ಬಂಟ್ವಾಳ : ಗುಡ್ಡ ಕುಸಿದು ನಾಲ್ಕು ಮನೆಯೊಳಗೆ ಮಳೆ ನೀರು ನುಗ್ಗಿದ ಘಟನೆ ಪೆರಾಜೆ ಗ್ರಾಮದ ಬುಡೋಳಿ ಸೈಟ್ ಎಂಬಲ್ಲಿ ನಡೆದಿದೆ.

ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಡೋಳಿ ನಿವಾಸಿಗಳಾದ ಜೊಹರಾ ಅಬುಬಕ್ಕರ್ ,
ನಬೀಶಾ ಬಶೀರ್ , ಅವ್ವಮ್ಮ ಹಾಗೂ ಸುಲೈಮಾನ್ ಅವರ ಮನೆಯೊಳಗೆ ನುಗ್ಗಿದೆ.
ನಾಲ್ಕು ಮನೆಗೆ ನೀರು ನುಗ್ಗಿದ್ದು ಸಂಪೂರ್ಣ ಜಲಾವೃತಗೊಂಡಿದೆ.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಎಡೆಬಿಡದೆ ಸುರಿಯುವ ಮಳೆಗೆ ಬುಡೋಳಿ ಸೈಟ್ ನಲ್ಲಿರುವ
ಮನೆಯ ಹಿಂಬದಿಯಲ್ಲಿ ರುವ ಗುಡ್ಡ ಕುಸಿದು ಮಳೆ ನೀರು ಹರಿದು ಹೋಗಲು ಸಾಧ್ಯವಿಲ್ಲದೆ ಅಲ್ಲೇ ಮನೆಯಂಗಳದಲ್ಲಿದ್ದ ಬಾವಿಗೆ ತುಂಬಿದೆ,ಬಾವಿ ಸಂಪೂರ್ಣ ಮಳೆ ನೀರಿನೊಂದಿಗೆ ಮಣ್ಣು ತುಂಬಿದ್ದು ಬಾವಿ ಸಂಪೂರ್ಣ ಮುಚ್ಚಿಹೋಗಿದೆ.
ಅಬಳಿಕ ನೀರು ಅಲ್ಲೇ ತಾಗಿಕೊಂಡಿರುವ ನಾಲ್ಕು ಮನೆಗಳ ಒಳಗೆ ನೀರು ತುಂಬಿದೆ.
ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷ ಉಮ್ಮರ್ , ಸದಸ್ಯರಾದ ಕುಶಾಲಪ್ಪ ಗೌಡ ಮಂಜೊಟ್ಟಿ, ಸುನೀತಾ,
ಪೆರಾಜೆ ಗ್ರಾಮ ಪಂಚಾಯತ್ ಪಿ.ಡಿ.ಒ. ಶಂಭುಕುಮಾರ ಶರ್ಮ, ಗ್ರಾಮ ಕರಣೀಕೆ ಸುರಕ್ಷ ,ಗ್ರಾ.ಪಂ.ಸಿಬ್ಬಂದಿ ದಿನೇಶ್, ದಿವಾಕರ ಬೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದರು, ನಾಲ್ಕು ಕುಟುಂಬಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರನ್ನು ಹತ್ತಿರದ ಸಂಬಂಧಿ ಕರ ಮನೆಗೆ ಸ್ಥಳಾಂತರ ಮಾಡಿ ಮನೆಯೊಳಗಿನ ನೀರನ್ನು ತೆಗೆಯುವ ಕೆಲಸ ಆರಂಭಿಸಲಾಗಿದೆ. ಜೊತೆಗೆ ಮಳೆ ನೀರು ಹರಿದು ಹೋಗಲು ಪ್ರತ್ಯೇಕ ಚರಂಡಿ ವ್ಯವಸ್ಥೆ ನಿರ್ಮಾಣ ದ ಕಾರ್ಯ ನಡೆಯುತ್ತಿದೆ.
