Saturday, January 31, 2026

*ಗಜಲ್ 114*

 

ಕ್ರೋಧಗೊಳ್ಳದೆ ಶಾಂತವಾಗು ಮನವೇ ಶಿಕಾರಿ ಆಡಿದರಾಯಿತು ಮುಂದೆ/
ಹಾಗೆಂದು ಸೇರಿಕೊಳ್ಳದೆ ಮೂಲೆ ಉತ್ತರಿಸಲು ತಯಾರಾಗು ತಡ ಮಾಡದೇ//

ನುಂಗಿ ಮುನ್ನಡೆಯುವುದಾ ನೋಡಿಕೋ ಹೆಜ್ಜೆ ಹೆಜ್ಜೆಗೂ ಅವಮಾನ ಸಹಜವಿಲ್ಲಿ/
ಮೈಗೂಡುವಂತೆ ಸಹನೆ ಕ್ಯಾರೆ ಎನ್ನದೇ ನಡೆ ಮತ್ತೆ ಹಿಂತಿರುಗಿ ನೋಡದೆ//

ಏಟಿಗೆ ಎದಿರೇಟು ಮಾತಿಗೆ ಮಾತು ಸಲ್ಲದು ಅದಕ್ಕಿದೆ ಬೇರೆಯೇ ಪ್ರತ್ಯುತ್ತರ/
ಕಚ್ಚಾಡಿ ಕೈ ಬಾಯಿ ಗಬ್ಬಬ್ಬೆಸಿಕೊಳ್ಳದಿರು ಅವರ ಆ ಕೆಳಮಟ್ಟಕ್ಕೆ ನೀ ಇಳಿಯದೆ//

ಒಂದೊಂದು ಹೀಯಾಳಿಕೆ ಒಂದೊಂದು ಪಾಠ ವಾಸ್ತವದ ಅರಿವೇ ಸಂಸ್ಕೃತಿ/
ಮೌನವದು ಬಲಹೀನತೆಯಲ್ಲ ಪ್ರಖರ ಜ್ವಾಲೆ ಸವಾಲಾಗಿಸಕೋ ನಿಲ್ಲದೆ//

ಎಲ್ಲಾದಕ್ಕೂ ತತಕ್ಷಣದ ಪ್ರತಿಕ್ರಿಯೆಯ ಚಿಂತೆ ಬಿಡು ಬಾರದಂತೆ ಕೀಳರಿಮೆ/
ಗಟ್ಟಿಗೊಳಿಸಿಕೋ ಮನೋಸ್ಥೈರ್ಯ ಕುಗ್ಗಿ ನೊಂದು ತಲೆ ಕೆಡಿಸಕೊಳ್ಳದೆ//

ಬಿದ್ದಾಗ ಜುಟ್ಟು ಎದ್ದಾಗ ಕಾಲು ಹಿಡಿಯುವವರ ನಡುವೆ ತೋರಿಸು ನೀನು ಯಾರೆಂದು/
ಸಾಧಿಸುವ ಛಲ ಹುಟ್ಟು ಹಾಕಿದ ಮೂರ್ಖರವರು ಪಡೆ ಸ್ಪೂರ್ತಿ ಎಡೆಬಿಡದೆ//

ಕಾಲಚಕ್ರ ಉರುಳಿ ಬಂದು ನಿಂತಿತು ಅವರ ಬಳಿ ಆಗುವಂತೆ ನೋವಿನಾಳದ ಬಿಸಿ/
ಎಷ್ಟು ಸೋತರೇನು ಒಮ್ಮೆ ಗೆದ್ದು ಬಿಡು ಬಸು ಗೌರವ ಸನ್ಮಾನ ಎಲ್ಲವೂ ನಿನ್ನದೇ//

 

*ಬಸವರಾಜ ಕಾಸೆ*

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...