Thursday, June 26, 2025

ಗಝಲ್-60


ಹೆತ್ತವ್ವನೇ ನನ್ನ ಒಪ್ಪದಿರಲು ಮುಗಿಯಿತೆನ್ನ ಬದುಕು
ಹುಟ್ಟಿಸಿದ ತಂದೆಯ ಆಸೆ ನೀಗಲು ಮುಗಿಯಿತೆನ್ನ ಬದುಕು..

ಧರಣಿಯಿಂದ ಬಂದು ಭೂಮಿಗೇ ಹಿಂತಿರುಗಿರುವೆ,
ಅನಾಥ ನಾನು ಸರ್ವರಿರಲು, ಮುಗಿಯಿತೆನ್ನ ಬದುಕು…

ತಂಗಿ ತಮ್ಮನವರ ನೋಡುವ ಬಯಕೆಯಿಹುದು,
ಅಪ್ಪನ ಹೆಗಲೇರುವ ಅವಕಾಶವಿಲ್ಲ,ಮುಗಿಯಿತೆನ್ನ ಬದುಕು..

ಅಮ್ಮನ ಮಡಿಲಲ್ಲಿ ಮಲಗಿ ನಿದ್ರಿಸುವಾಸೆ
ಆಸೆಗಳ ಮುರುಟಿ ಬಿಸಾಕಿಹರಲ್ಲ, ಮುಗಿಯಿತೆನ್ನ ಬದುಕು..

ಅಗ್ನಿ ಜಲ ಆಕಾಶ ಭೂಮಿ ವಾಯು ಪಂಚ ದೈವಗಳಂತೆ
ಆ ದೇವತೆಗಳಿಗೆ ಆಹಾರವಾಗಿಹೆನಲ್ಲ, ಮುಗಿಯಿತೆನ್ನ ಬದುಕು..

ಮಾತೆ ಕೆಟ್ಟವಳಾಗಲು ಎನ್ನುವ ಮಾತಿದೆ ಜಗದೊಳು
ನನ್ನ ಬಾಳಲಿ ಗಾದೆ ಸುಳ್ಳಾಯಿತಲ್ಲ, ಮುಗಿಯಿತೆನ್ನ ಬದುಕು.

ಪ್ರೀತಿಯಲಿ ಬಾಳಬೇಕಾದ ಬದುಕು ಕಮರಿ ಹೋಯಿತು
ಪ್ರೇಮದಿ ಬದುಕಲಾಗಲಿಲ್ಲ, ಮುಗಿಯಿತೆನ್ನ ಬದುಕು..

@ಪ್ರೇಮ್@

More from the blog

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...