Thursday, July 3, 2025

ಗ್ರಹಣ ಆಹಾರ ಸೇವನೆಗೆ ಅಡ್ಡಿಯಿಲ್ಲ ಮೌಡ್ಯ ತೊರೆದು ಆಹಾರ ಸೇವಿಸೋಣ ಕಾರ್ಯಕ್ರಮ

ಬಂಟ್ವಾಳ: ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಸಂಚಾಲನ ಸಮಿತಿ ವತಿಯಿಂದ “ಗ್ರಹಣ ಆಹಾರ ಸೇವನೆಗೆ ಅಡ್ಡಿಯಿಲ್ಲ ಮೌಡ್ಯ ತೊರೆದು ಆಹಾರ ಸೇವಿಸೋಣ” ಕಾರ್ಯಕ್ತಮ ಭಾನುವಾರ ಬಂಟ್ವಾಳಕ್ಕೆ ಸಮೀಪದ ಚಂಡ್ತಿಮಾರ್ ನಲ್ಲಿ ನಡೆಯಿತು.ಅತಿಥಿಯಾಗಿದ್ದ ಮಾನವ ಬಂಧತ್ವ ವೇದಿಕೆಯ ಜಿಲ್ಲಾ ಸಂಚಾಲಕ ಚೆನ್ನಕೇಶವ ಅವರು ಮಾತನಾಡಿ ಅನಾಧಿಕಾಲದಿಂದ ಶೋಷಿತ ಜನಾಂಗದಲ್ಲಿ ಮೌಢ್ಯವನ್ನು ತುಂಬಲಾಗುತ್ತದೆ.ಅದನ್ನು ತೊರೆದು ವೈಜ್ಙಾನಿಕ ಮನೋಭಾವನೆ ಬೆಳಸಿಕೊಳ್ಳುವ ಅವಶ್ಯಕತೆ ಇದೆ.ಇಲ್ಲವಾದಲ್ಲಿ ಮಾನವ ಅವನತಿಯ ದಾರಿಯಲ್ಲಿ ಸಾಗುತ್ತಾನೆ ಎಂದರು. ಬಂಟ್ವಾಳ ತಾ.ಸಂಚಾಲಕ ರಾಜ ಚಂಡ್ತಿಮಾರ್,ತಾಲೂಕು ಸಂಯೋಜಕ ಪ್ರಭಾಕರ ದೈವಗುಡ್ಡೆ,ಡಿವೈಎಫ್ ಐ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್,ಸಾಮಾಜಿಕ ಕಾರ್ಯಕರ್ತರಾದ ಸಾದಿಕ್ ಬಡ್ಡಕಟ್ಟೆ,ಹರೀಶ್ ಅಜ್ಜಿಬೆಟ್ಟು ಮತ್ತಿತರಿದ್ದರು. ಬಳಿಕ ಗ್ರಹಣ ಸಂದರ್ಭದಲ್ಲಿ ಸಾಮೂಹಿಕವಾಗಿ ಆಹಾರ ಸೇವನೆ ಮಾಡಲಾಯಿತು. ಸತೀಶ್ ಸ್ವಾಗತಿಸಿ,ವಂದಿಸಿದರು.

More from the blog

ಅಕ್ರಮ ಗಣಿಗಾರಿಕೆ: ಲಾರಿಗಳನ್ನು ತಡೆದ ಗ್ರಾಮಸ್ಥರು..

ಬಂಟ್ವಾಳ: ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ. ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ...

Bantwal : ನೇತ್ರಾವತಿ ‌ನದಿಯಲ್ಲಿ ಅಪರಿಚಿತ ಗಂಡಸಿನ‌ ಮೃತದೇಹ ಪತ್ತೆ : ಗುರುತು ಪತ್ತೆಗೆ ಮನವಿ..

ಬಂಟ್ವಾಳ: ಇಲ್ಲಿನ‌ ನೇತ್ರಾವತಿ ‌ನದಿಯಲ್ಲಿ ಜುಲೈ 2 ರಂದು ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ. ಸುಮಾರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದು,ಇವರ ಗುರುತು...

Mangalore : ಹಬ್ಬಗಳ ಋತು ಆರಂಭ – ಆಚರಣೆಗೆ ಷರತ್ತು ವಿಧಿಸಿದ ಪೊಲೀಸ್ ಇಲಾಖೆ..

ಮಂಗಳೂರು : ಕೆಲವೇ ದಿನಗಳಲ್ಲಿ ಹಬ್ಬಗಳ ಋತು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಅವುಗಳಲ್ಲಿ ಮುಹರ್ರಂ, ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ,...

ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಕ್ರಿಟಿಕಲ್ ಫಂಡ್ ಸಹಾಯಧನ ವಿತರಣೆ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಧೆಕಾರು ಲೀಲಾ ಕೃಷ್ಣಪ್ಪ ಇವರ ಮಗನಾಧ ಹರೀಶ್ ಇವರು ಅನಾರೋಗ್ಯದಿಂದ ಬಳಲುತ್ತಿದ್ದು. ಇವರ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್...