Wednesday, January 28, 2026

ಮೂರು ತಿಂಗಳ ಮನೆಗಳ ವಿದ್ಯುತ್ ಬಿಲ್ ಮನ್ನಾ ಮಾಡಿ: ಸದಾಶಿವ ಬಂಗೇರ ಒತ್ತಾಯ

ಬಂಟ್ವಾಳ: ಇಡೀ ಜಗತ್ತು ಕೊರೊನಾ ಭೀತಿಯಿಂದ ಲಾಕ್ ಡೌನ್ ಆದೇಶ ಮಾಡಿದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ , ಕೆಲವು ಪ್ಯಾಕೇಜ್ ಗಳನ್ನೂ ಘೋಷಣೆ ಮಾಡಿದೆ.
ಅದರಲ್ಲಿ ಮೆಸ್ಕಾಂ ಇಲಾಖೆಯದ್ದು ಏನಪ್ಪ ಅಂತ ಕೇಳಿದರೆ .. ಮೂರು ತಿಂಗಳ ಕಾಲ ವಿದ್ಯುತ್ ಬಿಲ್ ಕಟ್ಟದಿದ್ದರೂ ಕೇಳುವಂತಿಲ್ಲವ, ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿಲ್ಲ ಆದರೆ ಮೂರು ತಿಂಗಳ ಬಳಿಕ ಪಾವತಿಸಲೇ ಬೇಕಂತೆ. ಈಗಾಗಲೇೇ ಉದ್ಯೋಗವಿಲ್ಲಲದೆ, ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಬಳಕೆದಾರರು ಮೂರು ತಿಂಗಳ ವಿದ್ಯುತ್ ಬಿಲ್ ನ್ನು ಒಮ್ಮೆಲೆ ಕಟ್ಟಲು ಹೇಗೆ ಸಾಧ್ಯ. ಎಂಬುದನ್ನು ಸರಕಾರ ವಯಾಕೆ ಯೋಚನೆ ಮಾಡಿಲ್ಲ ಎಂಬ ಅಂಶ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅತ್ತ ಉದ್ಯೋಗವಿಲ್ಲ, ಇತ್ತ ಕೈಯಲ್ಲಿ ಕಾಸಿಲ್ಲ
ಮೂರು ಹೊತ್ತಿಗೆ ಹೊಟ್ಟೆಗೆ ಹಿಟ್ಟಿಲ್ಲದೆ ದಿನ ದೂಡುವುದೇ ಕಷ್ಟ ಎಂಬ ಪರಿಸ್ಥಿತಿ ಯನ್ನು ಎದುರುನೋಡುತ್ತಿರುವಾಗ ಒಂದು ವೇಳೆ ಕೊರೊನಾ ಲಾಕ್ ಡೌನ್ ಮುಗಿದ ಬಳಿಕ ಒಮ್ಮೆಲೆ ಹಣ ಪಾವತಿ ಮಾಡಲು ಇಲಾಖೆ ಸೂಚಿಸಿದರೆ ಕಷ್ಟ ವಾಗಬಹುದು ಹಾಗಾಗಿ ಮೆಸ್ಕಾಂ ಇಲಾಖೆ ಈ ಮೂರು ತಿಂಗಳ ಮನೆಗಳ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಬೇಕು, ರೀಡಿಂಗ್ ಕೂಡಾ ಮಾಡಬಾರದು ಎಂದು ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ ಸರಕಾರ ಕ್ಕೆ ಒತ್ತಾಯಿಸಿದ್ದಾರೆ.

ಕೇವಲ ಬಡ್ಡಿ ಮನ್ನಾ ಮಾಡುವುದರಿಂದ ಯಾವುದೇ ಲಾಭವಿಲ್ಲ, ಹಾಗಾಗಿ ಮನೆಯ ವಿದ್ಯುತ್ ಬಿಲ್ ಮನ್ನಾ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ.

ರೀಡಿಂಗ್ ಆರಂಭ
ಕೊರೋನ ಭೀತಿಯಲ್ಲೇ ಜನತೆ ನಲುಗುತ್ತಿರುವ ನಡುವೆ, ಮೆಸ್ಕಾಂ ನ ಹೊರಗುತ್ತಿಗೆ ಸಿಬ್ಬಂದಿಗಳು ಮೀಟರ್ ರೀಡಿಂಗ್ ಆರಂಭಿಸಿದ್ದಾರೆ. ಆದರೆ ನೂರಾರು ಜನ ಸಿಬ್ಬಂದಿಗಳು ತರತುರಿಯಲ್ಲಿ ಮೀಟರ್ ರೀಡಿಂಗ್ ಮಾಡಲು ಇಲಾಖೆ ಅನುಮತಿ ನೀಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಪ್ರಧಾನಿ ವಿಧಿಸಿರುವ 21 ದಿನಗಳ ಲಾಕ್ ಡೌನ್ ನಲ್ಲಿ ಇನ್ನೂ ಹದಿನಾಲ್ಕು ದಿನಗಳು ಬಾಕಿ ಇದ್ದು, ಅಗತ್ಯವಿರುವ ಇಲಾಖೆಗಳು ಮಾತ್ರ ಸಾರ್ವಜನಿಕ ಸೇವೆ ನೀಡುವಂತೆ ಸರ್ಕಾರವೇ ನಿರ್ದೇಶನ ನೀಡಿತ್ತು.
ಆದರೆ ಮೆಸ್ಕಾಂ ಇಲಾಖೆಯ ಮೀಟರ್ ರೀಡಿಂಗ್ ಅವಶ್ಯಕತೆ ಯ ಸೆಕ್ಟರ್ ನಲ್ಲಿ ಬರುತ್ತಾ? ಅಗತ್ಯ ವಾ ? ಅನ್ನುವ ಪ್ರಶ್ನೆ ಮೂಡುತ್ತದೆ. ಸಿಬ್ಬಂದಿಗಳು
ಮನೆಮನೆಗೆ ರೀಡಿಂಗ್ ಗೆ ತೆರಳಿದ ಸಂದರ್ಭದಲ್ಲಿ ವೈರಸ್ ತಗಲುವ ಸಂಧರ್ಬಗಳು ಹೆಚ್ಚು ಇರುವುದರಿಂದ ಇಲಾಖೆ ಈ ಬಗ್ಗೆ ಪರಿಶೀಲನೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇಂದಿನಿಂದ ಮನೆಗೆ ಮೀಟರ್ ರೀಡಿಂಗ್ ಮಾಡಲು ಬರುತ್ತಾರೆ. ಸರಕಾರ ಎಲ್ಲಿ ಮೂರು ತಿಂಗಳ ಬಿಲ್ ಪಾವತಿ ಮಾಡಲು ಇಲ್ಲ ಅಂತ ಹೇಳಿಲ್ಲ, ಲಾಕ್ ಡೌನ್ ಅದ್ದರಿಂದ ಮೂರು ತಿಂಗಳ ‌ಕಾಲ ಬಿಲ್ ಪಾವತಿ ಮಾಡಲು ಮನೆಯಿಂದ ಹೊರ ಬರುವಂತಿಲ್ಲ. ಅ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಅವಕಾಶ ನೀಡಲಾಗಿದೆ.
ಆನ್ ಲೈನ್ ಮೂಲಕ ಪೇ ಮಾಡುವವರು ಹಣ ಪಾವತಿ ಮಾಡಬಹುದು ಎಂದು ಮಂಗಳೂರು ಮೆಸ್ಕಾಂ ಎಂ.ಡಿ ಸ್ನೇಹಲ್ ತಿಳಿಸಿದ್ದಾರೆ. ಮೀಟರ್ ರೀಡ್ ಮಾಡುವ ಇಲಾಖಾ ಹಾಗೂ ಹೊರಗುತ್ತಿಗೆಯ ಎಲ್ಲಾ ಸಿಬ್ಬಂದಿ ಗಳು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
ನಿಯಮಗಳನ್ನು ಪಾಲಿಸಬೇಕು ಎಂದು ಆದೇಶ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

More from the blog

ಪುತ್ತೂರು : ಅಕ್ರಮ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ – ನಾಲ್ವರ ಬಂಧನ

ಪುತ್ತೂರು : ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿ ದ್ದಾರೆ ಮೊಹಮ್ಮದ್ ಹರ್ಷದ್...

ಕೊರಗ ಸಮುದಾಯದ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ತಹಶೀಲ್ದಾರ್ ಭೇಟಿ, ಪ್ರತಿಭಟನೆ ಹಿಂಪಡೆದ ಹೋರಾಟಗಾರರು

ಬಂಟ್ವಾಳ: ಬಂಟ್ವಾಳ ಆಡಳಿತ ಸೌಧದ ಕಚೇರಿ ಮುಂಭಾಗದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ ಕೇರಳ, ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಕೃಷಿ ಭೂಮಿ ಮಂಜೂರಾತಿ,...

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...