ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿಯ 2019ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, 2019ನೇ ಸಾಲಿನ ಅಧ್ಯಕ್ಷನಾಗಿ ಜೇಸಿ. ಹರ್ಷರಾಜ್ ಸಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೇಸಿ ಹರಿಪ್ರಸಾದ್ ಕುಲಾಲ್, ಜೇಸಿ ಧೀರಜ್ ಹೆಚ್, ಜೇಸಿ ಶನ್ಫತ್ ಷರೀಫ್, ಜೇಸಿ ಜಯರಾಜ್ ಬಂಗೇರ ಹಾಗೂ ಜೆಎಫ್ಡಿ ಗಾಯತ್ರಿ ಲೋಕೇಶ್ ಆಯ್ಕೆಗೊಂಡಿರುತ್ತಾರೆ. ಕಾರ್ಯದರ್ಶಿಯಾಗಿ ಜೇಸಿ ರವೀಂದ್ರ ಕುಕ್ಕಾಜೆ, ಖಜಾಂಚಿಯಾಗಿ ಜೇಸಿ ಹರಿಶ್ಚಂದ್ರ ಆಳ್ವ, ಜೇಸಿರೆಟ್ ಅಧ್ಯಕ್ಷೆಯಾಗಿ ಜೇಸಿ ಅವಿತಾ ಹರ್ಷರಾಜ್, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಜೇಜೇಸಿ ರೋನಿತ್ ಆಯ್ಕೆಗೊಂಡಿರುತ್ತಾರೆ. 2019ನೇ ಸಾಲಿನ ಜೇಸಿಐ ಜೋಡುಮಾರ್ಗ ನೇತ್ರಾವತಿಯ ಪದಗ್ರಹಣ ಸಮಾರಂಭವು ಜ.23ರಂದು ನಡೆಯಲಿದೆ.

