Thursday, July 3, 2025

” ಹ್ಯಾಪಿ ನ್ಯೂ ಇಯರ್”

2019ನೇ ಇಸವಿ ಕಳೆದು ಇದೀಗ 2020ಕ್ಕೆ ಕಾಲಿರಿಸಿದ್ದೇವೆ. ಕಳೆದೊಂದು ದಶಕದಿಂದ 2020 ಬರಲಿ ಎಂಬ ನಿರೀಕ್ಷೆ ನಮ್ಮದಾಗಿತ್ತು. ಜೊತೆಗೆ ಈ 20-20 ತಲುಪುವ ಹೊತ್ತಿಗೆ ನಮ್ಮ ಸುತ್ತಮುತ್ತಲೂ ಮಹತ್ತರ ಬದಲಾವಣೆಗಳಾಗಬೇಕು, ಸುಧಾರಣೆಗಳಾಗಬೇಕು ಎಂಬ ಕನಸು ಕಂಡಿದ್ದೆವು. ನಮ್ಮ ದೇಶದ ರಾಷ್ಟ್ರಪತಿ ಗಳಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರು 2020ರ ಹೊತ್ತಿಗೆ ದೇಶವನ್ನು ಸೂಪರ್ ಪವರ್ ದೇಶವನ್ನಾಗಿಸಿ, ಅದಕ್ಕಾಗಿ ಕನಸು ಕಾಣಿರಿ, ಆದರೆ “ನಿದ್ದೆಯಲ್ಲಿ ಕಾಣುವಂಥದ್ದು ಕನಸಲ್ಲ ನಿದ್ದೆಗೆಡುವಂತೆ ಮಾಡುವುದು ಇದೆಯಲ್ಲಾ ಅದೇ ನಿಜವಾದ ಕನಸು” ಎಂದೂ ಸ್ಪಷ್ಟವಾಗಿ ಹೇಳಿದ್ದರು . ಅದರಂತೆ ಎಲ್ಲರೂ ದೇಶ ಸುಧಾರಣೆಯಾಗಲಿ ಎಂದು ಕನಸು ಕಂಡರೇ ವಿನಃ ನಮ್ಮೊಳಗಿನ ಸುಧಾರಣೆ ಮಾಡಿಕೊಳ್ಳಲೇ ಇಲ್ಲ. ಹೀಗಾಗಿಯೇ ಇಷ್ಟೊಂದು ಮಾನವ ಸಂಪನ್ಮೂಲ ಹೊಂದಿರುವ ಭಾರತ ನಿರೀಕ್ಷಿತ ಮಟ್ಟದಲ್ಲಿ ಬೆಳೆದು ನಿಂತಿಲ್ಲ. ಆದರೂ ಹೊಸ ಕನಸು ಆಶಯಗಳೊಂದಿಗೆ ವಿಶ್ವಗುರು ಆಗಲು ಹೊರಟಿರುವ ಭಾರತದಲ್ಲಿನ ಆಂತರಿಕ ಸಮಸ್ಯೆಗಳು ನಾನಾ ಸಮಸ್ಯೆಗಳ ಸೃಷ್ಟಿಸಿತ್ತಾ , ಭಾರತದ ನಾಗಲೋಟಕ್ಕೆ ತೊಡಕಾಗುತ್ತಿದೆ. ಈ‌ ನಿಟ್ಟಿನಲ್ಲಿ ಪರಿವರ್ತನೆ ಆಗಬೇಕಿರುವುದು ನಮ್ಮ ನಮ್ಮಲ್ಲೇ ಎನ್ನುವುದು ನಮ್ಮ‌ಅರಿವಿಗೆ ಬಂದಾಗಲಷ್ಟೇ ದೇಶ ಸುಧಾರಣೆ ಸಾಧ್ಯವಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ, ಅದರ ಪಾಲಕರಾಗಿ ಭಾರತವನ್ನು 2020 ರಲ್ಲಿಯೇ ಸೂಪರ್ ಪವರ್ ಮಾಡುವಲ್ಲಿ ನಮ್ಮ‌ನಮ್ಮ‌ಜವಬ್ದಾರಿಗಳನ್ನು ಪ್ರಾಮಾಣಿಕವಾಗಿ ‌ನಿಭಾಯಿಸೋಣ. ಎನ್ನುವ ಆಶಯದೊಂದಿಗೆ 2020 ಸರ್ವರ ಬಾಳಿನಲ್ಲಿ ಸುಖ-ಸಂತೋಷ-ಸಮೃದ್ಧಿ-ಸಂಭ್ರಮವನ್ನೇ ತರಲಿ.. ಎನ್ನುವ ಆಶಯ ನಮ್ಮದು –

ಪ್ರಶಾಂತ್ ಪೂಂಜಾಲಕಟ್ಟೆ ಸಂಪಾದಕರು ನಮ್ಮ ಬಂಟ್ವಾಳ ವೆಬ್ ನ್ಯೂಸ್

More from the blog

ಬೆಂಜನಪದವು ಶಾಲೆ : ಉಚಿತ ಯಕ್ಷಗಾನ ನಾಟ್ಯ ತರಗತಿ ಶುಭಾರಂಭ..

ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ ಗೊಂಡಿತು. ಫೌಂಡೇಶನ್ ನ ಸಂಚಾಲಕರಾದ ಶ್ರೀ ವಾಸುದೇವ ಐತಾಳ್ ದೀಪ...

ಜು.12ರಂದು ಬಂಟ್ವಾಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್..

ಬಂಟ್ವಾಳ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜು.12ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇವರ...

ಅಕ್ರಮ ಗಣಿಗಾರಿಕೆ: ಲಾರಿಗಳನ್ನು ತಡೆದ ಗ್ರಾಮಸ್ಥರು..

ಬಂಟ್ವಾಳ: ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ. ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ...

Bantwal : ನೇತ್ರಾವತಿ ‌ನದಿಯಲ್ಲಿ ಅಪರಿಚಿತ ಗಂಡಸಿನ‌ ಮೃತದೇಹ ಪತ್ತೆ : ಗುರುತು ಪತ್ತೆಗೆ ಮನವಿ..

ಬಂಟ್ವಾಳ: ಇಲ್ಲಿನ‌ ನೇತ್ರಾವತಿ ‌ನದಿಯಲ್ಲಿ ಜುಲೈ 2 ರಂದು ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ. ಸುಮಾರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದು,ಇವರ ಗುರುತು...