Sunday, June 29, 2025

ಎಸ್.ಐ.ಪ್ರಸನ್ನ ನೇತ್ರತ್ವದಲ್ಲಿ ಜುಗಾರಿ ಅಡ್ಡೆಗೆ ದಾಳಿ : 15 ಜನರ ಬಂಧನ

ಬಂಟ್ವಾಳ: ಜುಗಾರಿ ಆಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸರು ಆಟದ ಲ್ಲಿ ನಿರತರಾಗಿದ್ದ 15 ಜನರನ್ನು ಬಂಧಿಸಿ ಆಟಕ್ಕೆ ಬಳಸಲಾಗಿದ್ದ ನಗದು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ತುಂಬೆ ಗ್ರಾಮದ ನೇತ್ರಾವತಿ ನದಿಯ ಬದಿಯಲ್ಲಿ ಆಡುತ್ತಿದ್ಧ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೋಲೀಸರು ಆಟದಲ್ಲಿ ನಿರತರಾಗಿದ್ದ

.ಅಮಿತ ಶೆಟ್ಟಿ, .ರಾಮಚಂದ್ರ,ಸಂತೋಷ್ ಕುಮಾರ್,ಧೀರಜ್,ಸುಜಯ್,.ನಜೀರ್,.ಮೊಹಮದ್ ಮುಸ್ತಾಫಾ,.ಕಿಶೋರ್,ಮಹಮದ್ ಷರೀಫ್,.ನಿತ್ಯಾನಂದ,.ರಮೇಶ್, ನಾಗೇಶ್, .ರೋಷನ್ ವೇಗಸ್,ಹೇಮಚಂದ್ರ,ಮತ್ತು .ಚೇತನ್, ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ದಾಳಿಯಲ್ಲಿ ಒಟ್ಟು *38000/-ರೂ* ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಟಾರ್ಪಲ್, ಚಾರ್ಜ್ ಅಬಲೆ ಬ್ಯಾಟರಿ ಮತ್ತು ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಆ. ಕ್ರ.58/19 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ಯಲ್ಲಿರುತ್ತದೆ .
ಬಂಟ್ವಾಳ ಎ.ಎಸ್.ಪಿ. ಸೈದುಲು ಅದಾವತ್ ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ ಪ್ರೋಬೆಶನರಿ ಪಿ.ಎಸ್.ಐ. ವಿನೋದ್ , ಎಚ್.ಸಿ. ಗಳಾದ ಜನಾರ್ದನ , ಸುರೇಶ್,ಪಿ.ಸಿ.ಗಳಾದ ನಜೀರ್,ಪುನೀತ್,ಬಸವರಾಜ್,ಆದರ್ಶ,ವಿವೇಕ್,ಉಮೇಶ್,ಸುರೇಶ್, ಎಚ್.ಜಿ.ಅಶೋಕ, ರವರು ದಾಳಿಯಲ್ಲಿ ಭಾಗವಹಿಸುತ್ತಾರೆ.

More from the blog

Farewell : ಬೀಳ್ಕೊಡುಗೆ ಸಮಾರಂಭ..

ಕೊಯಿಲ : ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 14 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ಗೈದು, ನಿವೃತ್ತಿ ಹೊಂದಿರುವ ಶ್ರೀ. ರಮೇಶ್ ಮಯ್ಯ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿ 14 ವರ್ಷ ಕರ್ತವ್ಯ...

ಅಂಚೆ ಗ್ರಾಹಕರಿಗೆ ಗುಡ್ ನ್ಯೂಸ್ : ಪೋಸ್ಟ್ ಆಫೀಸ್ ಗಳಲ್ಲಿ ಇನ್ನುಂದೆ ಡಿಜಿಟಲ್ ಪಾವತಿ ಶುರು!

ಭಾರತೀಯ ಪೋಸ್ಟ್ ಇಲಾಖೆ ಆಧುನಿಕ ತಂತ್ರಜ್ಞಾನದೊಂದಿಗೆ ಜನರಿಗೆ ವೇಗದ, ಸುರಕ್ಷಿತ ಸೇವೆಗಳನ್ನು ಒದಗಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿ, ಆಗಸ್ಟ್‌ನಿಂದ ದೇಶಾದ್ಯಂತ ಪೋಸ್ಟ್ ಆಫೀಸ್‌ಗಳಲ್ಲಿ UPI ಮೂಲಕ ಪಾವತಿ ಸೌಲಭ್ಯ ಜಾರಿಗೆ...

Police Hat : ರಾಜ್ಯದ ಪೊಲೀಸ್ ಪೇದೆಗಳಿಗೆ ಹೊಸ ಟೋಪಿ..!  

ರಾಜ್ಯದ ಪೊಲೀಸ್ ಹಾಗೂ ಮುಖ್ಯ ಪೇದೆಗಳ ಟೋಪಿಯಲ್ಲಿ ಬದಲಾವಣೆಯಾಗಲಿದೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣ ಪೊಲೀಸರು ಬಳಸುವ...

ಸರಕಾರಿ ಹಿ. ಪ್ರಾ. ಶಾಲೆ ಕೆಮ್ಮಾನುಪಲ್ಕೆ : ಶಾಲಾ ಮಂತ್ರಿಮಂಡಲ ಪ್ರಮಾಣವಚನ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಸರಕಾರಿ ಹಿ ಪ್ರಾ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ ಮಂತ್ರಿಗಳಿಗೆ ಪ್ರಮಾಣವಚನ ವನ್ನು ಶಾಲಾ ಮುಖ್ಯ ಶಿಕ್ಷಕ ಉದಯಕುಮಾರ್...