ಮಡಂತ್ಯಾರು: ಇಂಡಿಯನ್ ಸೀನಿಯರ್ ಛೇಂಬರ್ ಮಡಂತ್ಯಾರು ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಇಂಡಿಯನ್ ಸೀನಿಯರ್ ಛೇಂಬರ್ ಮಂಗಳೂರು ಇವರು ಆಯೋಜಿಸಿದ ಕಾರ್ಯಕ್ರಮವನ್ನು ಜೆಸಿಐ ನ ಪೂರ್ವರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಪುರಂದರ ರೈ ಉದ್ಘಾಟಿಸಿದರು.
ಸ್ಥಾಪಕಾಧ್ಯಕ್ಷರಾಗಿ ಡಾ. ಹರ್ಷ ಸಂಪಿಗೆತ್ತಾಯ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯದರ್ಶಿ ಪ್ರವೀಣ್ ಕುಮಾರ್, ಕೋಶಾಧಿಕಾರಿ ತುಳಸೀದಾಸ್ ಪೈ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ರಾಷ್ಟ್ರೀಯ ಅಧಿಕಾರಿಗಳು ಪ್ರಮಾಣವಚನ ಭೋದಿಸಿದರು.

ಅತಿಥಿಗಳಾಗಿ ರಾಷ್ಟ್ರೀಯ ನಿರ್ದೇಶಕರಾದ ಅರವಿಂದ ರಾವ್, ಚಿತ್ರ ಕುಮಾರ್ ಮತ್ತು ಸ್ಥಳೀಯ ವಿದ್ಯಾ ಸಾಗರ್ ವಿದ್ಯಾ ಸಂಸ್ಥೆಯ ವೆಂಕಟ್ ರೆಡ್ಡಿ, ಮಂಗಳೂರು ಲೀಜಿಯೊನ್ ನ ಕೋಶಾಧಿಕಾರಿ ಅನಿಲ್ ಕುಮಾರ್, ನಿರ್ದೇಶಕ ಹೀರಾಚಂದ್ ಮತ್ತಿತರರು ಉಪಸ್ಥಿತರಿದ್ದು, ಸಂಸ್ಥೆಗೆ ಶುಭ ಹಾರೈಸಿದರು. ಮಂಗಳೂರು ಲೀಜಿಯೊನ್ ನ ಅಧ್ಯಕ್ಷ ಪೀಟರ್ ಪಿಂಟೋ ಅವರು ಕಾರ್ಯಕ್ರಮದ ಪ್ರಥಮಾರ್ಧದ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ದ್ವಿತೀಯಾರ್ಧದ ಅಧ್ಯಕ್ಷತೆಯನ್ನು ಡಾ. ಹರ್ಷ ಸಂಪಿಗೆತ್ತಾಯ ವಹಿಸಿದ್ದರು. ಕಾರ್ಯದರ್ಶಿ ಪ್ರವೀಣ್ ಕುಮಾರ್ ಅವರು ವಂದಿಸಿದರು.