ಇರಾ: ಇರಾ ಶ್ರೀಸೋಮನಾಥೇಶ್ವರ ದೇವಸ್ಥಾನದ ಮುಖ್ಯ ದ್ವಾರದ ಬಳಿ ಸಣ್ಣ ನೀರಾವರಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ತಡೆಗೋಡೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಕಾಮಗಾರಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಶಿಲಾನ್ಯಾಸಗೈದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮುಂದಿನ ದಿನಗಳಲ್ಲಿ ಸಮಗ್ರವಾಗಿ ಮಂಗಳೂರು ಕ್ಷೇತ್ರದ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಸರ್ಕಾರದ ಅನುದಾನದ ಮೂಲಕ ಸಮಗ್ರ ಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ಪ್ರಯತ್ನಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಕುರ್ನಾಡು ಜಿ.ಪಂ. ಸದಸ್ಯೆ ಮಮತ ಡಿ.ಎಸ್. ಗಟ್ಟಿ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ವಲಯ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಎಸ್., ಗ್ರಾ.ಪಂ. ಸದಸ್ಯ ಮೊಯಿದಿಕುಂಞಿ, ಗಣ್ಯರಾದ ಗೋಪಾಲ ಮಾಸ್ತರ್, ಜಗದೀಶ್ ಶೆಟ್ಟಿ ಗುತ್ತು, ಸುರೇಶ್ ರೈ ಇರಾ, ಶಿವಪ್ರಸಾದ್ ಶೆಟ್ಟಿ ಕರ್ನಾಟಕ ಬ್ಯಾಂಕ್ ಇರಾ, ಬಾಲಕೃಷ್ಣ ಶೆಟ್ಟಿ, ನಾಗೇಶ್ ಪೂಜಾರಿ ಕುರಿಯಾಡಿ, ಭಾಸ್ಕರ ಕುಲಾಲ್ ಸೂತ್ರಬೈಲ್, ಜಿ.ಪಂ. ಕಿರಿಯ ಅಭಿಯಂತರರು ರವಿಚಂದ್ರ ಇನ್ನಿತರರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.