಳ್ಳೆಯದಾದದ್ದು ಅದಲ್ಲ, ಶೋ ಮಾತ್ರ! ಮಕ್ಕಳು ಉಪಯುಕ್ತ , ಇತರರು ಅನುಕರಿಸುವಂಥವರಾಗಬೇಕೇ ಹೊರತು ಇತರರು ದೂರ ಇಡುವ ಸ್ವಭಾವದವರಾಗದಂತೆ ಇರಿಸಬೇಕು. ಅವರ ಆಲೋಚನೆಗಳಿಗೂ ಮಹತ್ವ ಅವಕಾಶ ಕೊಡುವಂತಾಗಬೇಕು. ಅವರಿಗೆ ಅವರ ಆಲೋಚನೆಗಳಿಗೆ ರೆಕ್ಕೆ ಪುಕ್ಕ ಸಿಕ್ಕಿದಾಗ ಅವರು ಏನಾದರೂ ಸಾಧಿಸುವತ್ತ ಒಲವು ತೋರುತ್ತಾರೆ. ಆದರೆ ಬಲವಂತದಿಂದ ಎಲ್ಲವನ್ನೂ ಅವರೆಡೆಗೆ ತುರುಕಿದರೆ ಯಾವುದೇ ವಿಷಯದ ಬಗ್ಗೆ ಆಸಕ್ತಿ ಇರದೆ ಮೂಕರಾಗುತ್ತಾರೆ. ಎಗರಾಡುತ್ತಾರೆ, ಕಿರುಚಾಡುತ್ತಾರೆ. ತಮ್ಮ ಅಸಹಾಯಕತೆ ಹಾಗೂ ಅತೃಪ್ತಿಯನ್ನು ಎಲ್ಲಾ ಕಡೆ ಕಕ್ಕುತ್ತಾರೆ.
ಆದಕಾರಣ ಅವರಿಗೂ ಸ್ವಾತಂತ್ರ್ಯ ಸಿಗಲಿ. ಮಾನಸಿಕವಾಗಿ, ದೈಹಿಕವಾಗಿ ಅವರು ಸ್ವತಂತ್ರರಾಗಲು ಬಿಡೋಣ. ನೀವೇನಂತೀರಿ?

 

@ಪ್ರೇಮ್@

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...