Sunday, January 25, 2026

ಮೋಸ ,ಮೋಸ, ಮೋಸ ತುಪ್ಪದಲ್ಲೂ ಮೋಸ…

ಬಂಟ್ವಾಳ: ಮೋಸ ,ಮೋಸ, ಮೋಸ ತುಪ್ಪ ದಲ್ಲೂ ಮೋಸ… ಇಂತಹ ಮೋಸ ನಿಮಗೂ ಆಗಿರಬಹುದು.
ತುಪ್ಪ ಬೇಕಾ ತುಪ್ಪ ಬೇಕಾ ಅಂತ ನಿಮ್ಮ ಊರಿಗೂ ಮನೆಗೂ ಇಂತವರು ಬಂದಿರಬಹುದು ಆದರೆ ಇನ್ನು ಮುಂದೆಯಾದರೂ ಎಚ್ಚರ ಎಚ್ಚರ ಎಚ್ಚರ.
ಇದು ದನದ ತುಪ್ಪವಲ್ಲ! ಕೇವಲ ತುಪ್ಪದ ಬಣ್ಣವನ್ನು ಹೋಲುವ ನಕಲಿ ತುಪ್ಪವಾಗಿದೆ. ಇಂತಹ ಘಟನೆ ನಡೆದಿದ್ದು ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿ ಜೋಗಿಬೆಟ್ಟು ಎಂಬಲ್ಲಿ ಬೆಳಿಗ್ಗೆ ಮನೆ ಮನೆಗೆ ತುಪ್ಪ ಮಾರಾಟ ಮಾಡುವ ವ್ಯಕ್ತಿಯೋರ್ವ ಅಗಮಿಸಿದ್ದ.
ಅರ್ಧ ಲೀಟರ್ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಪ್ಪ ಎಂದು ಹೇಳಿ ಮಾರಾಟ ಮಾಡಲು ಬಂದಿದ್ದ.


ಈತನ ಅರ್ಧ ಲೀಟರ್ ಬಾಟಲಿಯ ತುಪ್ಪದ ರೇಟ್ ಎಷ್ಟು ಗೊತ್ತಾ 250 ರೂಪಾಯಿ. ಅದರೆ ಚರ್ಚೆ ಮಾಡಿದ ಬಳಿಕ ಈತ ಒಂದು ಬಾಟಲ್ 100 ರೂಪಾಯಿಗೆ ನೀಡುತ್ತಾನೆ.
ಅದರೆ ಒಂದು ಕುಡ್ತೆ ಶುದ್ಧ ತುಪ್ಪದ ನಿಜವಾದ ಬೆಲೆ 100 ರೂಪಾಯಿ ಇದೆ. ಆದರೆ ಈತ ಅರ್ಧ ಲೀಟರ್ ತುಪ್ಪ 100 ರೂಪಾಯಿ ಗೆ ಹೇಗೆ ನೀಡುತ್ತಾನೆ ಎಂದು ಸಂಶಯ ಬಂದು, ಜೋಗಿಬೆಟ್ಟುವಿನ ಯುವಕರು ಈತನ ಕೈಯಿಂದ ತುಪ್ಪವನ್ನು ಪಡೆದುಕೊಂಡು ಪರೀಕ್ಷೆ ನಡೆಸಿದರು.
ಆವಾಗ ಗೊತ್ತಾಯಿತು ಇದು ತುಪ್ಪವಲ್ಲ, ಇದು ಡಾಲ್ಡಕ್ಕೆ ಯಾವುದೋ ಕೆಮಿಕಲ್ ಬಳಸಿ ಕಳಪೆ ಗುಣಮಟ್ಟದಲ್ಲಿ ತುಪ್ಪ ಎಂಬ ಹೆಸರಿನ ಮೇಲೆ ಇವರು ಊರಿನಿಂದ ಊರಿಗೆ ಅಳೆದು ಜನರನ್ನು ತುಪ್ಪದ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ಇಂತಹ ದೊಡ್ಡ ಜಾಲವೇ ಇದೆ.

ಇಂದು ಸಾರ್ವಜನಿಕರ ಕೈಗೆ ಸಿಕ್ಕಿದ ಈತ ಬಳ್ಳಾರಿ ಮೂಲದ ಮಣಿಕಂಠ ಎಂದು ಹೇಳಿಕೊಂಡಿದ್ದಾನೆ. ಈತನ ಜೊತೆಗೆ ಇನ್ನೊಬ್ಬ ವ್ಯಕ್ತಿ ಬಂದಿದ್ದ ಆತ ಕಡೇಶಿವಾಲಯದ ಕಡೆಗೆ ಹೊಗಿದ್ದ. ಆದರೆ ತುಪ್ಪದ ಹೆಸರಿನಲ್ಲಿ ಜನರು ಮೋಸ ಮಾಡಿ ನಂಬಿಸುತ್ತಿದ್ದ ಮಣಿಕಂಠನನ್ನು ಜೋಗಿಬೆಟ್ಟುವಿನ ಸಾರ್ವಜನಿಕರು ಹಿಡಿದು ವಿಟ್ಲ ಪೋಲೀಸರ ಕೈಗೆ ನೀಡಿದ್ದಾರೆ. ವಿಟ್ಲ ಪೋಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಜೋಕೆ ಇದೇ ರೀತಿಯಲ್ಲಿ ಬೇರೆ ಬೇರೆ ವಸ್ತುಗಳನ್ನು ಮಾರಾಟ ಮಾಡಲು ಮನೆಬಾಗಿಲಿಗೆ ಬರುವ ವ್ಯಕ್ತಿಗಳ ಬಗ್ಗೆ ಜಾಗರೂಕತೆಯಿಂದ ಇರಬೇಕಾಗಿದೆ.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...