Wednesday, February 12, 2025

*ಗಜಲ್ 114*

 

ಕ್ರೋಧಗೊಳ್ಳದೆ ಶಾಂತವಾಗು ಮನವೇ ಶಿಕಾರಿ ಆಡಿದರಾಯಿತು ಮುಂದೆ/
ಹಾಗೆಂದು ಸೇರಿಕೊಳ್ಳದೆ ಮೂಲೆ ಉತ್ತರಿಸಲು ತಯಾರಾಗು ತಡ ಮಾಡದೇ//

ನುಂಗಿ ಮುನ್ನಡೆಯುವುದಾ ನೋಡಿಕೋ ಹೆಜ್ಜೆ ಹೆಜ್ಜೆಗೂ ಅವಮಾನ ಸಹಜವಿಲ್ಲಿ/
ಮೈಗೂಡುವಂತೆ ಸಹನೆ ಕ್ಯಾರೆ ಎನ್ನದೇ ನಡೆ ಮತ್ತೆ ಹಿಂತಿರುಗಿ ನೋಡದೆ//

ಏಟಿಗೆ ಎದಿರೇಟು ಮಾತಿಗೆ ಮಾತು ಸಲ್ಲದು ಅದಕ್ಕಿದೆ ಬೇರೆಯೇ ಪ್ರತ್ಯುತ್ತರ/
ಕಚ್ಚಾಡಿ ಕೈ ಬಾಯಿ ಗಬ್ಬಬ್ಬೆಸಿಕೊಳ್ಳದಿರು ಅವರ ಆ ಕೆಳಮಟ್ಟಕ್ಕೆ ನೀ ಇಳಿಯದೆ//

ಒಂದೊಂದು ಹೀಯಾಳಿಕೆ ಒಂದೊಂದು ಪಾಠ ವಾಸ್ತವದ ಅರಿವೇ ಸಂಸ್ಕೃತಿ/
ಮೌನವದು ಬಲಹೀನತೆಯಲ್ಲ ಪ್ರಖರ ಜ್ವಾಲೆ ಸವಾಲಾಗಿಸಕೋ ನಿಲ್ಲದೆ//

ಎಲ್ಲಾದಕ್ಕೂ ತತಕ್ಷಣದ ಪ್ರತಿಕ್ರಿಯೆಯ ಚಿಂತೆ ಬಿಡು ಬಾರದಂತೆ ಕೀಳರಿಮೆ/
ಗಟ್ಟಿಗೊಳಿಸಿಕೋ ಮನೋಸ್ಥೈರ್ಯ ಕುಗ್ಗಿ ನೊಂದು ತಲೆ ಕೆಡಿಸಕೊಳ್ಳದೆ//

ಬಿದ್ದಾಗ ಜುಟ್ಟು ಎದ್ದಾಗ ಕಾಲು ಹಿಡಿಯುವವರ ನಡುವೆ ತೋರಿಸು ನೀನು ಯಾರೆಂದು/
ಸಾಧಿಸುವ ಛಲ ಹುಟ್ಟು ಹಾಕಿದ ಮೂರ್ಖರವರು ಪಡೆ ಸ್ಪೂರ್ತಿ ಎಡೆಬಿಡದೆ//

ಕಾಲಚಕ್ರ ಉರುಳಿ ಬಂದು ನಿಂತಿತು ಅವರ ಬಳಿ ಆಗುವಂತೆ ನೋವಿನಾಳದ ಬಿಸಿ/
ಎಷ್ಟು ಸೋತರೇನು ಒಮ್ಮೆ ಗೆದ್ದು ಬಿಡು ಬಸು ಗೌರವ ಸನ್ಮಾನ ಎಲ್ಲವೂ ನಿನ್ನದೇ//

 

*ಬಸವರಾಜ ಕಾಸೆ*

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...