ಕೊರೊನದಿಂದ ತತ್ತರಿಸಿದ್ದ ಜನರಿಗೆ ಮತ್ತೊಂದು ಶಾಕ್ ಕೊಡುವಂತ ವೈರಸ್ ಹೆಚ್3ಎನ್2 ದೇಶದಲ್ಲಿ ಕಾಣಿಸಿಕೊಂಡಿತ್ತು. ಇದೀಗ ರಾಜ್ಯದಲ್ಲಿ ಹೆಚ್3ಎನ್2ಗೆ ಮೊದಲ ಬಲಿಯಾಗಿದೆ.


ಅನಾರೋಗ್ಯದಿಂದ ಬಳಲುತ್ತಿದ್ದ ಹಾಸನದ ಆಲೂರು ತಾಲೂಕಿನ 78 ವರ್ಷದ ವೃದ್ಧನು ಮಾರಣಾಂತಿಕ ಹೆಚ್3ಎನ್2 ವೈರಸ್ನಿಂದ ಮೃತಪಟ್ಟಿರುವುದಾಗಿ ಅರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ. ವೃದ್ಧನು ಜ್ವರ, ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದು ಮಾರ್ಚ್ 1 ರಂದು ಆಲೂರಿನಲ್ಲಿ ಮೃತಪಟ್ಟಿದ್ದನು. ಈ ಬಗ್ಗೆ ಆರೋಗ್ಯ ಇಲಾಖೆ ಇವತ್ತು ಹೆಚ್3ಎನ್2 ಗೆ ಮೊದಲ ಬಲಿಯಾಗಿರುವುದಾಗಿ ಮಾಹಿತಿ ನೀಡಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್3ಎನ್2 ವೈರಸ್ಗೆ ತುತ್ತಾದವರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ. ಹಾಸನ ಜಿಲ್ಲೆಯಲ್ಲೇ ಆರು ಮಂದಿಗೆ ಹೆಚ್3ಎನ್2 ವೈರಸ್ ಇರೋದು ಪತ್ತೆಯಾಗಿದೆ. ಜ್ವರ, ಚಳಿ, ಗಂಟಲಿನ ಸಮಸ್ಯೆಯಿಂದ ಬಳಲುತ್ತಾ ಇರುವವರು ಎಚ್ಚರಿಕೆಯಿಂದ ಇರಬೇಕು. ಕೊಮಾರ್ಬಿಡ್ ಮತ್ತು 60 ವರ್ಷ ಮೇಲ್ಪಟ್ಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.












