ಜೆ ಸಿ ಐ ಬಂಟ್ವಾಳ ಇದರ ಜೆ ಸಿ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಜರಗಿತು.


ನಾವೂರು ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಜೀವನ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೆ ಸಿ ಐ ಬಂಟ್ವಾಳ ದ ಈ ಕಾರ್ಯಕ್ರಮ ತುಂಬಾ ಪ್ರಶಂಸನೀಯ ಎಂದರು. ಕೊರೋನ ಸಂಕಷ್ಟದ ಸಮಯದಲ್ಲಿ ಕೂಡ ಜೆ ಸಿ ಐ ಬಂಟ್ವಾಳ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಉಚಿತ ಹೊಕ್ಸಿಮೀಟರ್ ನೀಡಿ ಸಹಕರಿಸಿದ್ದನ್ನು ಅವರು ಸ್ಮರಿಸಿದರು.
ಜೆ ಸಿ ಐ ಬಂಟ್ವಾಳ ಅಧ್ಯಕ್ಷ ಉಮೇಶ್ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಉಮೇಶ್ ಕುಲಾಲ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಮಣಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ದೇಶಕರಾದ ನ್ಯಾಯವಾದಿ ಸುರೇಶ್ ನಾವೂರ್, ವೈದ್ಯದಿಕಾರಿ ಜೀವನ್ ಶೆಟ್ಟಿ ಯವರನ್ನು ಕೊರೋನ ಸಮಯದ ಸೇವೆಯನ್ನು ಗೌರವಿಸಿ ಸನ್ಮಾನಿಸಿ ದರು, ಈ ಸಂದರ್ಭದಲ್ಲಿ ವಲಯಧಿಕಾರಿ ಯತೀಶ್ ಕರ್ಕೇರ, ಪೂರ್ವಧ್ಯಕ್ಷರಾದ ಸಂತೋಷ್ ಜೈನ್, ಲೋಕೇಶ್ ಸುವರ್ಣ, ಸಂದೀಪ್ ಸಾಲ್ಯಾನ್, ಸದಾನಂದ ಬಂಗೇರ, ಸದಸ್ಯರಾದ ಮನೋಜ್ ಕನಪಾಡಿ, ವಿದ್ಯಾ ಉಮೇಶ್ ಹಾಗು ಇತರರು ಉಪಸ್ಥಿತರಿದ್ದರು.
ಆಸ್ಪತ್ರೆ ಮೇಲ್ವಿಚಾರಕಿ ಚಂದ್ರಪ್ರಭಾ ಸ್ವಾಗತಿಸಿ, ಸಿಸ್ಟರ್ ಮೀನಾಕ್ಷಿ ವಂದಿಸಿದರು.
,ಕಾರ್ಯದರ್ಶಿ ರೋಷನ್ ರೈ ಕಾರ್ಯಕ್ರಮ ನಿರೂಪಿಸಿದರು.

