Wednesday, February 12, 2025

ಯಕ್ಷರಂಗ ಕಲ್ಲಂಗಳ ಕೇಪು: ಯಶಸ್ವೀ ಗೆಜ್ಜೆಹೆಜ್ಜೆ

ವಿಟ್ಲ: ಈಸ್ಲೇರಿ ಕರವೀರ ಮತ್ತು ಸರಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪು ಸಹಯೋಗದ ಯಕ್ಷರಂಗ ಇದರ ವತಿಯಿಂದ ಜರಗಿದ ಉಚಿತ ಯಕ್ಷಗಾನ ತರಬೇತಿಯ ಮೊದಲ ತಂಡದ ಸಮಾರೋಪ ಮತ್ತು ಗಜ್ಜೆಹೆಜ್ಜೆ ಕಾರ್ಯಕ್ರಮವು ವಿಟ್ಲದ ಶ್ರೀ ಭಗವತೀ ದೇವಸ್ಥಾನದ ವಠಾರದಲ್ಲಿ ಯಶಸ್ವಿಯಾಗಿ ಜರಗಿತು. ಎಳೆಯ ನೂತನ ಕಲಾವಿದರು ಸುದರ್ಶನ ವಿಜಯ ಎಂಬ ಕಥಾ ಪ್ರಸಂಗವನ್ನು ಪ್ರದರ್ಶಿಸಿದರು.
ಪಾತ್ರಧಾರಿಗಳಾಗಿ ಕುಮಾರಿಯರಾದ ಸ್ವಾತಿ ಕೆ, ತ್ರಿಶಾಲಿ ವಿ, ವಿದ್ಯಾಶ್ರೀ ವೈ, ಸೌಜನ್ಯ ಸಿ.ಎಚ್, ಚಾರ್ವಿ ಪಿ. ರೈ, ಯಶಿಕಾ ಕೆ, ಹಸ್ತಾ ಕೆ, ಸಮೀಕ್ಷಾ ರೈ, ಕುಮಾರ ಸಂದೀಪ ನಾಯಕ್ ಮತ್ತು ಅತಿಥಿ ಕಲಾವಿದ ನಿತಿನ್ ಕುಮಾರ್ ಯೆರುಂಬು ಪಾಲ್ಗೊಂಡರು. ಹಿಮ್ಮೇಳದಲ್ಲಿ ಭಾಗವತರಾಗಿ ಉಂಡೆ ಮನೆ ಕೃಷ್ಣ ಭಟ್ ನೇರಳ ಕಟ್ಟೆ, ಮೃದಂಗವಾದಕರಾಗಿ ರಾಜಗೋಪಾಲ ಜೋಷಿ ಮೈರ, ಚೆಂಡೆ ವಾದಕರಾಗಿ ಅಭಿಷೇಕ್ ಚನಿಲ ಮತ್ತು ಕುಮಾರಸ್ವಾಮಿ ವಿಟ್ಲ ಸಹಕರಿಸಿದರು. ಪ್ರ್ರಸಾದನ ಮತ್ತು ವಸ್ತ್ರವಿನ್ಯಾಸದಲ್ಲಿ ಪುತ್ತೂರು ಗುರು ನರಸಿಂಹ ಯಕ್ಷಗಾನ ಮಂಡಳಿಯು ಸಹಕರಿಸಿತು.
ನಾಟ್ಯ, ಅಭಿನಯ ಮತ್ತು ಅರ್ಥಗಾರಿಕೆಯಲ್ಲಿ ಗುಣ ಮಟ್ಟವನ್ನು ಕಾಯ್ದುಕೊಂಡ ವಿದ್ಯಾರ್ಥಿಗಳನ್ನು ಪ್ರೇಕ್ಷಕ ವರ್ಗ ಮುಕ್ತ ಕಂಠದಿಂದ ಶ್ಲಾಘಿಸಿದುದು ಮತ್ತು ಎಳೆಯ ಪ್ರತಿಭೆಗಳಿಗೆ ಚೊಚ್ಚಲ ಪ್ರದರ್ಶನದಲ್ಲಿಯೇ ಅಭೂತಪೂರ್ವ ಕರತಾಡನ ದೊರೆತುದು ತರಬೇತಿಯ ಸಂಘಟಕರನ್ನು ಭಾವುಕರನ್ನಾಗಿಸಿತು. ನಲುವತ್ತು ಅವಧಿಗಳ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿಯೇ ನೀಡಲಾಗಿದ್ದು ಸಹಕರಿಸಿದ ಎಲ್ಲ ಕಲಾಭಿಮಾನಿಗಳನ್ನು ಈಸ್ಲೇರಿಯ ಸಂಚಾಲಕ ಭಾಸ್ಕರ ಅಡ್ವಳ ವಂದಿಸಿದರಲ್ಲದೆ ಗೆಜ್ಜೆಹೆಜ್ಜೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಮತ್ತು ಹಿಮ್ಮೇಳದವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಜನತಾ ಎಜುಕೇಷನ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ ಬಾಯಾರ್ ಮತ್ತು ಕಲ್ಲಂಗಳ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಕೆ ಎಳೆಯ ಕಲಾವಿದರಿಗೆ ಶುಭ ಹಾರೈಸಿದರು.

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...