ವಿಟ್ಲ: ಇಡ್ಕಿದು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಇಡ್ಕಿದು-ಕುಳ ಸಾಮಾನ್ಯ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ವೈಯುಕ್ತಿಕ ನಳ್ಳಿನೀರಿನ ಮೀಟರ್ ಅಳವಡಿಸಿದ್ದು ಮುಂದಿನ ತಿಂಗಳಿನಿಂದ ಕಡ್ಡಾಯವಾಗಿ ಮೀಟರ್ ರೀಡಿಂಗ್ ಮಾಡಿ ಕರ ವಸೂಲಿ ಮಾಡುವಂತೆ ನೀರಿನ ಕರವಸೂಲಿಗಾರರಿಗೆ ಸೂಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗಳ ಚರಂಡಿಗಳನ್ನು ತುರ್ತಾಗಿ ದುರಸ್ತಿ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ನೈರ್ಮಲ್ಯ ಸಮಿತಿಯನ್ನು ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಸದಸ್ಯರನ್ನೊಳಗೊಂಡಂತೆ ರಚಿಸಿ ಕಾರ್ಯವೈಖರಿಯ ಬಗ್ಗೆ ಮಾಹಿತಿಯನ್ನು ಜಿಲ್ಲಾ ಶುಶ್ರೂಷಣಾಧಿಕಾರಿ ಮಿಸ್ಸಿ ಇವರು ನೀಡಿದರು. ಮಳೆಗಾಲದಲ್ಲಿ ಬರಬಹುದಾದ ಡೆಂಗ್ಯೂ, ಚಿಕುನ್ ಗುನ್ಯ, ಮತ್ತು ಅತಿಸಾರಭೇದಿ ರೋಗಗಳ ಮುಂಜಾಗೃತೆಯ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಮನೆಭೇಟಿ ಸಂದರ್ಭದಲ್ಲಿ ತಿಳಿ ಹೇಳುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಸದಸ್ಯರುಗಳಾದ ಜಯರಾಮ ಕಾರ್ಯಾಡಿಗುತ್ತು, ಚಿದಾನಂದ ಪೆಲತ್ತಿಂಜ, ಸತೀಶ್ ಕೆಂರ್ದೆಲು, ಕೇಶವ ಉರಿಮಜಲು, ರಮೇಶ ಪೂಜಾರಿ ಸೂರ್ಯ , ಜನಾರ್ದನ ಕಂ, ಕರುಣಾಕರ ಅಡ್ಯಾಲು, ವಸಂತಿ ಒಡ್ಯರ್ಪೆ, ಜಗದೀಶ್ವರಿ ಕುವೆತ್ತಿಲ, ಬೇಬಿ ಸೂರ್ಯ, ಪ್ರೇಮಾ ಅರ್ಕೆಚ್ಚಾರು, ರಸಿಕಾ ಕಂಬಳದಡ್ಡ, ರತ್ನ ಸೇಕೆಹಿತ್ಲು, ಶಾರದಾ ಅಡ್ಯಾಲು ಭಾಗವಹಿಸಿದ್ದರು.
ಪಿಡಿಒ ಗೋಕುಲ್ದಾಸ್ ಭಕ್ತ ಸ್ವಾಗತಿಸಿದರು. ಕಾರ್ಯದರ್ಶಿ ಎ.ಬಿ.ಅಜಿತ್ ಕುಮಾರ್ ವಂದಿಸಿದರು. ಪಂಚಾಯಿತಿ ಸಿಬ್ಬಂದಿ ವರ್ಗ ಸಹಕರಿಸಿದರು.

