Tuesday, July 15, 2025

*ಗಜಲ್ 114*

 

ಕ್ರೋಧಗೊಳ್ಳದೆ ಶಾಂತವಾಗು ಮನವೇ ಶಿಕಾರಿ ಆಡಿದರಾಯಿತು ಮುಂದೆ/
ಹಾಗೆಂದು ಸೇರಿಕೊಳ್ಳದೆ ಮೂಲೆ ಉತ್ತರಿಸಲು ತಯಾರಾಗು ತಡ ಮಾಡದೇ//

ನುಂಗಿ ಮುನ್ನಡೆಯುವುದಾ ನೋಡಿಕೋ ಹೆಜ್ಜೆ ಹೆಜ್ಜೆಗೂ ಅವಮಾನ ಸಹಜವಿಲ್ಲಿ/
ಮೈಗೂಡುವಂತೆ ಸಹನೆ ಕ್ಯಾರೆ ಎನ್ನದೇ ನಡೆ ಮತ್ತೆ ಹಿಂತಿರುಗಿ ನೋಡದೆ//

ಏಟಿಗೆ ಎದಿರೇಟು ಮಾತಿಗೆ ಮಾತು ಸಲ್ಲದು ಅದಕ್ಕಿದೆ ಬೇರೆಯೇ ಪ್ರತ್ಯುತ್ತರ/
ಕಚ್ಚಾಡಿ ಕೈ ಬಾಯಿ ಗಬ್ಬಬ್ಬೆಸಿಕೊಳ್ಳದಿರು ಅವರ ಆ ಕೆಳಮಟ್ಟಕ್ಕೆ ನೀ ಇಳಿಯದೆ//

ಒಂದೊಂದು ಹೀಯಾಳಿಕೆ ಒಂದೊಂದು ಪಾಠ ವಾಸ್ತವದ ಅರಿವೇ ಸಂಸ್ಕೃತಿ/
ಮೌನವದು ಬಲಹೀನತೆಯಲ್ಲ ಪ್ರಖರ ಜ್ವಾಲೆ ಸವಾಲಾಗಿಸಕೋ ನಿಲ್ಲದೆ//

ಎಲ್ಲಾದಕ್ಕೂ ತತಕ್ಷಣದ ಪ್ರತಿಕ್ರಿಯೆಯ ಚಿಂತೆ ಬಿಡು ಬಾರದಂತೆ ಕೀಳರಿಮೆ/
ಗಟ್ಟಿಗೊಳಿಸಿಕೋ ಮನೋಸ್ಥೈರ್ಯ ಕುಗ್ಗಿ ನೊಂದು ತಲೆ ಕೆಡಿಸಕೊಳ್ಳದೆ//

ಬಿದ್ದಾಗ ಜುಟ್ಟು ಎದ್ದಾಗ ಕಾಲು ಹಿಡಿಯುವವರ ನಡುವೆ ತೋರಿಸು ನೀನು ಯಾರೆಂದು/
ಸಾಧಿಸುವ ಛಲ ಹುಟ್ಟು ಹಾಕಿದ ಮೂರ್ಖರವರು ಪಡೆ ಸ್ಪೂರ್ತಿ ಎಡೆಬಿಡದೆ//

ಕಾಲಚಕ್ರ ಉರುಳಿ ಬಂದು ನಿಂತಿತು ಅವರ ಬಳಿ ಆಗುವಂತೆ ನೋವಿನಾಳದ ಬಿಸಿ/
ಎಷ್ಟು ಸೋತರೇನು ಒಮ್ಮೆ ಗೆದ್ದು ಬಿಡು ಬಸು ಗೌರವ ಸನ್ಮಾನ ಎಲ್ಲವೂ ನಿನ್ನದೇ//

 

*ಬಸವರಾಜ ಕಾಸೆ*

More from the blog

ಆ. 24ರಂದು ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಸೀಸನ್ 3 ಮತ್ತು ನಮ್ಮೂರ ಟೆಕ್ನೀಶಿಯನ್..

ಬಂಟ್ವಾಳ : ಬಾಲ್ಯದಿಂದಲೇ ಮಕ್ಕಳಿಗೆ ವೇದಿಕೆ ಹತ್ತಲು ಅವಕಾಶ ಸಿಗುವುದು ಕೃಷ್ಣ ವೇಷದ ಮೂಲಕ. ಇಂತಹ ಅವಕಾಶವನ್ನು ಇಲ್ಲಿನ ಪೊಸಳ್ಳಿಯ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳವು ಕೃಷ್ಣ...

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...