Tuesday, January 27, 2026

ಐಎಫ್ಎಫ್ ಹತ್ತೊಂಬತ್ತನೆಯ ವರ್ಷದ ಹಜ್ ಸೇವೆ ಉದ್ಘಾಟನೆ

ಮುಂಬಯಿ: ಇಂಡಿಯಾ ಫ್ರೆಟರ್ನಿಟಿ ಫೋರಮ್ ಇದರ ಹತ್ತೊಂಬತ್ತನೆಯ ವರ್ಷದ ಹಜ್ ಸೇವೆಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ಜಿದ್ದಾದ ಸಾಫಿರ ಆಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಹಮ್ಮದ್ ಅಲಿ (ಮ್ಯಾನೇಜಿಂಗ್ ಡೈರೆಕ್ಟರ್ ಜಿದ್ದಾ ನ್ಯಾಷನಲ್ ಹಾಸ್ಪಿಟಲ್) ನೆರವೇರಿಸಿದರು.

ಫ್ರೆಟರ್ನಿಟಿ ಹಜ್ ಸರ್ವಿಸ್ ಲಾಂಛನವನ್ನು ಡಾ.ಜಂಶೀತ್(ಅಲ್ ಅಬೀರ್ ಹಾಸ್ಪಿಟಲ್ ಸ್ಟ್ರಾಟೆಜಿಕ್ ಪ್ಲಾನಿಂಗ್ ವೈಸ್ ಛೇರ್ಮನ್) ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ ಎಫ್ ಎಫ್ ರೀಜನಲ್ ಅಧ್ಯಕ್ಷ ಫಾಯಝುದ್ದೀನ್ ಚೆನ್ನೈ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಅಜೀಜ್ ಕಿದ್ವಾಯಿ ಅಧ್ಯಕ್ಷರು ಐಪಿಡಬ್ಲ್ಯೂ ಎಫ್, ಝಕಾರಿಯಾ ಬಿಲಾದಿ, ತಮೀಮ್ ಕೌಸರ್, ಜುನೈದ್ ಅಹಮದ್ ಇಂಡಿಯಾ ಫೋರಮ್, ಸಾಲಾಹ್ ಕಾರಡನ್ ಕಾರ್ಯದರ್ಶಿ ಎಂಇಎಸ್, ಕೆಟಿಎ ಮುನೀರ್ ಅಧ್ಯಕ್ಷರು ಓಐಸಿಸಿ, ನೂರುದ್ದೀನ್ ಖಾನ್ ಅಧ್ಯಕ್ಷರು AMUOBA , haagu ಅಶ್ರಫ್ ಮೊರಯುರ್ ಅಧ್ಯಕ್ಷರು ಐಎಸ್ಎಫ್ ಭಾಗವಹಿಸಿದ್ದರು.

ಇಂಡಿಯಾ ಫ್ರೆಟರ್ನಿಟಿ ಫೋರಮ್ ಎಕ್ಸ್ಕ್ಯೂಟಿವ್ ಸದಸ್ಯ ಅಬ್ದುಲ್ ಗಣಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ನ ಹತ್ತೊಂಬತ್ತು ವರ್ಷಗಳ ಹಜ್ ಸೇವೆಯ ಮೈಲಿಗಲ್ಲನ್ನು ವಿವರಿಸಿದರು. ಈ ವರ್ಷ ಸುಮಾರು 1200ರಷ್ಟು ಸ್ವಯಂ ಸೇವಕರು ಹಜ್ ಯಾತ್ರಾರ್ಥಿಗಳ ಸೇವೆಯಲ್ಲಿ ಇರುತ್ತಾರೆ ಹಾಗು ಮಕ್ಕಾ ಹಾಗು ಮದೀನದಲ್ಲಿ ಮೊದಲ ಹಜ್ ತಂಡ ಬಂದು ಕೊನೆಯ ಹಜ್ ಕೊನೆಯ ಹಜ್ ತಂಡ ಸ್ವದೇಶಕ್ಕೆ ಮರಳುವ ವರೆಗೆ ಇಂಡಿಯಾ ಫ್ರೆಟರ್ನಿಟಿ ಫೋರಮ್ ಹಜ್ ಸೇವೆ ಇರುತ್ತದೆ ಎಂದು  ಎಂದು ಐ ಎಫ್ ಎಫ್ ತಿಳಿಸಿದೆ.ಕಾರ್ಯಕ್ರಮದಲ್ಲಿ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರೆ ಮುದಸ್ಸಿರ್ ಅಕ್ಕರಂಗಡಿ ವಂದಿಸಿದರು.

More from the blog

ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ.ಚೌಟ

ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್‌ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ ಕಾರಣ ಇದೀಗ ಸಚಿವ ದಿನೇಶ್‌ ಗುಂಡೂರಾವ್‌ ಅವರು ಘನವೆತ್ತ ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ದಕ್ಷಿಣ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...