Saturday, February 8, 2025

ಗಝಲ್-60


ಹೆತ್ತವ್ವನೇ ನನ್ನ ಒಪ್ಪದಿರಲು ಮುಗಿಯಿತೆನ್ನ ಬದುಕು
ಹುಟ್ಟಿಸಿದ ತಂದೆಯ ಆಸೆ ನೀಗಲು ಮುಗಿಯಿತೆನ್ನ ಬದುಕು..

ಧರಣಿಯಿಂದ ಬಂದು ಭೂಮಿಗೇ ಹಿಂತಿರುಗಿರುವೆ,
ಅನಾಥ ನಾನು ಸರ್ವರಿರಲು, ಮುಗಿಯಿತೆನ್ನ ಬದುಕು…

ತಂಗಿ ತಮ್ಮನವರ ನೋಡುವ ಬಯಕೆಯಿಹುದು,
ಅಪ್ಪನ ಹೆಗಲೇರುವ ಅವಕಾಶವಿಲ್ಲ,ಮುಗಿಯಿತೆನ್ನ ಬದುಕು..

ಅಮ್ಮನ ಮಡಿಲಲ್ಲಿ ಮಲಗಿ ನಿದ್ರಿಸುವಾಸೆ
ಆಸೆಗಳ ಮುರುಟಿ ಬಿಸಾಕಿಹರಲ್ಲ, ಮುಗಿಯಿತೆನ್ನ ಬದುಕು..

ಅಗ್ನಿ ಜಲ ಆಕಾಶ ಭೂಮಿ ವಾಯು ಪಂಚ ದೈವಗಳಂತೆ
ಆ ದೇವತೆಗಳಿಗೆ ಆಹಾರವಾಗಿಹೆನಲ್ಲ, ಮುಗಿಯಿತೆನ್ನ ಬದುಕು..

ಮಾತೆ ಕೆಟ್ಟವಳಾಗಲು ಎನ್ನುವ ಮಾತಿದೆ ಜಗದೊಳು
ನನ್ನ ಬಾಳಲಿ ಗಾದೆ ಸುಳ್ಳಾಯಿತಲ್ಲ, ಮುಗಿಯಿತೆನ್ನ ಬದುಕು.

ಪ್ರೀತಿಯಲಿ ಬಾಳಬೇಕಾದ ಬದುಕು ಕಮರಿ ಹೋಯಿತು
ಪ್ರೇಮದಿ ಬದುಕಲಾಗಲಿಲ್ಲ, ಮುಗಿಯಿತೆನ್ನ ಬದುಕು..

@ಪ್ರೇಮ್@

More from the blog

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...

ಬೋಗೋಡಿ ಸಲ್-ಸಬೀಲ್ ಸಂಸ್ಥೆಯ 11ನೇ ವಾರ್ಷಿಕ ಮಹಾಸಭೆ : ಅಧ್ಯಕ್ಷರಾಗಿ ಜಮಾಲ್ ಬಂಗ್ಲೆಗುಡ್ಡೆ ಆಯ್ಕೆ

ಪಾಣೆಮಂಗಳೂರು : ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಬೋಗೋಡಿ ಇದರ 11ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಝೋಮ್ ಮೀಟಿಂಗ್‌ನಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿ ಜಮಾಲ್ ಬಂಗ್ಲಗುಡ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಿಲ್ವಾನ್ ಮೆಲ್ಕಾರ್ ಅವಿರೋಧವಾಗಿ...

ದಿವ್ಯಾಂಗತೆಯ ಕುರಿತು ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ‌ಮೂಡ, ಅಜ್ಜಿಬೆಟ್ಟು, ಬಿ ಸಿ ರೋಡ್, ಬಂಟ್ವಾಳ ತಾಲೂಕು ಇಲ್ಲಿ ದಿವ್ಯಾಂಗತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವು ಜ.22ರಂದು ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಿಕಾಸಂ...