Friday, January 30, 2026

ಶ್ರೀಕ್ಷೇತ್ರ ಏರಮಲೆ ಆಟಿ ಅಮಾವಾಸ್ಯೆ ಕಲಶಸ್ನಾನ

ಬಂಟ್ವಾಳ : ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಒಂದಾವರ್ತಿ ಸಂಕಲ್ಪದಂತೆ ಆ.೧ ರಂದು ಬೆಳಗ್ಗೆ ೬ಗಂಟೆಗೆ ದೇವಸ್ಥಾನದ ಗರ್ಭಗುಡಿ ಒಳಾಂಗಣಕ್ಕೆ ಸಾರ್ವಜನಿಕ ಮುಕ್ತ ಪ್ರವೇಶ, ಆಟಿ ಅಮಾವಾಸ್ಯೆ ವಿಶೇಷ ಕಲಶಸ್ನಾನ ದ್ವಿತೀಯ ವರ್ಷದಲ್ಲಿ ನಡೆಯಿತು.
ನೇತ್ರಾವತಿ ನದಿ ತಟ ಸಮುದ್ರ ಮಟ್ಟದಿಂದ ೧೨೦೦ ಅಡಿ ಎತ್ತರದಲ್ಲಿ ಇರುವ ಶಿಖರದ ತುದಿಯಲ್ಲಿ ಇರುವಂತಹ ಶ್ರೀಕ್ಷೇತ್ರದಲ್ಲಿ ದೇವರಿಗೆ ಜಲ, ಸೀಯಾಳ, ಗಂಧ, ಚಂದನ, ತುಪ್ಪದ ಅಭಿಷೇಕವಾಗಿ ಸಂಗ್ರಹಿಸಿದ ಜಲದಿಂದ ಭಕ್ತರಿಗೆ ತೀರ್ಥಸ್ನಾನ ನಡೆಯಿತು.
ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ತೀರ್ಥಸ್ನಾನ ಬಳಿಕ ಔಷಧಯುಕ್ತ ಪಾಲೆದ ಕೆತ್ತೆಯ ಚಿಕ್ಕ ತುಂಡನ್ನು ಸೇವನೆಗೆ ನೀಡಲಾಯಿತು. ಬಳಿಕ ಮೆಂತೆಯ ಅನ್ನವನ್ನು ಪ್ರಸಾದವಾಗಿ ನೀಡಲಾಯಿತು.
ಕ್ಷೇತ್ರದಲ್ಲಿ ಕಳೆದ ವರ್ಷ 2019 ಫೆ.24, 25ರಂದು ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ಎರಡನೇ ವರ್ಷದ ಆಟಿ ಆಮಾವಾಸ್ಯೆ ತೀರ್ಥ ಸ್ನಾನ ನಡೆಯುತ್ತಿರುವುದುದಾಗಿದೆ.
ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿದ್ದು ಮಕ್ಕಳು , ಹಿರಿಯರ ಸಹಿತ ಮನೆವಂದಿ ಕ್ಷೇತ್ರಕ್ಕೆ ಆಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
( ಕ್ಷೇತ್ರದ ಪುರೊಹಿತರು ಕಲಶಸ್ನಾನ ನಿರ್ವಹಿಸಿದರು)

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...